ಮಾನವೀಯ ಕಾಳಜಿ ಮುಖ್ಯ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಯಾವುದೇ ಒಂದು ಉದ್ಯೋಗಕ್ಕೆ, ಒಂದು ಪದವಿಗೆ ಅಥವಾ ಯಾವುದೇ ವೃತ್ತಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಕೇವಲ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಾತ್ರಕ್ಕೆ, ಇಲ್ಲವೇ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದವರನ್ನೇ ಸೂಕ್ತ ವ್ಯಕ್ತಿಗಳೆಂದು ಹೇಳುವಂತಿಲ್ಲ. ಭಾರತ ಸರಕಾರವು ಉತ್ತಮ ಆಡಳಿತಗಾರರನ್ನು ಆರಿಸಿಕೊಳ್ಳುವ ದೃಷ್ಟಿಯಿಂದ ಐ.ಎ.ಎಸ್., ಐ.ಪಿ.ಎಸ್. ಮೊದಲಾದ ರಾಷ್ಟçಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿದ ಬಳಿಕ ಸೂಕ್ತ ತರಬೇತಿಯ ವ್ಯವಸ್ಥೆಯನ್ನೂ ಮಾಡುತ್ತದೆ. ಪ್ರಾಚೀನ ಕಾಲದಲ್ಲಿ ಇಂತಹ ಆಯ್ಕೆ […]

ಎಸ್.ಕೆ. 21 ಡಿಜಿಟಲೀಕರಣ – ಬೇಕಾಗಿದೆ ನಿಮ್ಮ ಸಹಕಾರ

ಡಾ| ಎಲ್. ಎಚ್. ಮಂಜುನಾಥ್ ಬಂಧುಗಳೇ, ಇದೀಗ ನಮ್ಮ ಯೋಜನೆಯಲ್ಲಿ 50 ಲಕ್ಷಕ್ಕೂ ಮಿಕ್ಕಿದ ಸದಸ್ಯರುಗಳಿದ್ದು, ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಪೈಕಿ ಬ್ಯಾಂಕಿನಿoದ ದೊರೆಯುವ ಪ್ರಗತಿನಿಧಿ ಸಾಲ ಪ್ರಮುಖವಾದುದು. ಈಗಂತೂ ದೊಡ್ಡ ಮೊತ್ತದ ಪ್ರಗತಿನಿಧಿ ಸೌಲಭ್ಯಗಳು ಸದಸ್ಯರಿಗೆ ಲಭ್ಯವಿದೆ. ಯಾವುದೇ ಒಬ್ಬ ಸದಸ್ಯರು ಪ್ರಗತಿನಿಧಿ ಪಡೆಯಬೇಕೆಂದರೆ ಅದಕ್ಕೆ ಸಂಘವೇ ಜವಾಬ್ದಾರಿಯಾಗಿ ನಿಲ್ಲಬೇಕಾಗುತ್ತದೆ. ತಾನು ಪಡೆಯುತ್ತಿರುವ ಪ್ರಗತಿನಿಧಿ ವಿವರಗಳನ್ನು ಸದಸ್ಯರು ತಮ್ಮ ಸಂಘದ ಸದಸ್ಯರಿಗೆ ತಿಳಿಸಬೇಕಾಗುತ್ತದೆ. ಪ್ರತಿ ವಾರ ತಾವು ಪಡಕೊಂಡ ಸಾಲಕ್ಕೆ ಕಟ್ಟಬಹುದಾದ ಮರುಪಾವತಿ ಮೊತ್ತವನ್ನು […]

ರಕ್ಷಣಾ ಸಚಿವಾಲಯದಿಂದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡೋ – ಪಾಕ್ ಯುದ್ಧದಲ್ಲಿ ಬಳಸಿದ ಯುದ್ಧ ಟ್ಯಾಂಕ್ ಕೊಡುಗೆ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡದೆ ತೆರಳುವುದು ಕಡಿಮೆ. ಅಲ್ಲಿಗೆ ಭೇಟಿ ನೀಡಿದವರು ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಶ್ರೀ ಹೆಗ್ಗಡೆಯವರ ಆಸಕ್ತಿಯನ್ನು ಕಂಡು ಬೆರಗಾಗುತ್ತಾರೆ. ಇದೀಗ ಕೇಂದ್ರ ರಕ್ಷಣಾ ಸಚಿವಾಲಯವು 1971ರ ಇಂಡೋ ಪಾಕ್ ಯುದ್ಧ, ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಳಕೆಯಾದ‘ಟಿ – 565’ ಎಂಬ ಹೆಸರಿನ ಯುದ್ಧ ಟ್ಯಾಂಕ್ ಅನ್ನು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ನೀಡಿದೆ.ಸುಮಾರು 40 ವರ್ಷಗಳ ಕಾಲ ದೇಶದ ರಕ್ಷಣಾ ಕಾರ್ಯದಲ್ಲಿ ಬಳಕೆಯಾದ ಟಿ – 565 […]