2025 ನವೆಂಬರ್
ಎಫ್ಐಆರ್ ಎಂಬ ನಾಣ್ಯದ ಎರಡು ಮುಖಗಳು
ಲಕ್ಷ್ಮೀ ಘಾಟೆ ಅದೊಂದು ರಾತ್ರಿ, ಸುಮಾರು 10:17ರ ಸಮಯ ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಮೆಟ್ಟಿಲು ಹತ್ತಿದ ಮಹಿಳೆಯೋರ್ವರು ಸಮೀಪದ ಬಸ್ ನಿಲ್ದಾಣವೊಂದರಲ್ಲಿ ನನ್ನ ಮೇಲೆ ದಾಳಿಯಾಗಿದೆ ಎನ್ನುತ್ತಾರೆ. ಅಲ್ಲಿದ್ದ ಡೆಸ್ಕ್ ಅಧಿಕಾರಿಯೊಬ್ಬರು ಡೈರಿ ತೆಗೆದು ಇವರ ದೂರನ್ನು ದಾಖಲಿಸುತ್ತಾರೆ. ಮುಖ್ಯಾಂಶಗಳನ್ನು ಬರೆದು, ಸ್ಟಾö್ಯಂಪ್ ಮುದ್ರಿಸಿದ ಎಫ್ಐಆರ್ ಪ್ರತಿಯನ್ನು ಆಕೆಗೆ ನೀಡುತ್ತಾರೆ. ಸಂತ್ರಸ್ತರಿಗೆ ಈ ಪ್ರತಿ ಒಂದು ಭರವಸೆಯಿದ್ದಂತೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಸಮಾಧಾನ ಭಾವ ಅವರಲ್ಲಿ ಮೂಡುತ್ತದೆ.ಭಾರತದ ಎಫ್ಐಆರ್ ವ್ಯವಸ್ಥೆ ಒಂದು […]
ನೌಕರರ ನೆರವಿಗೆ ಇ.ಎಸ್.ಐ. ವಿಮಾ ಸೌಲಭ್ಯ
ರವಿಚಂದ್ರ, ಚಾರ್ಮಾಡಿ ನೌಕರರ ರಾಜ್ಯ ವಿಮಾನಿಗಮ (ಇ.ಎಸ್.ಐ.ಸಿ.) ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿದ್ದು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.ಇ.ಎಸ್.ಐ.ಸಿ. ಎಂದರೇನು?ಸಾಮಾನ್ಯವಾಗಿ ಇ.ಎಸ್.ಐ. ಎಂದೇ ಕರೆಯುತ್ತಾರೆ. ಇದು ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು ಇದರ ಪ್ರಾಥಮಿಕ ಉದ್ದೇಶವೆಂದರೆ ಅನಾರೋಗ್ಯ, ಹೆರಿಗೆ, ಮಾತೃತ್ವ, ಅಂಗವೈಕಲ್ಯ, ಉದ್ಯೋಗದ ಕಾರಣಗಳಿಂದ ಗಾಯ, ಸಾವು ಇತ್ಯಾದಿಗಳ ಸಂದರ್ಭದಲ್ಲಿ ಸಂಘಟಿತ ವಲಯದ ‘ಉದ್ಯೋಗಿ’ಗಳನ್ನು ರಕ್ಷಿಸುವುದು. ಈ […]
ಗ್ರಾಮೀಣ ಭಾಗದ ಜನರಲ್ಲೂ ಹೆಚ್ಚುತ್ತಿದೆ ಟೆನ್ಶನ್
ಇದು ಡಿಜಿಟಲ್ ಯುಗ. ಎಲ್ಲವೂ ಶರವೇಗದಲ್ಲಿ ಆಗಬೇಕೆಂದು ಹಾತೊರೆಯುತ್ತಿರುವುದರ ಪರಿಣಾಮ ‘ಟೆನ್ಶನ್’ ಎಂಬ ಭೂತ ಎಲ್ಲರನ್ನು ಆವರಿಸಿಕೊಂಡಿದೆ. ಹಿಂದೆ ನಗರಗಳಲ್ಲಿರುವ ಜನರು ಅತಿಯಾದ ಒತ್ತಡಗಳಿಂದ ಬಳಲುತ್ತಿದ್ದರು. ಇದೀಗ ಈ ಭೂತ ಗ್ರಾಮೀಣ ಜನರ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಒತ್ತಡದ ಬದುಕು, ಸಂಬoಧಗಳಲ್ಲಿನ ಉದ್ವಿಗ್ನತೆ, ಭಾವನಾತ್ಮಕ ಬೆಂಬಲದ ಕೊರತೆಯಿಂದಾಗಿ ಉದ್ವೇಗ, ಆತಂಕ, ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಾತಿಗೆ ಕೇಂದ್ರ ಸರಕಾರ ಆರಂಭಿಸಿರುವ ಸಹಾಯವಾಣಿಗೆ ದೊರೆತ ಸ್ಪಂದನೆಯೇ ಸಾಕ್ಷಿ. 2022ರಲ್ಲಿ ಆರಂಭಿಸಿದ ಸಹಾಯವಾಣಿಯಲ್ಲಿ ಈವರೆಗೆ ದಿನವೊಂದಕ್ಕೆ […]
ಹಠವಾದಿ ಮಕ್ಕಳಿಗೆ ತಾಳ್ಮೆಯ ಮದ್ದು
ಅಶ್ವಿನಿ ಹೆಚ್. ತಾನು ಬಯಸಿದಂತೆ ಆಗಲೇಬೇಕು ಎಂಬ ಪಟ್ಟು ಬಿಡದ ಮನೋಭಾವವನ್ನು ಹಠವೆನ್ನುತ್ತಾರೆ. ಇದು ಇತರರ ಅಭಿಪ್ರಾಯ, ಸಲಹೆ ಅಥವಾ ತಾರ್ಕಿಕತೆಯನ್ನು ಕಡೆಗಣಿಸಿ ತಮ್ಮ ನಿರ್ಧಾರಗಳನ್ನೇ ಸಮರ್ಥಿಸಿಕೊಳ್ಳುವ ಸ್ಥಿತಿಯೂ ಹೌದು.ಮಕ್ಕಳಲ್ಲಿ ಹಠಮಾರಿ ವರ್ತನೆ ಕಾಣಿಸಿಕೊಂಡಾಗ ಬಹಳಷ್ಟು ಪೋಷಕರು ಅದನ್ನು ತಲೆನೋವಿನಂತೆ ಕಾಣುತ್ತಾರೆ. ಆದರೆ ನಾವು ಒಮ್ಮೆ ಆಳವಾಗಿ ಚಿಂತಿಸಿದರೆ ಹಠವು ಕೇವಲ ನಕಾರಾತ್ಮಕ ಗುಣವಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇದೇ ಹಠಕ್ಕೆ ಸರಿಯಾದ ಮಾರ್ಗದರ್ಶನ ದೊರೆತರೆ ಮುಂದೊoದು ದಿನ ಜೀವನದಲ್ಲಿ ದೃಢ ಸಂಕಲ್ಪ, ಪರಿಶ್ರಮ ಹಾಗೂ […]
ಉಪರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ..
ರಾಜೀವ ಹೆಗಡೆ ಭಾರತದ ಸಂವಿಧಾನದಲ್ಲಿ ರಾಷ್ಟçಪತಿಯನ್ನು ಪ್ರಥಮ ಪ್ರಜೆ ಎಂದು ಉಲ್ಲೇಖಿಸಿದರೆ, ನಂತರದ ಸ್ಥಾನ ಉಪರಾಷ್ಟçಪತಿಗೆ ಸಿಗುತ್ತದೆ. ಆದರೆ ಆಡಳಿತ ಹಾಗೂ ಕಾನೂನು ದೃಷ್ಟಿಯಲ್ಲೂ ಈ ಹುದ್ದೆ ಬಹುತೇಕ ಉತ್ಸವ ಮೂರ್ತಿಯ ಹುದ್ದೆಯಷ್ಟೇ. ಪ್ರಾಯೋಗಿಕವಾಗಿ ನೋಡಿದಾಗ ಉಪರಾಷ್ಟçಪತಿಗೆ ಇರುವ ಅತ್ಯಂತ ದೊಡ್ಡ ಜವಾಬ್ದಾರಿಯೆಂದರೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯನ್ನು ನಡೆಸುವುದು. ಈ ಸಭೆಗೆ ಅಧ್ಯಕ್ಷರಾಗಿರುವುದೇ ಉಪರಾಷ್ಟçಪತಿಗೆ ಇರುವ ಬಹು ದೊಡ್ಡ ಅಧಿಕಾರವಾಗಿದೆ. ಇಂತಹ ಹುದ್ದೆಯು ಇತ್ತೀಚೆಗೆ ಅಚಾನಕ್ಕಾಗಿ ಖಾಲಿಯಾಯಿತು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜಗದೀಪ್ ಧನಕರ್ ಅವರು ರಾಜೀನಾಮೆ […]