ಇಂಡಿಯಾ @75ನಲ್ಲಿ ಇಂಡಿಯನ್ @70

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಹಳ್ಳಿಯಲ್ಲಿರುವ ತುಂಬಾ ವಯಸ್ಸಾದವರಲ್ಲಿ ನಿಮಗೆ ಎಷ್ಟು ಮಕ್ಕಳು ಎಂದು ಕೇಳಿದರೆ ಸಹಜವಾಗಿ ಎಂಟೋ, ಹತ್ತೋ ಎಂದು ಹೇಳುತ್ತಾರೆ. ಮುಂದುವರೆದು ಅವರಲ್ಲಿ ಅರ್ಧದಷ್ಟು ಸಂಖ್ಯೆಯ ಮಕ್ಕಳು ಬಹಳ ಮೊದಲೇ ಮರಣ ಹೊಂದಿರುತ್ತಾರೆ ಎಂದೂ ತಿಳಿಸುವರು. ಸಾಮಾನ್ಯವಾಗಿ ಅನಾರೋಗ್ಯದಿಂದ ಬಹುಪ್ರಮಾಣದ ಜನರು ಅಂದಿನ ಕಾಲದಲ್ಲಿ ಮರಣ ಹೊಂದುತ್ತಿದ್ದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ನಂತರ 1950 ರಲ್ಲಿ ಅಂದಿನ ಜನರ ಜೀವಿತಾವಧಿಯ ವಯಸ್ಸು ಕೇವಲ 35.21 […]

ಪೂರ್ವ ತಯಾರಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕಾಶಿಯಲ್ಲಿ ಒಂದು ಕಾಲದಲ್ಲಿ ಒಂದು ವಿಚಿತ್ರ ಕ್ರಮ ಇತ್ತಂತೆ. ಆ ಊರಿನ ರಾಜನ ಅಧಿಕಾರದ ಕೆಲವು ವರ್ಷಗಳ ಅವಧಿ ಆಗುತ್ತಿದ್ದಂತೆ ಆತನನ್ನು ಗಂಗಾನದಿ ಆಚೆ ದಡಕ್ಕೆ ಅಟ್ಟುತ್ತಿದ್ದರಂತೆ. ಯಾರೂ ಇಲ್ಲದ ಆ ಜಾಗದಲ್ಲಿ ಒಬ್ಬಂಟಿಯಾಗಿ ರಾಜ ಉಳಿದ ಆಯುಷ್ಯವನ್ನು ನರಕಯಾತನೆಯಿಂದ ಕಳೆಯುತ್ತಿದ್ದನಂತೆ. ಹೀಗೆ ಪ್ರತಿ ರಾಜರಿಗೂ ತಮ್ಮ ಅಧಿಕಾರದ ಅವಧಿಯಲ್ಲಿ ಮುಂದೆ ತಮಗಾಗಬಹುದಾದ ಗಡಿಪಾರಿನ ಬಗ್ಗೆ ಚಿಂತೆ ಇದ್ದೇ ಇತ್ತು. ಆದರೆ ಓರ್ವ ರಾಜ ಮಾತ್ರ ನಿಶ್ಚಿಂತೆಯಿoದ ರಾಜ್ಯಭಾರ ನಡೆಸುತ್ತಿದ್ದ. ಮಾತ್ರವಲ್ಲ […]

ನಿರಂತರ 20 – ಯೋಜನೆ 40

ಬರಹ : ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಇದೊಂದು ವಿಶೇಷ ಸಂದರ್ಭ. 1982ರಲ್ಲಿ ಆರಂಭಗೊoಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೀಗ ನಲ್ವತ್ತರ ಹರೆಯ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಿಂದ ಆರಂಭಗೊoಡ ಈ ಯೋಜನೆ ಇಂದು ರಾಜ್ಯದಲ್ಲೆಲ್ಲ ಮನೆಮಾತಾಗಿದೆ. ಬಡವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಅಗತ್ಯವಿರುವ ಅನೇಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಯೋಜನೆಯು ರೂಪಿಸುತ್ತಾ ಬೆಳೆದಿದೆ. ಪ್ರಮುಖವಾಗಿ ಸ್ವಸಹಾಯ ಸಂಘ ಮಾದರಿಯಲ್ಲಿ ಮಹಿಳೆಯರ ಮತ್ತು ಕೃಷಿಕರ ಸಂಘಟನೆ. ಪ್ರಸ್ತುತ 49 ಲಕ್ಷ ಸದಸ್ಯರು ಯೋಜನೆಯ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. […]