ಧರ್ಮದ ಸತ್ವ ಪರೀಕ್ಷೆ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಯಕ್ಷಗಾನದ ಕಥಾ ಹಂದರ ಹೇಗಿತ್ತೆಂದರೆ; ಒಬ್ಬ ರಾಜನು ಉತ್ತಮ ರೀತಿಯಲ್ಲಿ ಪ್ರಜೆಗಳನ್ನು ಪರಿಪಾಲಿಸುತ್ತಾ ರಾಜ್ಯವನ್ನು ಮುನ್ನಡೆಸುತ್ತಿದ್ದ. ಒಂದೊಮ್ಮೆ ನಾರದ ಮಹರ್ಷಿಗಳು ಆ ರಾಜನ ಬಳಿ ಬಂದು ಆತನನ್ನು ಉದ್ದೇಶಿಸಿ ‘ಮಹಾರಾಜ, ನೀನೇನೋ ನಿನ್ನಷ್ಟಕ್ಕೆ ರಾಜ್ಯಭಾರ ಮಾಡುತ್ತಾ ಇದ್ದೀಯಾ! ಆದರೆ ನಿನ್ನ ತಂದೆಯನ್ನು ಕೊಂದು, ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋದ ನೆರೆಯ ರಾಜ್ಯದ ರಾಜನು ತನ್ನ ಸೈನ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದಾನೆ. ಅವನು ನಿನ್ನ ತಂದೆಯನ್ನು […]

ಮಹಾತ್ಮರ ಕನಸುಗಳು ಮಹಾತ್ಮರಿಂದಲೇ ಸಾಕಾರ

‘ನಿರಂತರ’ದ ಸಮಸ್ತ ಓದುಗರಿಗೆ ಗಾಂಧಿ ಜಯಂತಿಯ ಶುಭಾಶಯಗಳು. ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಎಂಟು ದಶಕಗಳ ಹಿಂದೆಯೇ ‘ಭವ್ಯ ಭಾರತ’ದ ಕನಸನ್ನು ಕಂಡಿದ್ದರು. ನಮ್ಮ ದೇಶ ಶ್ರೀರಾಮ ರಾಜ್ಯವಾಗಬೇಕೆಂಬ ಮಹತ್ವಕಾಂಕ್ಷೆಯನ್ನು ಹೊಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಸಾಹತು ಆಡಳಿತದಿಂದ ಬಹಳಷ್ಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಅನುಭವಿಸಿದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣಕ್ಕೆ ಚೇತರಿಸಿಕೊಳ್ಳಲಾಗಲಿಲ್ಲ. ಸ್ವತಂತ್ರರಾದ ನಂತರ ಅನೇಕ ವರ್ಷಗಳ ಕಾಲ ನಮ್ಮ ದೇಶ ಹಲವಾರು ಭೀಕರ ಸಮಸ್ಯೆಗಳನ್ನು ಎದುರಿಸುತ್ತಿತ್ತು. […]

ಹೃದಯ ಜೋಪಾನ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಾನವ ದೇಹದ ಎಲ್ಲಾ ಭಾಗಗಳಿಗಿಂತ ಬಲಿಷ್ಠವಾದ ಸ್ನಾಯುಗಳನ್ನು ಹೊಂದಿರುವುದು ‘ಹೃದಯ’ ಎನ್ನುತ್ತಾರೆ. ನಿರಂತರವಾಗಿ ದುಡಿಯಲು ಬೇಕಾದ ಕ್ಷಮತೆ ಸ್ನಾಯುಗಳಿಂದ ನಮಗೆ ದೊರೆಯುತ್ತದೆ. ಮನುಷ್ಯನಲ್ಲಿರುವ ಶಕ್ತಿ ಅವನ ಹೃದಯದ ಸ್ನಾಯುಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿದೆ. ಮಾನಸಿಕ ಖಿನ್ನತೆ, ಒತ್ತಡ, ಹೀಗೆ ಎಷ್ಟೇ ಚಿಂತೆಗಳು ಇದ್ದರೂ ಅವೆಲ್ಲವನ್ನೂ ಸಹಿಸಿಕೊಂಡು ದೈನಂದಿನ ಕೆಲಸದಲ್ಲಿ ಯಾವುದೇ ವ್ಯತ್ಯಯವಾಗದಂತೆ ಕಾರ್ಯನಿರ್ವಹಿಸುವ ಒಂದು ಅಂಗ ಇದ್ದರೆ ಅದು ಹೃದಯ. ‘ಹೃದಯ’ ನಮ್ಮನ್ನು ನಿರಂತರವಾಗಿ ಸಲಹುತ್ತಿದೆ ಎಂದಾದರೆ ಅಂಥಾ ಹೃದಯವನ್ನು ಸಲಹುವ, ಜಾಗೃತೆಯಿಂದ […]

ಯೋಜನೆಯ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ ಸಿ.ಸಿ. ಖಾತೆ ವ್ಯವಸ್ಥೆಯಿಂದ ಸಿಗುವ ಪ್ರಯೋಜನಗಳು

ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಹಿಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‌ಗಳಿಗೆ ಅಧಿಕೃತ ಬಿ.ಸಿ. ಸಂಸ್ಥೆಯಾಗಿ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಗ್ರಾಮೀಣ ಬಡಜನರಿಗೆ ಬ್ಯಾಂಕ್‌ನಿoದ ಆರ್ಥಿಕ ಸೌಲಭ್ಯವನ್ನು ಒದಗಿಸುತ್ತಿರುವ ಬಗ್ಗೆ ತಿಳಿಸಲಾಗಿತ್ತು. ಈ ಬಾರಿ ಸ್ವಸಹಾಯ ಸಂಘಗಳಿಗೆ ಯೋಜನೆಯ ವ್ಯವಸ್ಥೆಯಲ್ಲಿ ಬ್ಯಾಂಕ್‌ನಿoದ ಸಿಗುವ ವಿಶೇಷ ‘ಆಂತರಿಕ ಸಾಲ’ ಸೌಲಭ್ಯದ ಬಗ್ಗೆ ತಿಳಿದುಕೊಳ್ಳೋಣ.ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿ ನೂತನವಾಗಿ ರಚನೆಗೊಂಡ ಸ್ವಸಹಾಯ ಸಂಘಗಳಿಗೆ ನಿರಂತರ ತರಬೇತಿಯನ್ನು ನೀಡಿ ಅವುಗಳನ್ನು ಪ್ರಬುದ್ಧ ಸಂಘಗಳನ್ನಾಗಿ ಮಾಡಲಾಗುತ್ತದೆ. ಸಂಘದ ಸದಸ್ಯರಿಗೆ […]

ಬಾಂಧವ್ಯ ಬೆಸುಗೆಗೆ ಹಬ್ಬಗಳು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಅಮ್ಮ ಇವತ್ತು ಕಡುಬು ಮಾಡ್ತೀಯಾ? ಮಾವಂದಿರು ಬರುತ್ತಾರೆ, ದೀಪಾವಳಿಗೆ ಹೊಸ ಬಟ್ಟೆ, ತಿಂಡಿ, ಸುರುಸುರು ಕಡ್ಡಿ, ಪಟಾಕಿ ತರುತ್ತಾರೆ. ಕಡುಬು ಜೊತೆಗೆ ಪಾಯಸ, ಮತ್ತೆ ರಾತ್ರಿಗೆ ದೋಸೆ ಮಾಡ್ತೀಯಲ್ವಾ! ನನಗೆ ತುಂಬಾ ಇಷ್ಟ’ ಹೀಗೆ ಮಗು ತಾಯಿಯಲ್ಲಿ ತನ್ನ ಬೇಡಿಕೆಗಳನ್ನು ಹೇಳುತ್ತಿದ್ದುದ್ದನ್ನು ಕಂಡು ಹಬ್ಬಗಳಲ್ಲಿ ಅಡಗಿರುವ ಬಾಂಧವ್ಯಗಳ ಮಧುರತೆಯ ನೆನಪು ನನ್ನ ಮನದಲ್ಲಿ ಮೂಡಿತು. ಹಬ್ಬಗಳು ಅಂದರೆ ಅದೆಷ್ಟು ಉತ್ಸಾಹ, ಅದೆಷ್ಟು ವೈವಿಧ್ಯ. ಹಬ್ಬ – ಹರಿದಿನಗಳನ್ನು ಎಲ್ಲರೂ ಅತ್ಯಂತ ಖುಷಿಯಿಂದ […]

10 ಲಕ್ಷಕ್ಕೂ ಹೆಚ್ಚು ಕೆ.ವಿ.ಕೆ. ಕ್ರಾಪ್‌ ಹೆಲ್ತ್‌ಕೇರ್ ಸೇವೆಗಳನ್ನುನೀಡಿದ ಯೋಜನೆಯ ಸಿ.ಎಸ್.ಸಿ. ಕೇಂದ್ರಗಳು

ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ನಮ್ಮ ದೇಶದ ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ಅನೇಕ ಸಂಶೋಧನೆ ಹಾಗೂ ಅಭಿವೃದ್ಧಿಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ನಡೆಸಿಕೊಂಡು ಬಂದಿರುತ್ತವೆ. 1974ರಲ್ಲಿ ಆರಂಭಗೊoಡ ಕೃಷಿ ವಿಜ್ಞಾನ ಕೇಂದ್ರಗಳ ಸಂಪೂರ್ಣ ಧನ ಸಹಾಯವನ್ನು ಭಾರತ ಸರಕಾರವು ನಡೆಸಿಕೊಂಡು ಬಂದಿದ್ದು, ರಾಜ್ಯ ಸರಕಾರಗಳು ಕೃಷಿ ವಿಜ್ಞಾನ ಕೇಂದ್ರಗಳಿಗೆ ತನ್ನದೇ ಆದ ನೆರವನ್ನು ನೀಡಿರುತ್ತವೆ. ಒಟ್ಟಿನಲ್ಲಿ ಕೃಷಿ ಅಭಿವೃದ್ಧಿಗಾಗಿ ಸರಕಾರವು ಕೃಷಿ ವಿಜ್ಞಾನ ಕೇಂದ್ರವನ್ನು ಒಂದು ಪ್ರಮುಖ ಸಂಸ್ಥೆಯಾಗಿ ಅಭಿವೃದ್ಧಿಪಡಿಸುತ್ತಿದೆ. ಕೃಷಿ ವಿಜ್ಞಾನ […]