2024 – ಡಿಸೆಂಬರ್
ಸಮರ್ಪಕ ನಿರ್ವಹಣೆಗೆ ಸಂದ ಮನ್ನಣೆ ಲಾಭಾಂಶ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಪಾರದರ್ಶಕ ವರದಿ ಮತ್ತು ಲೆಕ್ಕಾಚಾರಗಳು
– ಅನಿಲ್ ಕುಮಾರ್ ಎಸ್.ಎಸ್
ಕಷ್ಟ ಆಗುತ್ತೆ ಮಗೂ, ಒಳ್ಳೆ ಫ್ಯಾನ್ ಹಾಕ್ಸು…
– ಎ. ಆರ್. ಮಣಿಕಾಂತ್
ರೇಡಿಯೋ ಪಯಣ
– ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಧರ್ಮಸ್ಥಳ ಲಕ್ಷದೀಪೋತ್ಸವ
– ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
2024 – ನವೆಂಬರ್
2024 – ಅಕ್ಟೋಬರ್
ಸುಲಭ ಹಾಗೂ ನಿಖರ ಪ್ರಗತಿನಿಧಿ ಬಡ್ಡಿ ಲೆಕ್ಕಾಚಾರ
ಅನಿಲ್ ಕುಮಾರ್ ಎಸ್. ಎಸ್. ಹಿಂದಿನ ಸಂಚಿಕೆಯಲ್ಲಿ ಯೋಜನೆಯ ವ್ಯವಸ್ಥೆಯಲ್ಲಿ ಸಂಘಗಳಿಗೆ ಬ್ಯಾಂಕ್ ಸಿ.ಸಿ. ಖಾತೆಯ ಮೂಲಕ ಎಷ್ಟೊಂದು ಪ್ರಯೋಜನಗಳಾಗಿವೆ ಎಂದು ವಿವರಿಸಲಾಗಿತ್ತು.ನಬಾರ್ಡ್ನ ಸುತ್ತೋಲೆ (65(A)/MCID-04/2011-12ರ ಪ್ರಕಾರ ಸ್ವಸಹಾಯ ಸಂಘಗಳಿಗೆ ಸಿ.ಸಿ. ಖಾತೆ ವ್ಯವಸ್ಥೆಯನ್ನು ಒದಗಿಸಬೇಕು, ತನ್ಮೂಲಕ ಅವರಲ್ಲಿ ಆದಾಯ ಇದ್ದಾಗ ನಿರಂತರ ಮರುಪಾವತಿಯೊಂದಿಗೆ ಬಡ್ಡಿ ಹೊರೆಯನ್ನು ಕಡಿಮೆ ಮಾಡಬೇಕೆನ್ನುವ ಒಂದು ಅತ್ಯುತ್ತಮ ಮಾರ್ಗದರ್ಶನ ಇದೆ. ಆ ಮಾರ್ಗದರ್ಶನದನ್ವಯ ಯೋಜನೆಯ ಸಂಘದ ಸಾಲಗಳನ್ನು ಸಿ.ಸಿ. ಖಾತೆಯಾಗಿ ಬ್ಯಾಂಕ್ಗಳಲ್ಲಿ ಪರಿವರ್ತಿಸಲಾಯಿತು. ಸಂಘದ ವಾರದ ಸಭೆಯ ಜೊತೆಗೆ ವಾರದ ಮರುಪಾವತಿ […]
ವಿವೇಚನೆ ಮುಖ್ಯ
ದಂಪತಿಗಳಿಬ್ಬರು ಕಟ್ಟಿಗೆ ಹೊರೆ ಹೊತ್ತುಕೊಂಡು ಮನೆಯತ್ತ ಸಾಗುತ್ತಿದ್ದಾಗ ಪತಿಯ ಕಾಲಿಗೇನೋ ತಾಗಿ ಎಡವಿ ಆತ ಬಿದ್ದು ಬಿಟ್ಟ. ಎಬ್ಬಿಸಿ ನೋಡಿದರೆ ಒಂದು ಲೋಹದ ಪಾತ್ರೆ ಅಲ್ಲಿತ್ತು. ಮಣ್ಣು ಸರಿಸಿ ಅದನ್ನೆತ್ತಿಕೊಂಡು ಮನೆಗೆ ಬಂದಾಗ ಏನೋ ದೊಡ್ಡ ನಿಧಿ ಸಿಕ್ಕಿದೆ ಎಂಬ ಸಂತೋಷ. ಅದರ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ತಾಳೆಗರಿಗಳ ಸಂಗ್ರಹವಿತ್ತು. ನಿರಾಸೆಗೊಂಡ ದಂಪತಿಗಳು ಅದನ್ನು ಅಲ್ಲೆ ಹೊಂಡಕ್ಕೆ ಎಸೆಯುತ್ತಾರೆ. ಇದನ್ನು ನೋಡಿದ ಓರ್ವ ವಿದ್ಯಾವಂತ ಯುವಕ ಅದನ್ನು ಹೊಂಡದಿoದ ತೆಗೆದು ಇದು ಪ್ರಯೋಜನವಿಲ್ಲದ ವಸ್ತುವಾಗಿದ್ದಲ್ಲಿ ಇಷ್ಟು […]
ರಕ್ತದಾನದಿಂದ ಜೀವದಾನ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಒಡಿಸ್ಸಾದ ಬಾಲಸೋರ್ನಲ್ಲಿ ನಡೆದ ರೈಲು ಅವಘಡದಲ್ಲಿ 270ಕ್ಕೂ ಹೆಚ್ಚು ಜನ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಅವಘಡ ನಡೆದ ಕೂಡಲೇ ಸ್ಥಳೀಯರು, ಸ್ವಯಂ ಸೇವಕ ರಕ್ಷಣಾ ಕಾರ್ಯಕರ್ತರು, ಪೊಲೀಸ್ ಮತ್ತು ಆರೋಗ್ಯ ಇಲಾಖೆ, ಸೇನೆ, ಶ್ವಾನದಳ ಹೀಗೆ ಎಲ್ಲರೂ ರಕ್ಷಣಾ ಕಾರ್ಯದಲ್ಲಿ ತೊಡಗುವ ಮೂಲಕ ಪ್ರಯಾಣಿಕರನ್ನು ರಕ್ಷಿಸುವಲ್ಲಿ, ಗಾಯಾಳುಗಳಿಗೆ ನೆರವು ನೀಡುವಲ್ಲಿ ಹಗಲು ರಾತ್ರಿ ಶ್ರಮಿಸಿದ್ದರು. ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲು ಸ್ಥಳದಲ್ಲೇ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಸಿಬ್ಬಂದಿಗಳು ಗಾಯಾಳುಗಳಿಗೆ ಚಿಕಿತ್ಸೆ […]
ಯುವಜನತೆ ಮತ್ತು ಸಂಸ್ಕಾರ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಇತ್ತೀಚೆಗೆ ನಾನು ಶೃಂಗೇರಿಗೆ ಹೋದಾಗ ಅಲ್ಲಿ ಅತ್ಯಂತ ಎಳೆಯ ವಯಸ್ಸಿನ ಹುಡುಗನೊಬ್ಬ ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ. ಅಲ್ಲಿಯ ಪರಿಚಯಸ್ಥರಲ್ಲಿ ನಾನು ಆತಂಕದಿAದ ಕೇಳಿದೆ ‘ಜ್ಞಾನ ಮತ್ತು ಸಂಸ್ಕಾರಕ್ಕೆ ಹೆಸರಾದ ನಮ್ಮ ಶೃಂಗೇರಿಗೂ ಇಂತಹ ಪರಿಸ್ಥಿತಿ ಬಂತೇ?’ ನನ್ನ ಪ್ರಶ್ನೆಗೆ ಬಹಳ ಬೇಸರದಿಂದ ‘ಹೌದು’ ಎಂದು ತಲೆಯಾಡಿಸಿದರು. ಹಾಗೆಯೇ ಅಲ್ಲಿದ್ದ ಸಜ್ಜನರ ನಡುವೆ ಒಂದು ಸಣ್ಣ ಚರ್ಚೆಯೂ ಮುಂದುವರೆಯಿತು. ಕೆಲವು ಬ್ಯಾಕ್ಟೀರಿಯಾ, ವೈರಸ್ಗಳು ಭೀಕರ ಸಾಂಕ್ರಾಮಿಕ ರೋಗಗಳನ್ನು ತಂದು ಮನುಕುಲದ […]
ರೌಡಿ ಆಗಿದ್ದವನು ರಿಯಲ್ ಹೀರೋ ಆಗಿಬಿಟ್ಟ!
– ಎ. ಆರ್. ಮಣಿಕಾಂತ್
ವಿವೇಚನೆ ಮುಖ್ಯ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಯುವಜನತೆ ಮತ್ತು ಸಂಸ್ಕಾರ
– ಅನಿಲ್ ಕುಮಾರ್ ಎಸ್.ಎಸ್.
ರಕ್ತದಾನದಿಂದ ಜೀವದಾನ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ತಾವರೆ ಮತ್ತು ಕೆಸರು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕೆಸರಿನ ಮೇಲಿರುವ ತಾವರೆ ಯಾವಾಗಲೂ ಕೆಸರನ್ನು ಮೆತ್ತಿಕೊಳ್ಳದೆ ತನ್ನ ಶುಭ್ರತೆ ಮತ್ತು ಸೌಂದರ್ಯವನ್ನು ಉಳಿಸಿಕೊಂಡಿರುತ್ತದೆ. ಅದು ಅರಳಿನಿಂತ ಜಾಗದ ತಳವನ್ನೊಮ್ಮೆ ಅವಲೋಕಿಸಿದರೆ ಬರೀ ಕೆಸರು. ಕೆಸರನ್ನೇ ಇಷ್ಟಪಡುವ ಸೊಳ್ಳೆ ಮತ್ತಿತರ ಕೀಟಗಳು ಮಾತ್ರವಲ್ಲ ಸದಾ ವಟಗುಟ್ಟುತ್ತಾ ಎಲ್ಲರಿಗೂ ಕಿರಿಕಿರಿಯನ್ನುಂಟು ಮಾಡುವ ಕಪ್ಪೆಗಳಿಂದ ಕೂಡಿದ ಜಾಗ. ಆದರೆ ತಾವರೆಯ ಈ ನಿರ್ಲಿಪ್ತತೆ ವ್ಯರ್ಥವಾಗುವುದಿಲ್ಲ. ಯಾಕೆಂದರೆ ಮೇಲುಗಡೆ ಮಧುವನ್ನರಸಿ ಬರುವ ದುಂಬಿಗಳು, ಬಣ್ಣ ಬಣ್ಣದ ಚಿಟ್ಟೆಗಳೂ ಕಾಣಸಿಗುತ್ತವೆ. ಇಲ್ಲಿ ಒಂದು ಕತ್ತಲೆಯ ಕೆಳಗಿನ ವ್ಯವಹಾರವಾದರೆ, […]
ಸಿ.ಸಿ.ಖಾತೆ ವ್ಯವಸ್ಥೆಯಿಂದ ಸಿಗುವ ಪ್ರಯೋಜನಗಳು
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಹಿಂದಿನ ಸಂಚಿಕೆಯಲ್ಲಿ ಸಿ.ಸಿ.ಖಾತೆಯ ಎರಡು ಪ್ರಮುಖ ಪ್ರಯೋಜನಗಳ ಕುರಿತು ತಿಳಿಸಲಾಗಿತ್ತು. 1. ಆಂತರಿಕ ಉಳಿತಾಯವನ್ನು ಆಂತರಿಕ ವ್ಯವಹಾರಕ್ಕೆ ಅವಕಾಶ. 2. ಯಾವುದೇ ಹೆಚ್ಚು ದಾಖಲೆಗಳಿಲ್ಲದೆ ನಿರಂತರವಾಗಿ ಸಾಲ ಸೌಲಭ್ಯ ಮುಂದುವರಿದ ಪ್ರಯೋಜನಗಳು ಈ ಕೆಳಗಿನಂತಿವೆ.3. ಸಾಮಾನ್ಯವಾಗಿ ಬ್ಯಾಂಕ್ಗಳು ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡುವಾಗ ಉಳಿತಾಯದ ಐದಾರು ಪಟ್ಟನ್ನು ನೀಡುವುದು ವಾಡಿಕೆಯಿದೆ. ಆದರೆ ಯೋಜನೆಯ ವ್ಯವಸ್ಥೆಯಲ್ಲಿ ಬ್ಯಾಂಕುಗಳು ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಈ ನಿಯಮ ವಿಧಿಸಿದ್ದರೆ […]
ಧರ್ಮದ ಸತ್ವ ಪರೀಕ್ಷೆ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಯಕ್ಷಗಾನದ ಕಥಾ ಹಂದರ ಹೇಗಿತ್ತೆಂದರೆ; ಒಬ್ಬ ರಾಜನು ಉತ್ತಮ ರೀತಿಯಲ್ಲಿ ಪ್ರಜೆಗಳನ್ನು ಪರಿಪಾಲಿಸುತ್ತಾ ರಾಜ್ಯವನ್ನು ಮುನ್ನಡೆಸುತ್ತಿದ್ದ. ಒಂದೊಮ್ಮೆ ನಾರದ ಮಹರ್ಷಿಗಳು ಆ ರಾಜನ ಬಳಿ ಬಂದು ಆತನನ್ನು ಉದ್ದೇಶಿಸಿ ‘ಮಹಾರಾಜ, ನೀನೇನೋ ನಿನ್ನಷ್ಟಕ್ಕೆ ರಾಜ್ಯಭಾರ ಮಾಡುತ್ತಾ ಇದ್ದೀಯಾ! ಆದರೆ ನಿನ್ನ ತಂದೆಯನ್ನು ಕೊಂದು, ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋದ ನೆರೆಯ ರಾಜ್ಯದ ರಾಜನು ತನ್ನ ಸೈನ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದಾನೆ. ಅವನು ನಿನ್ನ ತಂದೆಯನ್ನು […]
ಮಹಾತ್ಮರ ಕನಸುಗಳು ಮಹಾತ್ಮರಿಂದಲೇ ಸಾಕಾರ
‘ನಿರಂತರ’ದ ಸಮಸ್ತ ಓದುಗರಿಗೆ ಗಾಂಧಿ ಜಯಂತಿಯ ಶುಭಾಶಯಗಳು. ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಎಂಟು ದಶಕಗಳ ಹಿಂದೆಯೇ ‘ಭವ್ಯ ಭಾರತ’ದ ಕನಸನ್ನು ಕಂಡಿದ್ದರು. ನಮ್ಮ ದೇಶ ಶ್ರೀರಾಮ ರಾಜ್ಯವಾಗಬೇಕೆಂಬ ಮಹತ್ವಕಾಂಕ್ಷೆಯನ್ನು ಹೊಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಸಾಹತು ಆಡಳಿತದಿಂದ ಬಹಳಷ್ಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಅನುಭವಿಸಿದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣಕ್ಕೆ ಚೇತರಿಸಿಕೊಳ್ಳಲಾಗಲಿಲ್ಲ. ಸ್ವತಂತ್ರರಾದ ನಂತರ ಅನೇಕ ವರ್ಷಗಳ ಕಾಲ ನಮ್ಮ ದೇಶ ಹಲವಾರು ಭೀಕರ ಸಮಸ್ಯೆಗಳನ್ನು ಎದುರಿಸುತ್ತಿತ್ತು. […]