2025 ಡಿಸೆಂಬರ್
ಹೆಣ್ಣೆಂದೇಕೆ ಬೀಳುಗಳೆವಿರ!
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಹಿಂದಿನ ಕಾಲದಲ್ಲಿ ಹಿರಿಯರು ಆಶೀರ್ವಾದ ಮಾಡಬೇಕಾದರೆ ‘ದೀರ್ಘಸುಮಂಗಲಿ ಭವಃ ಮತ್ತು ಪುತ್ರಪ್ರಾಪ್ತಿರಸ್ತು’ ಎಂದೇ ಆಶೀರ್ವದಿಸುತ್ತಿದ್ದರು. ಗಂಡು ಮಗು ಹುಟ್ಟಿದರೆ ಬಟ್ಟಲು ಹಿಡಿದುಕೊಂಡು ಅದಕ್ಕೆ ಹೊಡೆಯುವುದರ ಮೂಲಕ ತನ್ನ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂಬ ಸುದ್ದಿಯನ್ನು ನೆರೆಮನೆಯವರಿಗೆಲ್ಲಾ ತಕ್ಷಣ ತಿಳಿಯುವಂತೆ ಮಾಡುತ್ತಿದ್ದರು. ಗಂಡು ದುಡಿದು ತರುವವನು. ತನ್ನ ವಂಶ ಬೆಳೆಸುವವನೆಂಬ ಭಾವನೆ ಎಲ್ಲರದಾಗಿತ್ತು. ಹಾಗಾಗಿ ಸಹಜವಾಗಿ ಊಟ, ತಿಂಡಿ, ವಿದ್ಯೆ ಅವಕಾಶ ಎಲ್ಲದರಲ್ಲೂ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇರುತ್ತಿತ್ತು. ಆದರೆ […]
ಅಶಕ್ತರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ ಜನಮಂಗಲ
ಅನಿಲ್ ಕುಮಾರ್ ಎಸ್. ಎಸ್. ಹಿಂದಿನ ಸಂಚಿಕೆಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗಗಳಲ್ಲಿ ಆಗಿರುವ ಮಹಿಳಾ ಸಬಲೀಕರಣದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಬಾರಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಪ್ರಮುಖ ಅಂಗವಾದ ‘ಜನಮಂಗಲ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ. ಯೋಜನೆಯ ಎಲ್ಲಾ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಬಡವರಿಗೆ, ಅಸಹಾಯಕ ವ್ಯಕ್ತಿಗಳಿಗೆ ಇರುವಂತೆಯೇ ಜನಮಂಗಲ ಕಾರ್ಯಕ್ರಮವೂ ಕೂಡಾ ಅಸಹಾಯಕ ವ್ಯಕ್ತಿಗಳಿಗಾಗಿಯೇ ಇರುವುದು. ಒಂದು ಬಡ ಕುಟುಂಬದಲ್ಲಿ ಅಂಗವಿಕಲ ಮಗು ಹುಟ್ಟಿದರೆ, ಕುಟುಂಬದ ಯಾರಾದರೂ ಸದಸ್ಯರಿಗೆ ಖಾಯಿಲೆ ಅಥವಾ ಅಪಘಾತದಿಂದ ಶಾಶ್ವತ ಅಂಗವಿಕಲತೆ […]
ಪೆನ್ಡ್ರೈವ್ – ಮೆಮೊರಿ ಕಾರ್ಡ್ ಸ್ಟೋರೇಜ್ನಷ್ಟೇ ಮುಖ್ಯ ಅವುಗಳ ವರ್ಷನ್!
ಇಂದುಧರ ಹಳೆಯಂಗಡಿ ಈ ಮೊದಲು ಸಿಡಿ, ಡಿವಿಡಿ, ಕ್ಯಾಸೆಟ್ಗಳು ಮಾಡುತ್ತಿದ್ದ ಕೆಲಸಗಳನ್ನು ಇಂದು ‘ಮೆಮೊರಿ ಕಾರ್ಡ್’ ಮತ್ತು ‘ಪೆನ್ಡ್ರೈವ್’ಗಳು ಮಾಡುತ್ತಿವೆ. ಫೋಟೋ, ವೀಡಿಯೋ ಸಹಿತವಾಗಿ ಎಲ್ಲಾ ರೀತಿಯ ಡಿಜಿಟಲ್ ಡೇಟಾಗಳನ್ನು ಸಂಗ್ರಹಿಸಿಡಲು ಮತ್ತು ಬೇರೆಯವರಿಗೆ ಹಂಚಲು ಇಂದು ವ್ಯಾಪಕವಾಗಿ ಮೆಮೊರಿ ಕಾರ್ಡ್ ಹಾಗೂ ಪೆನ್ಡ್ರೈವ್ಗಳನ್ನು ಬಳಸಲಾಗುತ್ತಿದೆ. ಇಂಟರ್ನೆಟ್ ಬೆಳೆದು ಇಂದು ಆನ್ಲೈನ್ ಸಂಗ್ರಹ ವ್ಯವಸ್ಥೆ ಬಹಳ ಪ್ರಚಾರ ಪಡೆಯುತ್ತಿದ್ದರೂ, ಕ್ಯಾಮೆರಾಗಳಿಗೆ ಮೆಮೊರಿ ಕಾರ್ಡ್ ಹಾಗೂ ಆಫ್ಲೈನ್ ಸ್ಟೋರೇಜ್ಗಾಗಿ ಪೆನ್ಡ್ರೈವ್ಗಳು ಬಳಸಲ್ಪಡುತ್ತಿವೆ.ಇವೆರಡೂ ಬಹುತೇಕ ಒಂದೇ ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ್ದರೂ […]
ಮಾರುಕಟ್ಟೆ ಮತ್ತು ಬೆಳೆಗಾರ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕೊಡುಕೊಳ್ಳುವಿಕೆ ಬದುಕಿನ ಒಂದು ಭಾಗ. ಪುರಾತನ ಕಾಲದಿಂದಲೂ ವಿವಿಧ ರೀತಿಯ ಕೊಡುಕೊಳ್ಳುವಿಕೆ, ವ್ಯವಹಾರ ಪದ್ಧತಿಗಳು ನಡೆದುಕೊಂಡು ಬಂದಿವೆ. ಒಂದು ಕಾಲದಲ್ಲಿ ಉಪ್ಪು ಕೊಟ್ಟರೆ ಅದಕ್ಕೆ ಸಮಾನಾಗಿ ತೆಂಗಿನಕಾಯಿ, ಅಕ್ಕಿ ಕೊಟ್ಟರೆ ತರಕಾರಿ ಕೊಡುವುದು ಹೀಗೆ ವಸ್ತು-ವಿನಿಮಯ ವ್ಯವಸ್ಥೆಗಳ ಮೂಲಕ ವ್ಯವಹಾರಗಳು ನಡೆಯುತ್ತಿದ್ದವು. ದಿನಕಳೆದಂತೆ ರಾಜ-ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿ, ವ್ಯಾಪಾರ-ವ್ಯವಹಾರಗಳ ರೂಪವೂ ಬದಲಾದವು. ಇಂದು ಇವು ಕ್ಷಣಮಾತ್ರದಲ್ಲಿ ನಡೆಯುತ್ತವೆ. ಎಲ್ಲೋ ಕುಳಿತು ಏನನ್ನು ಬೇಕಾದರೂ ಖರೀದಿ ಮಾಡುವಷ್ಟು ಜಗತ್ತು ಬದಲಾಗಿದೆ. ಆನ್ಲೈನ್ […]
ಗ್ರಾಮಗಳಿಗೂ ಇನ್ನು ಮುಂದೆ ಮೈಕ್ರೋ ಎ.ಟಿ.ಎಂ. ಸೇವೆ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಗ್ರಾಮಾಭಿವೃದ್ಧಿ ಯೋಜನೆಯ ‘ಸಿಎಸ್ಸಿ ಕೇಂದ್ರ’ಗಳ ಮೂಲಕ ರಾಜ್ಯಾದ್ಯಂತ ಸರಕಾರಿ ಸೇವೆಗಳು ಹಾಗೂ ಇತರೇ ಸಿಎಸ್ಸಿ ಸೇವೆಗಳನ್ನು ಗ್ರಾಮಮಟ್ಟದಲ್ಲಿ ಒದಗಿಸಲಾಗುತ್ತಿದೆ. ಯೋಜನೆಯ ಆರಂಭದ ದಿನದಿಂದಲೂ ಸರಕಾರಿ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಜನರಲ್ಲಿ ಸೂಕ್ತ ಅರಿವನ್ನು ಮೂಡಿಸಬೇಕೆಂಬುದು ಪೂಜ್ಯ ಶ್ರೀ ಹೆಗ್ಗಡೆಯವರ ಆಶಯ ಮತ್ತು ಮಾರ್ಗದರ್ಶನವಾಗಿತ್ತು. ಅಂದಿನ ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅರ್ಜಿಯನ್ನು ಭರ್ತಿ ಮಾಡಿಸುವುದರಿಂದ ಹಿಡಿದು ಅವುಗಳನ್ನು ಕಚೇರಿಗೆ ಕೊಂಡುಹೋಗಿ ಆ ಕಾರ್ಯಕ್ರಮಗಳು ಅಥವಾ […]