ಬದುಕುವುದ್ಯಾಕೆ?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜಗತ್ತಿನಾದ್ಯಂತ ಪರಿಹಾರ ಕಾಣದ ಸಾಕಷ್ಟು ಸಮಸ್ಯೆಗಳಿದ್ದರೂ ಜನರು ಸಂತೋಷದಿAದ ಜೀವನ ನಡೆಸುತ್ತಿದ್ದಾರೆ. ಅಂದರೆ ಕಾಡುವ ಕೈಗಳು, ಸಮಸ್ಯೆಗಳಿಗಿಂತ ಕಾಪಾಡುವ ಶಕ್ತಿ, ಕೈಗಳ ಬಗ್ಗೆ ಜನರು ಇನ್ನೂ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಎಂದೇ ಅರ್ಥ. ಗುರುನಾನಕರು ಒಂದು ಹಳ್ಳಿಗೆ ಹೋಗಿದ್ದಾಗ ಆ ಹಳ್ಳಿಯ ಮಂದಿ ಅವರಿಗೆ ಅದ್ಧೂರಿಯ ಸ್ವಾಗತ ಕೋರಿ ಗೌರವದಿಂದ ನೋಡಿಕೊಂಡರು. ಗುರುಗಳು ಹಳ್ಳಿಯಿಂದ ಹೊರಡುವ ಸಮಯದಲ್ಲಿ ‘ನೀವೆಲ್ಲಾ ಚದುರಿ ಹೋಗಿ ಯಾರೂ ಒಂದೆಡೆ ಇರಬೇಡಿ’ ಅಂದರು. ಇದನ್ನು ಕೇಳಿ ಹಳ್ಳಿಗರಿಗೆ ಆಶ್ಚರ್ಯದೊಂದಿಗೆ […]

ಆರ್ಥಿಕ ಸಬಲೀಕರಣದ ಜೊತೆಯಲ್ಲಿಯೆ ಸಾಮಾಜಿಕ ಸಬಲೀಕರಣ

ಹಿಂದಿನ ಸಂಚಿಕೆಯಲ್ಲಿ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ‘ಕಂತು ವಸೂಲಾತಿ’ ಪ್ರಕ್ರಿಯೆಗೆ ಆಸ್ಪದ ಕೊಡದೆ ಪ್ರತೀ ಸದಸ್ಯರು ಜವಾಬ್ದಾರಿಯಿಂದ ಸಮರ್ಪಕವಾಗಿ ‘ಮರುಪಾವತಿ’ ಮಾಡುತ್ತಾರೆಂದು ತಿಳಿಸಲಾಗಿತ್ತು.ಈ ಜವಾಬ್ದಾರಿಯುತ ವ್ಯವಸ್ಥೆಯನ್ನು ಸದಸ್ಯರೇ ಕಾಪಾಡಿಕೊಳ್ಳಲು ಮುಖ್ಯವಾದ ಕಾರಣಗಳು ಯೋಜನೆಯ ಸ್ವಸಹಾಯ ಸಂಘಗಳು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸುವ ಒಂದು ಪರಿಣಾಮಕಾರಿ ವೇದಿಕೆ ಆಗಿರುವುದಾಗಿದೆ. ಸ್ವಸಹಾಯ ಸಂಘಗಳು ರಚನೆಯಾದ ಪ್ರಾರಂಭದಿoದಲೇ 6 ಪ್ರಮುಖ ವಿಸ್ತೃತವಾದ ತರಬೇತಿಗಳನ್ನು ನೀಡುವುದರ ಮೂಲಕ ಸಂಘಕ್ಕೆ ಗಟ್ಟಿಯಾದ ಅಡಿಪಾಯವನ್ನು ಹಾಕಲಾಗುತ್ತದೆ. ಆ ತರಬೇತಿಗಳ ವಿವರಗಳನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೆವು. […]

ತಂಬಾಕುಮುಕ್ತ ಸಮಾಜ ಕಟ್ಟೋಣ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರುಟ್ಟೋಣ ಪ್ರತಿ ವರ್ಷ ಮೇ 31 ಅನ್ನು ‘ವಿಶ್ವ ತಂಬಾಕುಮುಕ್ತ ದಿನ’ವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದ ಮೂಲಕ ಯಾರು ಧೂಮಪಾನ, ತಂಬಾಕು ಸೇವನೆ ಮಾಡುತ್ತಾರೋ ಅವರನ್ನು ದುಶ್ಚಟಗಳ ದಾಸರಾಗದಂತೆ ಎಚ್ಚರಿಸಲಾಗುತ್ತಿದೆ.ಜನರಲ್ಲಿ ದುಶ್ಚಟಗಳು ಹೆಚ್ಚಳವಾದಾಗ ಅವುಗಳನ್ನು ನಿಯಂತ್ರಿಸಲು ಸರಕಾರವು ಜಾಗೃತಿ, ಮನವರಿಕೆ, ಎಚ್ಚರಿಕೆ, ದಂಡ ಪ್ರಯೋಗ, ತೆರಿಗೆ ಹೆಚ್ಚಳ ಹೀಗೆ ವಿವಿಧ ಪ್ರಯತ್ನಗಳನ್ನು ಮಾಡಿದೆ, ಮಾಡುತ್ತಿದೆ. ಮದ್ಯ, ಹೊಗೆಸೊಪ್ಪು ಹಾಗೂ ಅದರ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದರೆ ಜನರಿಗೆ ಅದನ್ನು ಕೊಂಡುಕೊಳ್ಳಲು ಕಷ್ಟವಾಗುತ್ತದೆ. […]

ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಕ್ಷೇತ್ರದ ಬೀಡಿಗೆ ಬರುವ ಅನೇಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವುದು ಧರ್ಮಾಧಿಕಾರಿಗಳಾದ ಶ್ರೀ ಹೆಗ್ಗಡೆಯವರ ನಿತ್ಯ ಕಾಯಕವಾಗಿತ್ತು. ಹೆಚ್ಚಿನ ಸಮಸ್ಯೆಗಳಿಗೆ ಆ ಸಂದರ್ಭಕ್ಕೊ0ದು ಪರಿಹಾರವನ್ನು ಸೂಚಿಸುತ್ತಿದ್ದರು. ಆದರೆ ಅವುಗಳಿಗೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆ0ಬುವುದು ಶ್ರೀ ಹೆಗ್ಗಡೆಯವರ ಮಹಾನ್ ಚಿಂತನೆಯಾಗಿತ್ತು. ಏಕಾಂತದಲ್ಲಿರುವಾಗಲೆಲ್ಲ ಈ ಬಗ್ಗೆ ಸುದೀರ್ಘವಾಗಿ ಯೋಚನೆಗಳನ್ನು ಮಾಡುತ್ತಿದ್ದರು. ದಿನಕಳೆದಂತೆ ಕೆಲವೊಂದು ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳತೊಡಗಿದರು. ಅಂತಹ ಕಾರ್ಯಕ್ರಮಗಳಲ್ಲಿ ಉಚಿತ ಸಾಮೂಹಿಕ ವಿವಾಹವು ಒಂದು. […]

ಸಾಮಾನ್ಯ ಜ್ಞಾನ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಅವನಿಗೆ ಸಾಮಾನ್ಯ ಜ್ಞಾನವೇ ಇಲ್ಲ’ ಎಂಬ ಪದ ಪ್ರಯೋಗವಾಗುವುದನ್ನು ನಾವು ಹಲವೆಡೆ, ಹಲವು ಸಂದರ್ಭಗಳಲ್ಲಿ ಕೇಳುತ್ತಿರುತ್ತೇವೆ. ‘ಸಾಮಾನ್ಯ ಜ್ಞಾನ’ ಎನ್ನುವುದು ‘ಅಸಮಾನ್ಯವಾದ ಜ್ಞಾನ’ವೇ ಆಗಿದೆ. ಇದು ಮಾನವನ ಬದುಕಿನಲ್ಲಿ ಇರಬೇಕಾದ ಅಗತ್ಯ ಗುಣಗಳಲ್ಲಿ ಒಂದಾಗಿದ್ದು ಇದನ್ನು ಬೆಳೆಸಿಕೊಳ್ಳುವಲ್ಲಿ ಹುಮ್ಮಸ್ಸು ತೋರುವವರ ಸಂಖ್ಯೆ ಬಹಳ ವಿರಳ. ಯಾಕೆಂದರೆ ಮಕ್ಕಳಿಗೆ ಇದು ಪಾಠ ಪುಸ್ತಕದಲ್ಲಿ ಲಭ್ಯವಿರುವುದಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಈ ಕುರಿತು ಪ್ರಶ್ನೆಗಳು ಬರುವುದಿಲ್ಲ. ಒಂದಷ್ಟು ಜ್ಞಾನ ಸಂಪತ್ತು ತನ್ನ ಬಳಿ ಇದ್ದರೂ ‘ನನಗೆ […]

ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ

ಅನಿಲ್ ಕುಮಾರ್ ಎಸ್.ಎಸ್. ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಪ್ರಗತಿನಿಧಿ ಸಾಲ ವಿತರಣೆಗೆ ಅತ್ಯಂತ ಪ್ರಾಶಸ್ತö್ಯ ನೀಡಲಾಗುವುದೆಂದು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೆವು.ತಾವು ಪಡೆದುಕೊಂಡ ಸಾಲದ ಮರುಪಾವತಿಯ ಎಲ್ಲಾ ವಿವರಗಳನ್ನು ‘ಮರುಪಾವತಿ ಚೀಟಿ’ಯ ಮೂಲಕ ಸದಸ್ಯರು ತಿಳಿದುಕೊಳ್ಳುತ್ತಾರೆ. ಪ್ರಗತಿನಿಧಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಮರುಪಾವತಿ ಚೀಟಿಯನ್ನು ಪಡೆದುಕೊಂಡು ತಾವು ಪ್ರತೀ ವಾರ ಕಟ್ಟಿದ ಮೊತ್ತವನ್ನು ಆ ಮರುಪಾವತಿ ಚೀಟಿಯ ಕೊನೆಯ ಕಾಲಂನಲ್ಲಿ ನಮೂದಿಸಿ ತಮ್ಮ ಮರುಪಾವತಿಯ ಲೆಕ್ಕಾಚಾರವನ್ನು ಅತ್ಯಂತ ನಿಖರತೆಯಿಂದ ನಿರ್ವಹಿಸುತ್ತಾರೆ. […]

ಹುಡುಗಿ ನೋಡಲು ಹೊರಟವರು ಶಿಬಿರ ಸೇರಿದರು

ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಆ ದಿನಗಳಲ್ಲಿ ನಾಲ್ಕು ಮಕ್ಕಳನ್ನು ಓದಿಸುವುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂತೂ ದಿವಾಕರ್‌ರವರು ಆರನೇ ತರಗತಿಯವರೆಗೆ ಶಾಲಾ ಮೆಟ್ಟಿಲನ್ನು ಹತ್ತಿದರು. ನಂತರ ಶಿವಮೊಗ್ಗ, ಬೆಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡರು. ಇದರಿಂದ ಕೈ ಸೇರುತ್ತಿದ್ದ ಸಂಬಳ ಕಡಿಮೆಯೆಂದೆನಿಸಿದಾಗ ಮತ್ತೆ ತನ್ನ ಹುಟ್ಟೂರು ಹೊಸನಗರ ತಾಲೂಕಿನ ವಡಾಹೊಸಳ್ಳಿಗೆ ಬಂದು ಕಾಡಿನಲ್ಲಿ ಕದ್ದು ಮರ ಕತ್ತರಿಸುವ ಕೆಲಸದಲ್ಲಿ ತೊಡಗಿದರು.ಸಣ್ಣ ವಯಸ್ಸಿನಲ್ಲೆ ಮದುವೆ : ಇಪ್ಪತ್ತೊಂದು ವರ್ಷ ತುಂಬುತ್ತಿದ್ದ0ತೆ ದಿವಾಕರ್‌ರವರಿಗೆ ಮನೆಮಂದಿ ಸೇರಿ ಮದುವೆಯನ್ನು ಮಾಡಿಸಿಬಿಟ್ಟರು. ಎರಡು […]

ಬೆಲೆ ಕಟ್ಟಲಾಗದ ಮಧುರ ನೆನಪುಗಳು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಇದು ನನಗೆ ಅಜ್ಜಿ ಕೊಟ್ಟ ಸೀರೆ, ಇದು ನನ್ನ ತಂದೆಯ ಪೆಟ್ಟಿಗೆ, ಇದು ನಮ್ಮ ಮದುವೆಯಾದಾಗ ನನ್ನ ತಾಯಿ ಕೊಡಿಸಿದ ಫ್ಯಾನು, ಇದು ನನಗೆ ದೊರೆತ ಮೊದಲ ಬಹುಮಾನದ ಬಟ್ಟಲು. ಇದರಲ್ಲೇ ಈಗಲೂ ಉಣ್ಣುತ್ತಿದ್ದೇನೆ, ಇದು ನನ್ನ ತಂದೆ ಓಡಿಸುತ್ತಿದ್ದ ಸೈಕಲ್. ಇದನ್ನು ಯಾರು ಕೇಳಿದರೂ ಕೊಡುವುದಿಲ್ಲ. ಇವೆಲ್ಲ ನನಗೆ ಅಮೂಲ್ಯ ವಸ್ತುಗಳು. ಈ ವಸ್ತುಗಳಲ್ಲಿ ನನ್ನೆಲ್ಲ ನೆನಪುಗಳು ಅಡಗಿದೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಕಾಪಿಟ್ಟಿದ್ದೇನೆ.’ ಎಂದು ಹೇಳುವ ಅನೇಕರನ್ನು ನೋಡಿರುತ್ತೇವೆ.ತಂದೆಯ […]

ವಿಶ್ವ ಜಲ ದಿನ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಪ್ರತೀ ವರ್ಷ ಮಾರ್ಚ್ 22 ಅನ್ನು ‘ವಿಶ್ವ ಜಲ ದಿನ’ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಪ್ರತಿಯೊಂದು ದೇಶಕ್ಕೂ ಇಂದು ನೀರಿನ ಮಹತ್ವದ ಅರಿವಾಗಿದೆ. ಪ್ರಾಣವಾಯುವಿನ ನಂತರ ಪ್ರತಿಯೊಂದು ಜೀವ ಸಂಕುಲದ ಅತೀ ಅಗತ್ಯ ವಸ್ತು ಅಂದರೆ ಅದು ಜೀವಜಲ. ‘ನೀರು ಜೀವನದ ಬೇರು’ ಎಂದು ಹೇಳುತ್ತಾರೆ. ಮನುಕುಲದ ನಾಗರೀಕತೆಯ ಇತಿಹಾಸದ ಮೇಲೆ ಕಣ್ಣಾಡಿಸಿದಾಗ ನಾಗರೀಕತೆ ಪ್ರಾರಂಭವಾಗಿರುವುದು ಜೀವನದಿಗಳು ಹಾದುಹೋಗುವ ತಟಗಳಲ್ಲಿಯೇ ಎಂಬುವುದು ಸ್ಪಷ್ಟವಾಗುತ್ತದೆ. ಇದು ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಬದುಕಿನಲ್ಲಿ […]