ಬೆಲೆ ಕಟ್ಟಲಾಗದ ಮಧುರ ನೆನಪುಗಳು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಇದು ನನಗೆ ಅಜ್ಜಿ ಕೊಟ್ಟ ಸೀರೆ, ಇದು ನನ್ನ ತಂದೆಯ ಪೆಟ್ಟಿಗೆ, ಇದು ನಮ್ಮ ಮದುವೆಯಾದಾಗ ನನ್ನ ತಾಯಿ ಕೊಡಿಸಿದ ಫ್ಯಾನು, ಇದು ನನಗೆ ದೊರೆತ ಮೊದಲ ಬಹುಮಾನದ ಬಟ್ಟಲು. ಇದರಲ್ಲೇ ಈಗಲೂ ಉಣ್ಣುತ್ತಿದ್ದೇನೆ, ಇದು ನನ್ನ ತಂದೆ ಓಡಿಸುತ್ತಿದ್ದ ಸೈಕಲ್. ಇದನ್ನು ಯಾರು ಕೇಳಿದರೂ ಕೊಡುವುದಿಲ್ಲ. ಇವೆಲ್ಲ ನನಗೆ ಅಮೂಲ್ಯ ವಸ್ತುಗಳು. ಈ ವಸ್ತುಗಳಲ್ಲಿ ನನ್ನೆಲ್ಲ ನೆನಪುಗಳು ಅಡಗಿದೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಕಾಪಿಟ್ಟಿದ್ದೇನೆ.’ ಎಂದು ಹೇಳುವ ಅನೇಕರನ್ನು ನೋಡಿರುತ್ತೇವೆ.ತಂದೆಯ […]

ವಿಶ್ವ ಜಲ ದಿನ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಪ್ರತೀ ವರ್ಷ ಮಾರ್ಚ್ 22 ಅನ್ನು ‘ವಿಶ್ವ ಜಲ ದಿನ’ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಪ್ರತಿಯೊಂದು ದೇಶಕ್ಕೂ ಇಂದು ನೀರಿನ ಮಹತ್ವದ ಅರಿವಾಗಿದೆ. ಪ್ರಾಣವಾಯುವಿನ ನಂತರ ಪ್ರತಿಯೊಂದು ಜೀವ ಸಂಕುಲದ ಅತೀ ಅಗತ್ಯ ವಸ್ತು ಅಂದರೆ ಅದು ಜೀವಜಲ. ‘ನೀರು ಜೀವನದ ಬೇರು’ ಎಂದು ಹೇಳುತ್ತಾರೆ. ಮನುಕುಲದ ನಾಗರೀಕತೆಯ ಇತಿಹಾಸದ ಮೇಲೆ ಕಣ್ಣಾಡಿಸಿದಾಗ ನಾಗರೀಕತೆ ಪ್ರಾರಂಭವಾಗಿರುವುದು ಜೀವನದಿಗಳು ಹಾದುಹೋಗುವ ತಟಗಳಲ್ಲಿಯೇ ಎಂಬುವುದು ಸ್ಪಷ್ಟವಾಗುತ್ತದೆ. ಇದು ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಬದುಕಿನಲ್ಲಿ […]

ನಿತ್ಯವೂ ಮಹಿಳಾ ದಿನವಾಗಲಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಾರ್ಚ್ 08 ವಿಶ್ವ ಮಹಿಳಾ ದಿನ. ಈ ದಿನದಂದು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಾಧಕರನ್ನು ಗೌರವಿಸಲಾಗುತ್ತದೆ. ವಿಚಾರಗೋಷ್ಠಿಗಳಲ್ಲಿ ಮಹಿಳಾ ಸಬಲೀಕರಣದ ಕುರಿತು ಚರ್ಚೆಗಳು ನಡೆಯುತ್ತವೆ. ಎಲ್ಲೆಡೆ ಭಾಷಣಗಳು ಕೇಳಿಬರುತ್ತವೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗುತ್ತದೆ. ಹಾಗಾದರೆ ನಿಜವಾದ ಮಹಿಳಾ ದಿನ ಎಂದರೆ ಹೇಗೆ? ಈ ದಿನ ಕೇವಲ ಒಂದೇ ದಿನಕ್ಕೆ ಸೀಮಿತವೆ? ಇದನ್ನು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಕೇಳಿಕೊಳ್ಳಬೇಕಿದೆ.ಮಹಿಳಾ ದಿನಕ್ಕೊಂದು ನಿಜವಾದ ಅರ್ಥ ಬರುವುದು ಮಹಿಳೆಯರು ಮಾಡುವ ಸಾಧನೆ […]

ಉತ್ಪಾದಕ ಹಾಗೂ ಆರ್ಥಿಕಚಟುವಟಿಕೆಗಳ ಉದ್ದೇಶಗಳಿಗೆ ಪ್ರಾಶಸ್ತ್ಯ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಹಿಂದಿನ ಸಂಚಿಕೆಯಲ್ಲಿ ಸಂಘದ ಸದಸ್ಯರಿಂದಲೇ ಪ್ರಗತಿನಿಧಿ ಸಾಲ ಮಂಜೂರಾತಿ ಕೈಗೊಳ್ಳುವುದು ಹಾಗೂ ಅವುಗಳ ವಿವಿಧ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡಿದ್ದೇವೆ.ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ನೇರವಾಗಿ ಸಾಲ ಸೌಲಭ್ಯವನ್ನು ಪಡೆಯುವ ನಿರ್ಧಾರವನ್ನು ಸ್ವಸಹಾಯ ಸಂಘಗಳೇ ಕೈಗೊಳ್ಳುವುದಾದರೂ ಕೂಡ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದಾ ಮುಂಜಾಗ್ರತೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಸದಸ್ಯರು ಯಾವ ಉದ್ದೇಶಕ್ಕಾಗಿ ಸಾಲದ ಬೇಡಿಕೆ ನೀಡಿದ್ದಾರೆ ಎನ್ನುವುದಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಸಾಲಗಳು ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶವನ್ನು […]

ನಂಬಿಕೆಯ ಜೊತೆ ವೈಜ್ಞಾನಿಕತೆಯೂ ಇರಲಿ

ಶ್ರೀ ಹೆಗ್ಗಡೆಯವರು ಪಂಚಾಂಗ ಎಂದರೆ ಪಂಚ ಅಂಗಗಳಿಂದ ಕೂಡಿದ ಗಣಿತದ ಗಣಿ. ಅವೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಇವು ನಿತ್ಯವೂ ಬದಲಾವಣೆ ಆಗುತ್ತವೆ. ಇದರೊಂದಿಗೆ ವಿಷ ಮತ್ತು ಅಮೃತ ಘಳಿಗೆಗಳು ಬದಲಾಗುತ್ತಾ ಹೋಗುತ್ತವೆ.ಕೆಲವೊಮ್ಮೆ ದೈನಂದಿನ ಪಂಚಾಂಗದಲ್ಲಿ ತೋರಿಬರುವ ನಕ್ಷತ್ರ, ಘಳಿಗೆಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಜಯ ಸಾಧಿಸಲು ಕರಣ ಮೊದಲಾದ (ಕರಣಾತ್ ಚಿಂತಿತಂ ಕಾರ್ಯಂ) ಅಂಶಗಳ ಜೊತೆಗೆ ಹದಿನೈದು ದಿನಗಳಿಗೆ ಬದಲಾಗುವ ಎರಡು ಪಕ್ಷಗಳು ಕೂಡಾ ಸಹಕಾರಿಯಾಗುತ್ತವೆ […]

ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್‌ ಶ್ರೇಷ್ಠತಾ ಪ್ರಶಸ್ತಿ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್‍ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ಸೇರ್ಪಡೆ (Financial Inclusion) ಕಾರ್ಯಕ್ರಮದಡಿ ವ್ಯಕ್ತಿಗತ ಹಾಗೂ ಆಯ್ದ ಸಂಸ್ಥೆಗಳನ್ನು ನಿಯೋಜಿಸಿಕೊಂಡು ಗ್ರಾಮ ಗ್ರಾಮಗಳಲ್ಲೂ ಬ್ಯಾಂಕಿಂಗ್ ಸೇವಾ ಸೌಲಭ್ಯ ದೊರೆಯುವಂತಾಗಬೇಕೆಂದು ತನ್ನ ಅನೇಕ ಸುತ್ತೋಲೆಗಳು ಹಾಗೂ ಮಾರ್ಗದರ್ಶನಗಳಲ್ಲಿ ನಿರ್ದೇಶಿಸಿರುತ್ತದೆ. ಇದರನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ನ್ನು […]

ಚಾರ ಶೌರ್ಯ ಘಟಕದ ಛಲ ಬಿಡದ ಸಾಧನೆ ಒಂದು ತಿಂಗಳು ಸ್ವಚ್ಛತೆಗೆ ಮೀಸಲು

ರಾಜ್ಯದಲ್ಲಿರುವ ಶೌರ್ಯ ತಂಡದ ಸದಸ್ಯರು ನಿತ್ಯ ಒಂದಲ್ಲೊ0ದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಎಲ್ಲೆ ಅವಘಡಗಳು ಸಂಭವಿಸಿದರೂ ಅಲ್ಲಿ ಶೌರ್ಯ ತಂಡದವರಿರುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಹೆಗ್ಗಡೆಯವರು ಹಾಕಿಕೊಟ್ಟ ‘ಸಮಾಜ ಸೇವೆ’ ಎಂಬ ಮಾರ್ಗದಲ್ಲಿ ನಡೆಯುವ ಪ್ರತಿಯೊಂದು ಶೌರ್ಯ ತಂಡಗಳು ತಮ್ಮದೇ ಆದ ಬೇರೆ ಬೇರೆ ಸಾಧನೆ, ಪ್ರಯತ್ನಗಳಿಂದ ಮನೆ ಮಾತಾಗಿವೆ. ಅವುಗಳನ್ನು ನಿರಂತರದ ಪ್ರತಿ ಸಂಚಿಕೆಯಲ್ಲಿ ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ.ಹೆಬ್ರಿಯ ಸರ್ಕಲ್‌ನಿಂದ-ಬೇಳ0ಜೆ, ದೂಪದ ಕಟ್ಟೆಯ ಅರಣ್ಯ ಪ್ರದೇಶ, ಬೇಳಂಜೆ ಗರಡಿ ರಸ್ತೆ, ಹಾಲಿ ಕೊಡ್ಲು, ಕುಚ್ಚೂರು […]