ಸ್ವಸಹಾಯ ಸಂಘದಲ್ಲಿ ವ್ಯವಹಾರ ಸರಳ – ಆಕರ್ಷಕ

ಡಾ| ಎಲ್.ಎಚ್. ಮಂಜುನಾಥ್ ಬಂಧುಗಳೇ, ಬೆಳ್ತಂಗಡಿ ತಾಲೂಕಿನಲ್ಲಿ 1991ರಲ್ಲಿ ಪ್ರಾರಂಭಗೊoಡ ‘ಸ್ವಸಹಾಯ ಸಂಘ ಚಳುವಳಿ’ಗೆ ಇದೀಗ ಮೂರು ದಶಕಗಳಾಗಿವೆ. ಈ ಅವಧಿಯಲ್ಲಿ ಅನೇಕ ಸಾಧನೆಗಳನ್ನು ಪಟ್ಟಿ ಮಾಡಬಹುದು. ಬ್ಯಾಂಕ್ ವ್ಯವಹಾರಗಳನ್ನು ಸ್ವಸಹಾಯ ಸಂಘದ ಬಾಗಿಲಿಗೆ ತಂದಿರುವುದು ವಿಶೇಷ ಸಾಧನೆ ಎಂದು ಹೇಳಬಹುದು. ಸಾಮಾನ್ಯ ಜನರಿಗೆ ಬ್ಯಾಂಕಿನ ಖಾತೆಯನ್ನು ತೆರೆಯಿಸಿಕೊಟ್ಟಿದ್ದಲ್ಲದೆ ಸಂಘದಿoದ ಅವರಿಗೆ ದೊರೆಯುವ ಪ್ರಗತಿನಿಧಿ ಮೊತ್ತವನ್ನು ಅವರ ಖಾತೆಗೆ ತಲುಪುವಂತೆ ಮಾಡಿದ್ದು ಈ ಚಳುವಳಿಯ ಹೆಗ್ಗಳಿಕೆ. ಪ್ರಾರಂಭದಲ್ಲಿ ಸಣ್ಣ ಮೊತ್ತದ ಪ್ರಗತಿನಿಧಿ ಸಾಲದಿಂದ ಪ್ರಾರಂಭಗೊoಡ ಯೋಜನೆ, ತಮಗೆ […]

ಕೆಲಸ ಮತ್ತು ಕರ್ತವ್ಯ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಮ್ಮೆ ಒಂದು ಕೆಲಸವನ್ನು ಹಿಡಿದ ಬಳಿಕ ನಮಗೆ ನಿರಂತರವಾಗಿ ಆ ಬಗ್ಗೆ ಎಚ್ಚರಿಕೆ ಇರಬೇಕು. ಯಾಕೆಂದರೆ ಒಬ್ಬ ಡ್ರೈವರ್ ಆದವನು ಎರಡು ದಿವಸ ಒಳ್ಳೆಯ ಡ್ರೈವಿಂಗ್ ಮಾಡುತ್ತೇನೆ. ಮತ್ತೆ ಮಾಡುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಬಸ್ ಡ್ರೈವರ್ ನಿವೃತ್ತಿ ಆಗುವವರೆಗೆ ಎಷ್ಟು ಎಚ್ಚರದಲ್ಲಿರಬೇಕು ಎಂದರೆ ನೂರಾರು ಜನರ ಜೀವ ಅವನ ಕೈಯ್ಯಲ್ಲಿರುತ್ತದೆ. ಹಾಗೆಯೇ ನೂರಾರು ಜನರ ಭವಿಷ್ಯ ಯೋಜನೆಯ ಕಾರ್ಯಕರ್ತರ ಕೈಯಲ್ಲಿದೆ. ಹಾಗಿರುವಾಗ ಯೋಜನೆಯ ಕಾರ್ಯಕರ್ತರು ತಮ್ಮ ಪ್ರತಿದಿನದ ಕೆಲಸವನ್ನು ಸುಧಾರಣೆ […]

ಹಳ್ಳಿ ಹಳ್ಳಿಗೂ ಸದ್ದಿಲ್ಲದೇ ಸಿ.ಎಸ್.ಸಿ.ಯಿಂದ ಉಚಿತ ಕಾನೂನು ಸೇವೆ

ಅನಿಲ್ ಕುಮಾರ್ ಎಸ್. ಎಸ್. ನಾನು ಬ್ಯಾಂಕ್‌ನ ವೃತ್ತಿಯಲ್ಲಿದ್ದಾಗ ಎಷ್ಟೋ ಜನ ತಮ್ಮ ಭೂಮಿಯ ದಾಖಲೆಗಳನ್ನು ತಂದು ಕೃಷಿ ಅಥವಾ ಗೃಹ ಸಾಲಗಳನ್ನು ಕೇಳುತ್ತಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಹೆಸರು ಕಾಣುತ್ತಿರಲಿಲ್ಲ, ಬದಲಾಗಿ ಅವರ ಅಜ್ಜನ ಹೆಸರು ಇರುತ್ತಿತ್ತು. ಯಾಕೆ ದಾಖಲೆ ವರ್ಗಾವಣೆ ಮಾಡಿಕೊಂಡಿಲ್ಲ ಎಂದು ಕೇಳಿದರೆ ತಮ್ಮ ಪೂರ್ವಜರು ಮಾಡಲಿಲ್ಲ ಎಂದು ಹೇಳುತ್ತಿದ್ದರು. ಹಿಂದಿನ ತಲೆಮಾರಿನವರು ಯಾವುದೇ ಸರ್ವೆಗಳನ್ನು ಮಾಡದೇ ಕೇವಲ ಕಣ್ಣಂದಾಜಿನಲ್ಲಿ ತಮ್ಮ ಮಕ್ಕಳಿಗೆ ಭೂಮಿಯನ್ನು ಹಂಚಿಕೆ ಮಾಡುತ್ತಿದ್ದರು. ಮುಂದಿನ ತಲೆಮಾರಿಗೆ ಆ ಭೂಮಿ […]

ಆರೋಗ್ಯ ಕೆಡಿಸುವ ಚಿಂತೆಗಳು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮನುಷ್ಯನಿಗೆ ಎಷ್ಟೇ ಸೌಕರ್ಯಗಳಿದ್ದರೂ ಒಂದಲ್ಲ ಒಂದು ಚಿಂತೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸಂಸಾರದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳು, ಅವಶ್ಯಕತೆಗಳು, ಪ್ರೀತಿ – ಪ್ರೇಮ ಮುಂತಾದ ಭಾವಗಳು ಚಿಂತೆಗೆ ಕಾರಣವಾಗುತ್ತವೆ. ಎಷ್ಟೋ ವೇಳೆ ದಾಂಪತ್ಯದಲ್ಲಿ, ತಂದೆ – ತಾಯಿ ಮತ್ತು ಮಕ್ಕಳ ಮಧ್ಯೆ, ವ್ಯವಹಾರದಲ್ಲಿ, ಆಪ್ತಸ್ನೇಹಿತರೊಂದಿಗೆ ಬರುವಂತಹ ಸಣ್ಣಪುಟ್ಟ ಮನಸ್ತಾಪಗಳು ಮತ್ತು ತಪ್ಪು ಗ್ರಹಿಕೆಗಳೂ ಚಿಂತೆಗೆ ಕಾರಣವಾಗುತ್ತವೆ ಮತ್ತು ದುಃಖಕ್ಕೂ ಇವೇ ಮೂಲವಾಗಬಹುದು. ಇದರಿಂದ ಜನರು ಕೊರಗಲು ಪ್ರಾರಂಭಿಸುತ್ತಾರೆ. ಹಾಗಾಗಿ ಚಿಂತೆಯನ್ನು ಸ್ವೀಕರಿಸುವುದು […]