ಸ್ವಸಹಾಯ ಸಂಘಗಳಿಂದ ರೂ. 620 ಕೋಟಿ ಲಾಭಾಂಶ ವಿತರಣೆ

ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ರೂ. 620 ಕೋಟಿ ಲಾಭಾಂಶವನ್ನು ಹಂಚಿಕೊಳ್ಳುತ್ತಿವೆ. ಕೆಲವು ಸದಸ್ಯರಿಗೆ ತಮ್ಮ ಉಳಿತಾಯಕ್ಕಿಂತ ದ್ವಿಗುಣ ಲಾಭಾಂಶವು ದೊರೆತಿದೆ. ಹಾಗಾದರೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವಾಗಿದೆ, ಪಡೆದ ಲಾಭಾಂಶವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ನಮ್ಮಲ್ಲೂ ಇತ್ತು. ಅವರುಗಳಿಗೆ ಕರೆ ಮಾಡಿ ಮಾತನಾಡಿ ಅವರ ಮಾತುಗಳಿಗೆ ಅಕ್ಷರದ ರೂಪ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಉಳಿತಾಯಕ್ಕಿಂತ ಹೆಚ್ಚು ಲಾಭಾಂಶ ಕೈಸೇರಿತುಕಳೆದ 9 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ಗೌರಿ ಗಣೇಶ’ ಸ್ವಸಹಾಯ […]

ರಾಜ್ಯದ 10 ಸಾವಿರಕ್ಕೂ ಅಧಿಕ ವಿಶೇಷಚೇತನರಿಗೆ ಆಸರೆಯಾದ ‘ಜನಮಂಗಲ’ ಉಚಿತ ಸಲಕರಣೆ

>ಡಾ| ಎಲ್.ಎಚ್.ಮಂಜುನಾಥ್,ಕಾರ್ಯನಿರ್ವಾಹಕ ನಿರ್ದೇಶಕರು ಅಂಗವೈಕಲ್ಯತೆ ಶಾಪವಲ್ಲ, ಅಂಗವಿಕಲರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಿ ಎಲ್ಲರಂತೆ ಸಂತೋಷದ ಬದುಕನ್ನು ಬಾಳಲು ಅವಕಾಶ ಕಲ್ಪಿಸುವುದು ಸರಕಾರ ಹಾಗೂ ಸಮಾಜದ ಜವಾಬ್ದಾರಿ. ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 10.41 ಲಕ್ಷ ಅಂಗವಿಕಲರಿದ್ದಾರೆ ಎಂಬ ಮಾಹಿತಿಯಿದೆ. ಕುಟುಂಬವೊಂದರಲ್ಲಿ ಒಬ್ಬ ಅಂಗವಿಕಲನಿದ್ದರೆ ಆ ಕುಟುಂಬ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿರುತ್ತದೆ. ಅಂಗವಿಕಲರನ್ನು ಪ್ರತಿನಿತ್ಯ ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕಿದೆ. ನಿತ್ಯ ದುಡಿದು ತಿನ್ನುವ ಕುಟುಂಬವಾದರೂ ಇವರ  ಯೋಗಕ್ಷೇಮ ನೋಡಿಕೊಳ್ಳಲು ಓರ್ವರು ಮನೆಯಲ್ಲಿಯೇ ಇರಬೇಕಾಗುತ್ತದೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ಬದುಕಂತೂ ದುರಂತಮಯವಾದುದು. […]