ಜೀವನದ ಬಣ್ಣ ಬೂದು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಈ ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದೆಂಬುದು ಎಲ್ಲೂ ಇಲ್ಲ. ನಮ್ಮ ಯೋಚನೆ ನಮ್ಮನ್ನು ಆ ರೀತಿ ಚಿಂತಿಸುವAತೆ ಮಾಡುತ್ತದೆ. ಗುಲಾಬಿಯನ್ನು ನೋಡುವಾಗ ದೇವರು ಮುಳ್ಳುಗಳನ್ಯಾಕೆ ಈ ಗಿಡದಲ್ಲಿ ಸೃಷ್ಟಿಸಿದರು ಎಂದು ಒಬ್ಬ ಚಿಂತಿಸಿದರೆ, ಇನ್ನೊಬ್ಬ ಮುಳ್ಳುಗಳ ಮಧ್ಯೆ ಇಷ್ಟು ಸುಂದರವಾದ ಹೂವನ್ನಿಟ್ಟ ದೇವರಿಗೆ ಧನ್ಯವಾದ ಹೇಳಬೇಕೆಂದು ಬಯಸುತ್ತಾನೆ. ಮನೆಯಲ್ಲಿ ಯಾವುದೇ ಒಂದು ವಸ್ತುವನ್ನು ಕಂಡರಾಗದು ಅಂದಾಗ ಅದನ್ನು ಸುಲಭವಾಗಿ ಬದಲಿಸಬಹುದು. ಉದಾಹರಣೆಗೆ ತನ್ನ ಕೋಣೆಯಲ್ಲಿರುವ ಸೋಫಾ ಹಳೆಯದಾಗಿ ಬಣ್ಣ ಕಳೆದುಕೊಂಡಿದೆ ಅದನ್ನು ನೋಡಿದಾಗಲೆಲ್ಲಾ […]

ಕೂಲಿಗಾಗಿ ಕಾಳು ಸೃಷ್ಠಿಸಿದ ಸ್ವಾಭಿಮಾನದ ಬದುಕು

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಕಳೆದ ಸಂಚಿಕೆಯಲ್ಲಿ ‘ಕೃಷಿ ಯಂತ್ರಧಾರೆ’ಯ ಮೂಲಕ ರೈತರ ಪಾಲಿಗೆ ಯೋಜನೆ ನೀಡುತ್ತಿರುವ ಸೇವೆಗಳ ಬಗ್ಗೆ ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಸಮುದಾಯದ ಅನೇಕ ಸೇವಾಕಾರ್ಯಗಳ ಬಗ್ಗೆ ಒಂದೊoದಾಗಿ ತಿಳಿದುಕೊಳ್ಳೋಣ.ಸಮುದಾಯ ಕಾರ್ಯಕ್ರಮಗಳ ಮೂಲಕ ಬಡವರ, ದುರ್ಬಲರ ಜೀವನಮಟ್ಟವನ್ನು ಉನ್ನತೀಕರಿಸುವ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶಕ್ಕಾಗಿಯೇ ಶ್ರೀ ಹೆಗ್ಗಡೆಯವರು 1982ರಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯನ್ನು ಹುಟ್ಟುಹಾಕಿದರು. ಆರಂಭದ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗಾಗಿ ಹಳ್ಳಿಯ ಪ್ರತಿ ಮನೆ ಮನೆಗಳಿಗೆ ತೆರಳಿ ತಳಮಟ್ಟದ […]

ಭವಿಷ್ಯ ಭದ್ರಗೊಳಿಸುವ ಭವಿಷ್ಯನಿಧಿ

ರವಿಚಂದ್ರ ಚಾರ್ಮಾಡಿ ನೌಕರನೊಬ್ಬ ನಿವೃತ್ತನಾದ ನಂತರ ಅವನ ಭವಿಷ್ಯತ್ತಿನ ಸುರಕ್ಷತೆಗಾಗಿ ‘ನೌಕರರ ಭವಿಷ್ಯನಿಧಿ’ ಸಂಸ್ಥೆಯಿoದ ನಿರ್ವಹಿಸಲ್ಪಡುವ ಉಳಿತಾಯ ಕಾರ್ಯಕ್ರಮವನ್ನು ಭವಿಷ್ಯನಿಧಿ ಎಂದು ಕರೆಯುತ್ತಾರೆ. ಇದಕ್ಕೆ ಪಿ.ಎಫ್., ಇ.ಪಿ.ಎಫ್. ಎಂಬ ಹೆಸರುಗಳು ಇವೆ. ಭವಿಷ್ಯನಿಧಿಗೆ ನೌಕರರು ಮತ್ತು ಉದ್ಯೋಗದಾತರಿಬ್ಬರೂ ವಂತಿಗೆ/ಕೊಡುಗೆಯನ್ನು ನೀಡಬೇಕಾಗುತ್ತದೆ.ಪಿ.ಎಫ್. ಯಾರಿಗೆ ಲಭ್ಯ? : ಯಾವ ಸಂಸ್ಥೆ ಕನಿಷ್ಠ 20 ಮತ್ತು ಅದಕ್ಕಿಂತ ಹೆಚ್ಚಿನ ನೌಕರರನ್ನು ಹೊಂದಿದೆಯೋ ಆ ಸಂಸ್ಥೆಗಳು ನೌಕರರ ಪಿ.ಎಫ್. ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದ್ದರಿಂದ ಇಂದು ಹೆಚ್ಚಿನೆಡೆ ಪಿ.ಎಫ್. ಸೌಲಭ್ಯದ ವ್ಯವಸ್ಥೆಯಿದೆ. […]

ಒಲವೇ ಜೀವನ ಲೆಕ್ಕಾಚಾರ

ಒಲವೇ ಜೀವನ ಲೆಕ್ಕಾಚಾರ ಒಮ್ಮೆ ಬೀಡಿನಲ್ಲಿ ಅಳುತ್ತಿದ್ದ ಮಗುವನ್ನು ತಾಯಿ ಹೊರಗೆ ಕರೆದುಕೊಂಡು ಹೋದಳು, ತುಸು ಹೊತ್ತಾದ ಮೇಲೆ ನನ್ನನ್ನು ಭೇಟಿಯಾಗಲು ಮತ್ತೆ ಬೀಡಿಗೆ ಮರಳಿ ಬಂದಳು. ಅಳುತ್ತಿದ್ದ ಮಗು ಸುಮ್ಮನಾಗಿತ್ತು. ಒಮ್ಮೆ ಬಂದು ಹೋಗಿ ಮತ್ತೆ ಬಂದದ್ದನ್ನು ನಾನು ಗಮನಿಸಿದ್ದೆ ಅಂದುಕೊoಡು ‘ಮಗೂವಿಗೆ ಹಸಿವಾಗಿತ್ತು ಹಾಗೆ ಹೊರಗೆ ಹೋದೆ, ಒಂದು ಐದು ತುತ್ತು ಅನ್ನ ತಿನ್ನಿಸಿದೆ ಸ್ವಾಮಿ, ಮಗು ಸುಮ್ಮನಾಯಿತು’ ಎಂದಳು. ಮತ್ತೊಂದು ಸನ್ನಿವೇಶದಲ್ಲಿ ದೇವಸ್ಥಾನದ ಬಳಿ ಒಬ್ಬಳು ಹಗ್ಗದ ಮೇಲೆ ನಡೆಯುತ್ತಾ ಸರ್ಕಸ್ ಮಾಡುವುದನ್ನು […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಭಜನೆ ಎನ್ನುವ ಪದವು ಮೂಲತಃ ಸಂಸ್ಕೃತದಿoದ ಬಂದಿರುವುದಾಗಿದೆ. ಸಂಸ್ಕೃತದಲ್ಲಿ ‘ಭಜ್’ ಎಂದರೆ ಪೂಜಿಸು, ಅರ್ಪಿಸು ಎನ್ನುವ ಅರ್ಥ ನೀಡುತ್ತದೆ. ಭಕ್ತಿಯಿಂದ ಹಾಡುವುದರ ಮೂಲಕ ಭಗವಂತನನ್ನು ಭಜಿಸುವುದೇ ಭಜನೆ ಆಗಿದೆ. ನಮ್ಮ ದೇಶದಲ್ಲಿ ಭಜನಾ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ, ಮಹಾಭಾರತದಲ್ಲೂ ಭಜನೆಯ ಬಗ್ಗೆ ಉಲ್ಲೇಖ ಇರುವುದು ಭಜನೆಯ ಪ್ರಾಚೀನತೆಯನ್ನು ಎತ್ತಿ ತೋರಿಸುತ್ತದೆ. ಭಜನಾ ಸಂಸ್ಕೃತಿ ನೂರಾರು ಶ್ರೇಷ್ಠ ದಾಸರನ್ನು, ಕೀರ್ತನೆಗಾರರನ್ನು, ಬರಹಗಾರರನ್ನು ಸೃಷ್ಠಿಸಿದೆ. ಹತ್ತಾರು ಕಂಠಸಿರಿಗಳನ್ನು ಪರಿಚಯಿಸಿದೆ. ಭಕ್ತಿ ಭಾವಗಳ […]