‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಕನ್ನಡದ ಪ್ರಖ್ಯಾತ ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರ ಕವಿತೆಯ ಈ ಮೇಲಿನ ಸಾಲುಗಳು ಇಂದಿಗೂ ಸ್ವಾತಂತ್ರ್ಯ ಪ್ರೇಮಿಗಳಿಗೆ ಪ್ರೇರಣೆಯನ್ನೊದಗಿಸುವ ಕವಿತೆಯಾಗಿದೆ.ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ,ಹರೆಯದೀ ಮಾತ್ರಿಕನ ಮಾಟ ಮಸುಳುವ ಮುನ್ನ,ಉತ್ಸಾಹ ಸಾಹಸದ ಉತ್ತುಂಗ ವೀಚಿಗಳಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನಕಟ್ಟುವೆವು ನಾವು ಹೊಸ ನಾಡೊಂದನು!ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು 1947 ಆಗಸ್ಟ್15, 75 ವರ್ಷಗಳ ಹಿಂದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸಾವಿರಾರು ಸಾಮಾನ್ಯರು ನೀಡಿದ ಕೊಡುಗೆ […]

ಟೆರೇಸಿನಲ್ಲೊಂದು ಮುಂಜಾನೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಪೇಟೆಯಲ್ಲಿ ಫ್ಲ್ಯಾಟ್ ಗಳೇ ಜಾಸ್ತಿ. ಮರ‍್ನಾಲ್ಕು ಅಂತಸ್ತಿನ ಫ್ಲ್ಯಾಟ್ ಗಳಲ್ಲಿ ವಾಸಿಸುವವರಿಗೆ ಮನೆಯ ಟೆರೇಸ್ ಅನ್ನು ಬಿಟ್ಟರೆ ಭೂಮಿ – ಆಕಾಶದ ಮಧ್ಯೆ ಸಂಪರ್ಕ ಕಲ್ಪಿಸುವ ಬೇರೆ ಸಾಧನ ಇಲ್ಲ ಎನ್ನಬಹುದು. ಬೆಳಿಗ್ಗೆ ಕಾಫಿ – ಟೀ ಹೀರಲೆಂದು ಟೆರೇಸ್‌ಗೆ ಬಂದರೆ ಅಲ್ಲಿ ನಿಂತು ಕೆಳಗೆ ನಡೆಯುವ ಎಲ್ಲಾ ವ್ಯವಹಾರಗಳನ್ನು ಗಮನಿಸುತ್ತಿರಬಹುದು. ಬೆಳಿಗ್ಗೆ ಕಸ ತುಂಬಿದ ಲಾರಿಗಳು ಹೋಗುವುದರಿಂದ ಹಿಡಿದು, ವೃದ್ಧ ದಂಪತಿಗಳ ವಾಕಿಂಗ್, ಸಣ್ಣ ಪ್ರಾಯದವರ ಜಾಗಿಂಗ್, ಶ್ವಾನ ಪ್ರಿಯರು […]

“ಆಯುಷ್ಮಾನ್ ಭಾರತ”

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ‘ರಂಗವ್ವ…ರoಗವ್ವ…ನಮ್ ಯೋಜ್ನೇಯಾ ಸಿ.ಎಸ್.ಸಿ. ಕೇಂದ್ರದಾಗೆ ಅದ್ಯಾನೋ ‘ಆಯುಸ್ಮಾನ್ ಕಾರ್ಡ’ ಪ್ರ‍್ರೀ ಆಗಿ ಕೋಡ್ತೌರಂತೆ ಹೋಗಿ ವಸಿ ಈಸ್ಕಂಡ್ ಬರಾನ ಬಾರವ್ವ ಎಂದು ನಿಂಗವ್ವ ಕರೆದಾಗ ಕಿತ್ತು ತಿನ್ನುವ ಬಡತನದಿಂದ ಬಳಲುತ್ತಿದ್ದ ರಂಗವ್ವಗೆ ಏನಾದರೂ ಸರ್ಕಾರದಿಂದ ಸಿಕ್ಕರೆ ಸಿಗಲಿ ಅಂತ ತಮ್ಮ ಹಳ್ಳಿಯಲ್ಲಿ ಇದ್ದ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರಕ್ಕೆ ಹೊರಟಳು. ಕೇವಲ ಬೆರಳಚ್ಚನ್ನು ಪಡೆದು ಆಯುಷ್ಮಾನ್ ಭಾರತ ಯೋಜನೆಗೆ ನೋಂದಾವಣೆ ಮಾಡಿ, […]

ಸಿರಿಧಾನ್ಯ ಬಳಕೆಗಿದು ಸಕಾಲ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯೇ ಜಾಸ್ತಿಯಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಬೆಳೆಸುವ ಭರಾಟೆಯಲ್ಲಿ ಕ್ರಮೇಣ ಸಿರಿಧಾನ್ಯಗಳು ಮರೆತು ಹೋಗಿ ಹೊಸ ಪೀಳಿಗೆಯವರಿಗೆ ಸಿರಿಧಾನ್ಯವೆಂದರೆ ಏನೆಂದೇ ಗೊತ್ತಿಲ್ಲದಂತಾಗಿದೆ. ರಾಗಿ, ಸಜ್ಜೆ, ನವಣೆ, ಕೊರಲೆ, ಹಾರಕ, ಊದಲು, ಬರಗು, ಸಾಮೆ, ಜೋಳ ಈ ನವಧಾನ್ಯಗಳನ್ನು ‘ಸಿರಿಧಾನ್ಯಗಳು’ ಅಥವಾ ‘ಕಿರುಧಾನ್ಯ’ಗಳೆಂದು ಕರೆಯುತ್ತಾರೆ. ಇವುಗಳ ಪೈಕಿ ಆಧುನಿಕ ಬೇಸಾಯ ಕ್ರಮಗಳನ್ನು ಬಳಸಿ ಉತ್ಪಾದಿಸಲಾಗುತ್ತಿರುವ ಧಾನ್ಯಗಳ ಪೈಕಿ ಜೋಳ ಅಗ್ರಸ್ಥಾನದಲ್ಲಿದೆ. […]

ಆಜಾದಿ ಕಾ ಅಮೃತ ಮಹೋತ್ಸವ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಕಳೆದ 75 ವರ್ಷಗಳಿಂದ ನಮ್ಮ ಪೀಳಿಗೆ ಸ್ವಾತಂತ್ರ್ಯದ ಸವಿ ಜೀವನವನ್ನು ಅನುಭವಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಂದು ತಮ್ಮ ಜೀವ ತ್ಯಾಗ ಮಾಡಿದ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ಋಣ ಶಾಶ್ವತವಾಗಿ ನಮ್ಮ ಮೇಲಿದೆ. ಹಾಗೆ ನಮ್ಮ ಮುಂದಿನ ಪೀಳಿಗೆಗೂ ಇದೆ. ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಲ್ಪವೂ ಜಗ್ಗದೇ ಆಂಗ್ಲರ ಗುಂಡೇಟಿಗೆ ಸಿಂಹದoತೆ ಎದೆಯೊಡ್ಡಿದ್ದ ವೀರರನ್ನು ನಾವು ಎಂದಿಗೂ ಪೂಜಿಸಬೇಕು. ಅವರ ತ್ಯಾಗ, ಬಲಿದಾನದ ಫಲವಾಗಿ […]

ಸ್ವಾತಂತ್ರ್ಯ ಹಕ್ಕಲ್ಲ ಅದು ಜವಾಬ್ದಾರಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದೀಗ ಸ್ವಾತಂತ್ರೋತ್ಸವದ 25 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ನಮಗೆ ದೊರೆತ ಸ್ವಾತಂತ್ರ್ಯ ಸುಲಭವಾಗಿ ಬಂದAತದ್ದಲ್ಲ. ಇದು ಸಹಸ್ರಾರು ಜನರ ಬಲಿದಾನಕ್ಕೆ ಸಂದ ಗೌರವ. ನಾವು ಇಂದು ಅನುಭವಿಸುತ್ತಿರುವ ಈ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಶತಮಾನಗಳ ಕಾಲ ಹೋರಾಡಿ ಸುಖ, ನೆಮ್ಮದಿ, ಪ್ರಾಣ, ಆಸ್ತಿ – ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ನಾವು ಎಂದಿಗೂ ಮರೆಯಬಾರದು.ಸ್ವಾತಂತ್ರ್ಯ ಹೋರಾಟಗಾರರಲ್ಲಿ ಧೈರ್ಯ, ಛಲದೊಂದಿಗೆ ತಮ್ಮ […]