‘ನಿರಂತರ’ ಪತ್ರಿಕೆಯನ್ನು ಓದಿರಿ, ಪ್ರಜ್ಞಾವಂತರಾಗಿ ಬೆಳೆಯಿರಿ

ಆತ್ಮೀಯರೇ, ನಿಮ್ಮ ‘ನಿರಂತರ’ ಪತ್ರಿಕೆಗೆ ಇದೀಗ ಇಪ್ಪತ್ತರ ಹರೆಯ. 2003ರಲ್ಲಿ ಪ್ರಾರಂಭಗೊAಡ ಈ ಪತ್ರಿಕೆ ಇಂದು ರಾಜ್ಯದ ಜನಪ್ರಿಯ ಮಾಸಿಕ ಆಗಿದೆ. ನಿರಂತರದ ಎಲ್ಲ ಪುಟಗಳೂ ಇದೀಗ ವರ್ಣಮಯವಾಗಿವೆ. ಲೇಖನಗಳ ಮೂಲಕ ಪ್ರಸ್ತುತ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಿ, ಜ್ವಲಂತ ವಿಷಯಗಳನ್ನು ಬೆಳಕಿಗೆ ತರುತ್ತಿರುವ ಸದಭಿರುಚಿಯ ಪತ್ರಿಕೆಯಾಗಿದೆ. ಸಾಮಾನ್ಯರೂ ಓದುವಂತೆ ಸರಳ ಭಾಷೆಯ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದು, ಓದಲು ಸುಲಭವಾಗಿದೆ.‘ನಿರಂತರ’ ಪತ್ರಿಕೆಯಲ್ಲಿ ನಮ್ಮ ಬದುಕಿಗೆ ಬೇಕಾಗುವ ಎಲ್ಲ ಹೂರಣಗಳನ್ನು ಜೋಡಿಸಲಾಗಿದೆ. ಮುಖ್ಯವಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು […]

ಹೆತ್ತವರ ಕೈಯಲ್ಲಿದೆ ಮಕ್ಕಳ ಭವಿಷ್ಯ

ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಸುಮಾರು4-5 ಗಂಟೆಗಳ ರೈಲು ಪ್ರಯಾಣದಲ್ಲಿ ಅನೇಕ ವಿಚಾರಗಳು ನಮ್ಮ ಗಮನವನ್ನು ಸೆಳೆಯುತ್ತಿರುತ್ತವೆ. ಇದುವರೆಗೆ ನಿದ್ದೆಯೇ ಮಾಡಿಲ್ಲವೇನೋ ಎಂಬoತೆ ಗೊರಕೆ ಹೊಡೆಯುತ್ತಾ ಮಲಗಿದವರು, ಯಾವಾಗ ತಾನಿಳಿಯುವ ಸ್ಥಳ ಬರುವುದೋ ಎಂದು ಕಾತರದಿಂದ ಗಂಟೆ ನೋಡುತ್ತಾ ಕಾಯುವವರು, ತನ್ನ ಮೊಬೈಲ್‌ನಲ್ಲಿ ಹಾಡು, ವೀಡಿಯೋ ನೋಡುವುದರಲ್ಲೇ ಮಗ್ನರಾಗಿ ಪ್ರಪಂಚವನ್ನೆ ಮರೆತವರು, ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡಿ ನಗುವವರು ಹೀಗೆ ಎಲ್ಲರೂ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ.ಅವರೆಲ್ಲರ ಮಧ್ಯೆ ಪುಸ್ತಕ ಓದಿನಲ್ಲಿ ತಲ್ಲೀನಳಾಗಿ ತನ್ನಷ್ಟಕ್ಕೆ ನಗುತ್ತಿರುವ ಹುಡುಗಿಯೊಬ್ಬಳನ್ನು ನೋಡಿ […]