ಹಣತೆಯಿಂದ ಹಣತೆಯ ಹಚ್ಚುತಾ…

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಜಗತ್ತಿನಲ್ಲಿನಲ್ಲಿರುವ ಎಲ್ಲ ಚರಾಚರ ವಸ್ತುಗಳು, ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಲೇ ಇರುತ್ತವೆ. ಅದೇ ರೀತಿ ಮನುಷ್ಯನ ಅಂತಸ್ತು ಮತ್ತು ಮನಸ್ಥಿತಿಯು ಸಹಿತ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಾ ಇರುತ್ತದೆ. ಸ್ವಾತಂತ್ರö್ಯ ಸಿಕ್ಕ ನಂತರ ಸುಮಾರು ೩೦ ವರ್ಷಗಳವರೆಗೂ ದೇಶದಲ್ಲಿ ಸಾಕಷ್ಟು ಬಡತನ ಇತ್ತು. ಜನರಿಗೆ ಮೂಲ ಅಗತ್ಯಗಳಾದ ಅನ್ನ, ವಸ್ತç, ವಸತಿ ಇವುಗಳು ಸಿಕ್ಕುವುದೇ ಕಷ್ಟವಾಗಿತ್ತು. ಅಂದಿನ ಕಾಲದ ಬಡತನವೆಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ.ಎಂಬತ್ತರ ದಶಕದ ನಂತರ […]

ವಿನಯ ಸಂಪನ್ನತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜಗತ್ತಿನಲ್ಲಿ ಅನೇಕ ರೀತಿಯ ಸಂಪತ್ತುಗಳನ್ನು ಹೊಂದಿದವರಿರುತ್ತಾರೆ. ಕೆಲವರು ಗುಣ ಸಂಪನ್ನರಾದರೆ, ಕೆಲವರು ಧನ ಸಂಪನ್ನರು, ಜ್ಞಾನ ಸಂಪನ್ನರು, ಕಲಾ ಸಂಪನ್ನರು, ರೂಪ ಸಂಪನ್ನರು, ವಿದ್ಯಾ ಸಂಪನ್ನರು. ಈ ಎಲ್ಲಾ ಸಂಪತ್ತುಗಳಿದ್ದಾಗಲೇ ಸಮಾಜಕ್ಕೆ ಶೋಭೆ. ಆದರೆ ವಿದ್ಯೆ, ರೂಪ, ಗುಣ, ಧನ, ಕಲೆ, ಜ್ಞಾನ ಎಲ್ಲಾ ಇದ್ದು ವಿನಯವಂತರಾಗಿಲ್ಲದಿದ್ದರೆ, ಅಂಥವರೊAದಿಗೆ ವ್ಯವಹರಿಸುವುದು ಕಷ್ಟ. ಧನಿಕನಿದ್ದು ಅಹಂಕಾರಿಯಾದರೆ, ಸಹಾಯ ಯಾಚಿಸಲು ಆತನ ಬಳಿ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಜ್ಞಾನಿ, ವಿದ್ವಾಂಸ ವಿದ್ಯಾವಂತ ಅನ್ನಿಸಿಕೊಂಡವನಲ್ಲಿ […]

ಕಂತು ಬಾಕಿಗೆ ಗುಡ್ ಬೈ ಹೇಳೋಣ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ನಮ್ಮ ಸದಸ್ಯ ಬಂಧುಗಳಲ್ಲಿ ಒಂದು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸಿ ತನ್ಮೂಲಕ ಅವರ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು ನಮ್ಮ ಯೋಜನೆಯ ಪ್ರಮುಖ ಧ್ಯೇಯೋದ್ದೇಶಗಲ್ಲೊಂದಾಗಿದೆ. ಸಮಾನ ಮನಸ್ಕರನ್ನು ಒಗ್ಗೂಡಿಸಿ ಸಂಘ ರಚಿಸಿ ಅನೇಕ ಹಂತದ ತರಬೇತಿಗಳ ಮೂಲಕ ಒಂದು ಉತ್ತಮವಾದ ಆರ್ಥಿಕ ಶಿಸ್ತು, ಸಂಘ ಬದ್ಧತೆ ಹಾಗೂ ಕೆಲವು ಜೀವನ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇಂತಹ ಶಿಸ್ತುಬದ್ಧ ಸದಸ್ಯರನ್ನೊಳಗೊಂಡ ಗುಂಪುಗಳನ್ನು ಅರ್ಹತಾನುಸಾರವಾಗಿ ಬ್ಯಾಂಕ್‌ನೊAದಿಗೆ ಆರ್ಥಿಕ […]

ನಿರಾಕುಲತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಸುಖ ಅಂದರೇನು? ಒಂದು ರೀತಿಯಲ್ಲಿ ನಿರಾಕುಲತೆಯ ಹೆಸರೇ ಸುಖ. ಎಲ್ಲಿ ಆಕುಲತೆ, ವಿಕಲ್ಪಗಳಿರುತ್ತವೆಯೋ ಅಲ್ಲಿ ಸುಖವಿಲ್ಲ. ಬೆಳಗ್ಗಿನ ಉಪಾಹಾರ ಸೇವಿಸಬೇಕಾದರೆ ಇದನ್ನು ಯಾರು ಮಾಡಿದ್ದು! ಏನೇನು ಹಾಕಿರಬಹುದು? ಶುಚಿಯಾಗಿ ಮಾಡಿದ್ದಾರೋ, ಇಲ್ಲವೋ ಅಂತ ಯೋಚನೆಗಳು ಶುರುವಾದರೆ ತಿಂಡಿಯಲ್ಲಿ ಮನಸ್ಸು ನಿಲ್ಲುವುದಿಲ್ಲ. ಅದಕ್ಕೆ ಯೋಗಿಗಳು ಮನೆ, ಮಕ್ಕಳ ಗೊಡವೆ ಬಿಟ್ಟು ಆ ಮಟ್ಟಿನ ಆಕುಲತೆಯಿಂದ ದೂರ ಆದರು. ಕೆಲವರಿಗೆ ತಮ್ಮ ಮನೆ ಬಿಟ್ಟು ದೂರ ಹೋದರೆ ಆಕುಲತೆ ಜಾಸ್ತಿ. ತಿಂಡಿ ಸರಿಯಾಗಿ ಸೇರುವುದಿಲ್ಲ, […]

ಭ್ರಷ್ಟಾಚಾರ ವಿರೋಧಿ ನಡೆ ನಮ್ಮೆಲ್ಲರ ಶಿಷ್ಟಾಚಾರವಾಗಲಿ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಪ್ರತಿ ವರ್ಷ ಡಿಸೆಂಬರ್ ೦೯ ರಂದು “ಅಂತರಾಷ್ಟಿçÃಯ ಭ್ರಷ್ಟಾಚಾರ ವಿರೋಧಿ ದಿನ”ವನ್ನಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಒಂದು ದೇಶದಲ್ಲಿ ಭ್ರಷ್ಟಾಚಾರವು ಯಾವ ಮಟ್ಟದಲ್ಲಿ ಬೇರೂರಿದೆ ಎನ್ನುವುದು ಆ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಟ್ರಾನ್ಸ÷್ಫರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯು ವಿಶ್ವದ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟವನ್ನು ಸೂಚ್ಯಂಕಗಳ ಮೂಲಕ ತಿಳಿಸುವ ಅಧಿಕೃತ ಸಂಸ್ಥೆಯಾಗಿದ್ದು, ಪ್ರತಿವರ್ಷ ‘ಭ್ರಷ್ಟಾಚಾರ ಗ್ರಹಿಕೆ’ ಸೂಚ್ಯಂಕದ ಪಟ್ಟಿಯನ್ನು ನೀಡುತ್ತಿದೆ. […]

ಕ್ರೆಡಿಟ್ ಕಾರ್ಡ್ ನ ಸುರಕ್ಷಿತ ಬಳಕೆ ಹೇಗೆ?

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನಾಗರಿಕ ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಹಣ ಚಲಾಯಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಾಡಿನಲ್ಲಿದ್ದ ಮಾನವ, ತನ್ನ ವಸಾಹತುಗಳನ್ನು ನಿರ್ಮಿಸಿಕೊಂಡ ಮೊದಲ ದಿನಗಳಲ್ಲಿ ವಸ್ತುಗಳನ್ನು ಬದಲಾಯಿಸಿಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು. ನಂತರ ಚರ್ಮದ ನಾಣ್ಯ, ಕಲ್ಲಿನ ನಾಣ್ಯ, ಬೆಳ್ಳಿ, ಚಿನ್ನದ ನಾಣ್ಯಗಳು ಆಯಾ ದೇಶ, ಪ್ರದೇಶಗಳ ಅರ್ಥ ವ್ಯವಸ್ಥೆಯ ಸಂಕೇತವಾಗಿ ರೂಪುಗೊಂಡವು. ಚಿನ್ನ, ಬೆಳ್ಳಿಯ ಬೆಲೆ ಗಗನಕ್ಕೇರಿದ ನಂತರ ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ನಾಣ್ಯಗಳು ಹೊರಬಂದುವು. ಜಗತ್ತಿನಲ್ಲಿ ಬರೆಯುವ ಕಾಗದದ […]

ಇಂದಿನ ಮಕ್ಕಳೆ ಮುಂದಿನ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ರಾಯರು ಮೂರು – ನಾಲ್ಕು ವರ್ಷಗಳ ಬಳಿಕ ದೂರದ ಊರಿನಲ್ಲಿ ನೆಲೆಸಿದ್ದ ತನ್ನ ಎರಡನೆಯ ಮಗನನ್ನು ನೋಡಲು ಹೊರಟಿದ್ದರು. ಮಗನಿಗಿಂತಲೂ ಮೊಮ್ಮಗ ಆಯುರ್‍ನನ್ನು ನೋಡುವ ತವಕ ಎಲ್ಲಿಲ್ಲದಷ್ಟಿತ್ತು. 4 ವರ್ಷಗಳ ಹಿಂದೆ ನೋಡಿದ್ದಾಗ ಕೇವಲ ಮೂರು ವರ್ಷದ ಮಗುವಾಗಿದ್ದ ಆಯುರ್ ಈಗ ಎಷ್ಟು ತುಂಟನಾಗಿರಬಹುದೆಂದೆಲ್ಲಾ ಊಹಿಸುತ್ತಿದ್ದರು. ತನ್ನ ಅಂಗೈಯ ಎರಡರಷ್ಟು ಗಾತ್ರದ ದೊಡ್ಡ ಚಾಕಲೇಟನ್ನು ಆಯುರ್‍ಗೆ ಕೊಡಬೇಕೆಂದು ಹತ್ತಾರು ಅಂಗಡಿಗಳಲ್ಲಿ ಹುಡುಕಿ […]

ಹಬ್ಬಗಳ ಆಚರಣೆಯಲ್ಲಿ ಪರಿಸರ ಜಾಗೃತಿ ಇರಲಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಭಾರತ ಹಬ್ಬಗಳ ದೇಶ. ಮಳೆಗಾಲದಲ್ಲಿ ನಾಗರಪಂಚಮಿಯಂದು ನಮ್ಮ ಹಬ್ಬಗಳ ಸರಮಾಲೆ ಆರಂಭವಾಗುತ್ತದೆ. ಇದು ಮುಗಿಯುವುದು ನಮ್ಮೂರ ದೇವಸ್ಥಾನದ ಜಾತ್ರೋತ್ಸವದಲ್ಲಿ. ಇದರ ನಡುವೆಯೇ ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ, ಸೀಮಂತ ಇವೆಲ್ಲವೂ ನಮಗೆ ಹಬ್ಬದ ದಿನಗಳೇ ಆಗಿವೆ. ಹಬ್ಬವೆಂದರೆ ನೆಂಟರು, ಇಷ್ಟರು, ಊರಿನವರು ಸೇರುತ್ತಾರೆ. ಗೌಜಿ ಗಮ್ಮತ್ತು ಇರಲೇಬೇಕು. ನಮ್ಮ ದೇಶದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ನವರಾತ್ರಿಯಂದು ಬಣ್ಣದ ವೇಷ ಹಾಕಿ ಮೆರವಣಿಗೆ ಮಾಡಿ, ಊರೆಲ್ಲ ನರ್ತಿಸಿ, […]

ಗ್ರಾಮಾಭಿವೃದ್ಧಿ ಯೋಜನೆ ಎಂಬ ಕಲ್ಪವೃಕ್ಷ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಯೋಚಿಸಿದರೆ ಅದೊಂದು ‘ವಿಶ್ವರೂಪ ದರ್ಶನ’ವಾದಂತೆ ಭಾಸವಾಗುತ್ತದೆ. ದುರ್ಗೆಯ ಕೈಗಳಲ್ಲಿರುವ ವೈವಿಧ್ಯಮಯ ಆಯುಧಗಳಂತೆ ಕಾಲ ಕಾಲಕ್ಕೆ ಸಮಾಜದ ನಾನಾ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೊಸ ಯೋಚನೆ, ಚಿಂತನೆಗಳೊಂದಿಗೆ ಹೊಸ ಹೊಸ ಕಾರ್ಯಕ್ರಮಗಳು ಯೋಜನೆಯ ಮೂಲಕ ಮೂಡಿ ಬಂದಿರುವುದನ್ನು ನಾವು ನೋಡಬಹುದು. ಜನರಲ್ಲಿ ಉಳಿತಾಯದ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ವಾರದಲ್ಲಿ ರೂ.10ರಂತೆ ಉಳಿತಾಯದ ಉದ್ದೇಶವನ್ನಿಟ್ಟು ಆರಂಭವಾದ ಸಂಘಗಳು ಮುಂದೆ ‘ಪ್ರಗತಿಬಂಧು’ ಎಂದು ಕರೆಸಿಕೊಂಡವು. ಉಳಿತಾಯದೊಂದಿಗೆ ಶ್ರಮ ವಿನಿಮಯವೂ ನಡೆಯಿತು. ಈ […]

ಆರ್ಥಿಕ ಜಾಗೃತಿ ಮಾಸಾಚರಣೆ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಯೋಜನೆಯ ವತಿಯಿಂದ ಆರ್ಥಿಕ ಜಾಗೃತಿ ಮಾಸಾಚರಣೆಯನ್ನಾಗಿ ಆಚರಿಸಲಾಯಿತು. ಸಂಘಗಳಲ್ಲಿ ಹಣದ ವ್ಯವಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಹಣ ವರ್ಗಾವಣೆ ಸಂದರ್ಭದಲ್ಲಿ ನಿಯಮ ಪಾಲನೆ ಮಾಡುವುದು, ಹಣದ ಅವ್ಯವಹಾರಗಳನ್ನು ತಪ್ಪಿಸಿ ಸ್ವಸಹಾಯ ಸಂಘ ಚಳುವಳಿಯನ್ನು ಪಾರದರ್ಶಕವನ್ನಾಗಿ ಮಾಡುವುದೇ ಈ ಮಾಸಾಚರಣೆಯ ಉದ್ದೇಶ.ಲಕ್ಷ್ಮೀ ಚಂಚಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಣ ಕೈಯಿಂದ ಕೈಗೆ ವರ್ಗಾವಣೆ ಆಗುವಾಗ ಅದು ಯಾರ ಹಣ ಎಂದು ಕಂಡು ಹಿಡಿಯಲು ಸಾಧ್ಯವಾಗದಿರುವುದೇ […]