ಸ್ವಯಂ, ಸ್ವ್ವಸಹಾಯ ಮತ್ತು ಸಮಷ್ಠಿ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ‘ಅಂತ್ಯೋದಯ’, ‘ಸರ್ವೋದಯ’ ಹಾಗೂ ‘ಗ್ರಾಮಾಭ್ಯುದಯ’ ಎಂಬ ಮೂರು ಪರಿಕಲ್ಪನೆಗಳ ಮೂಲಕ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಕಂಡಿದ್ದರು. ‘ಅಂತ್ಯೋದಯ’ ಎನ್ನುವುದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯಾಗಿದ್ದು, ‘ಸರ್ವೋದಯ’ ಎನ್ನುವುದು ಸಮಾಜದ ಸರ್ವರ ಅಭಿವೃದ್ಧಿಯಾಗಿರುತ್ತದೆ. ಹೀಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಸರ್ವರ ಶ್ರೇಯಾಭಿವೃದ್ಧಿಯ ಮೂಲಕ ಪ್ರತಿ ಗ್ರಾಮಗಳು ಅಭ್ಯುದಯವಾಗಬೇಕೆನ್ನುವುದು ರಾಷ್ಟ್ರಪಿತರ ಕನಸಾಗಿತ್ತು.ಪೂಜ್ಯ ಡಾ|| ಡಿ. ವೀರೇಂದ್ರ […]
ಭಾರತೀಯ ಕಲ್ಪನೆಯಲ್ಲಿ ಕೃಷಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಭಾರತೀಯ ಕಲ್ಪನೆಯಲ್ಲಿ ಭೂಮಿಯನ್ನು “ತಾಯಿ” ಎಂದು ಸಂಬೋಧಿಸಲಾಗಿದೆ. ಗದ್ದೆಗಿಳಿಯುವ ಮುನ್ನ ಭೂಮಿ ಮುಟ್ಟಿ ನಮಸ್ಕರಿಸುವವರೂ ಇದ್ದಾರೆ. ಭೂಮಿಗೆ ಕಾಲಕಾಲಕ್ಕೆ ಬೇಕಾದ ನೀರು, ಗೊಬ್ಬರಗಳನ್ನು ಕೊಟ್ಟು ಅದು ಸದಾ ಜೀವಂತವಾಗಿರುವAತೆ ನಮ್ಮ ಹಿರಿಯರು ನೋಡಿಕೊಳ್ಳುತ್ತಿದ್ದರು. ಆದ್ದರಿಂದಲೇ ಸಾವಿರಾರು ವರ್ಷಗಳಿಂದ ನಾವು ಬೆಳೆ ತೆಗೆಯುತ್ತಿದ್ದರೂ ಮತ್ತೆ ಮತ್ತೆ ಭೂಮಿ ಬಸಿರಾಗುವುದನ್ನು ಕಾಣುತ್ತೇವೆ. ಮನುಷ್ಯ, ದನಕರು ಮಾತ್ರವಲ್ಲ ಅನೇಕ ರೀತಿಯ ಕ್ರಿಮಿ-ಕೀಟಗಳು, ಪ್ರಾಣಿ – ಪಕ್ಷಿಗಳು, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಈ ಗದ್ದೆ, ಭೂಮಿಯಿಂದಾಗಿ ಬದುಕುತ್ತಿವೆ. […]
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಮತ್ತು ಪ್ರಗತಿ ಬಂಧು ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕಲ್ಪಿಸಲು ಅನುಕೂಲವಾಗುವಂತೆ ಪ್ರತಿಷ್ಠಿತ SIDBI ಜೊತೆಗೆ ರೂ. 100 ಕೋಟಿಯ ನವೀಕೃತ ಒಪ್ಪಂದ ವಿನಿಮಯ
ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ‘ಏಷ್ಯಾ ಖಂಡದ ಶ್ರೇಷ್ಠ ನಾಯಕರು’ ಪ್ರಶಸ್ತಿ
ಆಘಾತಾನಂತರದ ಒತ್ತಡದ ಅಸ್ವಸ್ಥತೆ
ಕೆಲವೊಮ್ಮೆ ಹೀಗಾಗುತ್ತದೆ. ಎಲ್ಲವೂ ತಿಳಿಯಾಗಿದೆ ಎಂದುಕೊಂಡಿರುತ್ತೇವೆ. ಆದರೆ ಎಲ್ಲೋ ಮನಸಿನ ಆಳದಿಂದ ಕೆಲವು ಮಾನಸಿಕ ಬಿಕ್ಕಟ್ಟುಗಳು ಧುತ್ತನೆ ಅನಿರೀಕ್ಷಿತವಾಗಿ ಮೇಲೆದ್ದು ಬರುತ್ತವೆ. ಮನೋಬೇನೆಯನ್ನು ತರುತ್ತವೆ. ಇಂತಹ ತೀವ್ರ ತರವಾದ ಆತಂಕ, ಒತ್ತಡಗಳಿಂದ ಕೂಡಿದ ಮನೋ ಬೇನೆಗಳಿಗೆ ಕಾರಣಗಳು ಇಂದು ನಿನ್ನೆಯದ್ದಲ್ಲ. ಬಲು ಕಾಲ ಹಿಂದಿನ ಬದುಕಿನಲ್ಲಿ ನಡೆದಿರಬಹುದಾದ ಮಾನಸಿಕ ಆಘಾತಗಳು. ಹಾಗಾಗಿ ಈ ರೀತಿಯ ಮನೋಬೇನೆಯನ್ನು ‘ಆಘಾತಾನಂತರದ ಒತ್ತಡದ ಅಸ್ವಸ್ಥತೆ’ ಎನ್ನುತ್ತೇವೆ.ಕಾರಣಗಳು ಮತ್ತು ಲಕ್ಷಣಗಳು ಈ ರೀತಿಯಾದ ಸಮಸ್ಯೆಗೆ ಮೂಲ ಕಾರಣಗಳು ಬಲು ದೊಡ್ಡದಾದ ಆಘಾತಗಳು. ಈ […]
ಡಿಜಿಟಲ್ ವ್ಯವಹಾರದ ಹೊಸ ಹೆಜ್ಜೆ ‘ಇ – ರುಪಿ’
ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರಕಾರ ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್ ಹೀಗೆ ಹಲವಾರು ಡಿಜಿಟಲ್ ಮಾಧ್ಯಮಗಳನ್ನು ಪರಿಚಯಿಸಿದೆ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಮೂಲಕ ಮಧ್ಯವರ್ತಿಮುಕ್ತ ದುನಿಯಾವನ್ನು ಪರಿಚಯಿಸುವ ಕೆಲಸವು ವೇಗವಾಗಿ ನಡೆಯುತ್ತಿದೆ. ಆದರೆ ಫಲಾನುಭವಿಗಳಿಗೆ ಸರಕಾರದಿಂದ ನೀಡಿದ ಹಣವನ್ನು ಅವರು ಅದೇ ಕೆಲಸಕ್ಕೆ ಬಳಸುತ್ತಿಲ್ಲ, ಅರ್ಹತೆ ಇಲ್ಲದವರು ಕೆಲವು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಸರಕಾರದ ಬಳಿ ಇತ್ತು. ಇದನ್ನು […]
ಸ್ವಸಹಾಯ ಸಂಘಗಳಿಗೆ ರಕ್ಷಣೆ ನೀಡುವ ‘ಪ್ರಗತಿರಕ್ಷಾ ಕವಚ’
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಸ್ವಸಹಾಯ ಸಂಘಗಳಿoದ ಇದೀಗ ಸುಮಾರು 40 ಲಕ್ಷ ಸದಸ್ಯರು ಸಾಲಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನವರು ಮಹಿಳೆಯರೇ ಆಗಿರುವುದರಿಂದ ಉದ್ದೇಶಗಳಿಗೆ ಪಡೆದುಕೊಂಡ ಸಾಲಗಳನ್ನು ಮನೆಯಲ್ಲಿ ದುಡಿಯುತ್ತಿರುವ ಗಂಡಸರಿಗೆ ನೀಡಿ ವ್ಯವಹಾರ ನಡೆಸುತ್ತಾರೆ. ಪ್ರತಿ ವಾರ ಕಂತನ್ನು ಪಾವತಿಸುತ್ತಾರೆ. ಅಕಸ್ಮಾತ್ ಸಾಲ ಪಡೆದುಕೊಂಡ ಸದಸ್ಯರಾಗಲಿ ಅಥವಾ ಅವರು ಪಡೆದುಕೊಂಡ ಹಣವನ್ನು ವಿನಿಯೋಗಿಸುವ ಕುಟುಂಬದ ಸದಸ್ಯರಾಗಲಿ ಮರಣ ಹೊಂದಿದರೆ ವ್ಯವಹಾರ ಕುಂಠಿತವಾಗಿ ಸಾಲ ಮರುಪಾವತಿ ಕಷ್ಟವಾಗುತ್ತದೆ. ಕಂತು ಬಾಕಿಯಾದೊಡನೆ ಪ್ರಥಮವಾಗಿ […]
ಗ್ರಾಮೀಣ ಭಾರತ, ಅದುವೇ ಭಾರತ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಮಹಾತ್ಮ ಗಾಂಧೀಜಿಯವರು ‘ನೈಜ ಭಾರತದ ದರ್ಶನ ಗ್ರಾಮೀಣ ಭಾರತದಲ್ಲಿ’ ಎಂದು ಸಾರಿದ್ದರು ಹಾಗೂ ಗ್ರಾಮದ ಅಭ್ಯುದಯದಿಂದ ಮಾತ್ರ ಭಾರತದ ಅಭ್ಯುದಯ ಸಾಧ್ಯ ಎಂದು ಕನಸು ಕಂಡಿದ್ದರು. ದೇಶದ ಅರ್ಥ ವ್ಯವಸ್ಥೆಯಲ್ಲಿ ನಗರಗಳ ಆರ್ಥಿಕ ಬೆಳವಣಿಗೆ ಮಿಂಚಿನ ವೇಗದಲ್ಲಿ ಬೆಳೆಯುತ್ತಿದ್ದರೂ ಕೂಡ, ಗ್ರಾಮೀಣ ಭಾರತವು ಈಗಲೂ ಆರ್ಥಿಕತೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಸ್ಥಾನವನ್ನು ಪಡೆದಿದೆ. ದೇಶದ ಒಟ್ಟು ಜನಸಂಖ್ಯೆಯಾದ 139 ಕೋಟಿಯಲ್ಲಿ ಶೇಕಡಾ 65ರಷ್ಟು […]
ಕರೆಂಟಿಲ್ಲದ ಆ ದಿನ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನಾವು ಚಿಕ್ಕವರಿರುವಾಗ ಹಳ್ಳಿಯಲ್ಲಿರುವ ನಮ್ಮ ಅಜ್ಜನ ಮನೆಯಲ್ಲಿ ಕರೆಂಟಿರಲಿಲ್ಲ. ಆದ್ದರಿಂದ ಹಗಲೆಲ್ಲಾ ಗುಡ್ಡ, ಬೆಟ್ಟ, ಗದ್ದೆ ಎಲ್ಲಿ ಬೇಕೆಂದರಲ್ಲಿ ಅಲೆದಾಡಿ ರಾತ್ರಿ ಆಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದೆವು. ಬೇಗ ಊಟ ಮುಗಿಸಿದರೆ ಮತ್ತೆ ನೀರವ ಮೌನ, ಕತ್ತಲೆ. ಅಲ್ಲಿ ನಮ್ಮ ಸಹಾಯಕ್ಕೆ ಬರುತ್ತಿದ್ದವರು ಆಳು ಮಕ್ಕಳು. ಅವರಲ್ಲಿ ಅನೇಕ ಗಾದೆ ಮಾತುಗಳು, ಒಗಟು, ಜಾನಪದ ಕತೆ, ಭೂತಪ್ರೇತದ ಕತೆಗಳ ಮುಗಿಯಲಾರದ ಭಂಡಾರವೇ ಇರುತ್ತಿತ್ತು. ಜೊತೆಗೆ ಮನೆಯ ಹಿರಿಯರು, ಅಮ್ಮ, ದೊಡ್ಡಮ್ಮನವರ ಶಾಸ್ತ್ರ, ಕಾವ್ಯಗಳ […]
ಶ್ರೀ ಹೆಗ್ಗಡೆಯವರಿಗೆ ‘ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ’
ತಾಯಿ ಹಾಲೆಂಬ ಅಮೃತ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ತಾಯ್ತನ’ ಎನ್ನುವುದು ಬರಿಯ ಶಬ್ದವಲ್ಲ, ಅದೊಂದು ಅನುಭವ. ಹೆಣ್ಣಿಗೆ ಮಾತ್ರ ದೇವರು ಕೊಟ್ಟ ವಿಶೇಷ ವರ. ಈ ಅನುಭವವನ್ನು ಕಳೆದುಕೊಂಡರೆ ದೇವರು ಕೊಟ್ಟ ವರವನ್ನು ಕಳಕೊಂಡಂತೆ. ‘ತಾಯ್ತನ’ ಎಂಬ ಮಾತಿದೆ ‘ತಂದೆತನ’ ಎಂಬ ಮಾತು ಎಲ್ಲೂ ಇಲ್ಲ.ತಾಯಿ ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುತ್ತಾಳೆ. ಹಾಲುಣಿಸುವುದೆಂದರೆ ಬರಿಯ ಹಾಲಷ್ಟೇ ಅಲ್ಲ, ಹಾಲಿನ ಜತೆಗೆ ತಾಯಿ ತನ್ನ ಪ್ರೀತಿ, ಅಭಿಮಾನ, ವಾತ್ಸಲ್ಯದ ಧಾರೆಯನ್ನು ಮಗುವಿನೆಡೆಗೆ ಹರಿಸುತ್ತಾಳೆ. ಇದು ತಾಯಿ ಮಗುವಿನ ಮಧ್ಯೆ ಪರಸ್ಪರ ಬಾಂಧವ್ಯ […]
ಬಹು ಬೆಳೆಗಳಿಂದ ಬಾಳು ಬೆಳಗಿತು

-ವೃಷಾಂಕ್ ಖಾಡಿಲ್ಕರ್ ನಿಪ್ಪಾಣಿ ತಾಲೂಕು ತಂಬಾಕು ಮತ್ತು ಕಬ್ಬು ಬೆಳೆಗೆ ಪ್ರಸಿದ್ಧಿ ಪಡೆದಿದೆ. ಹೆಚ್ಚಿನ ಬೆಳೆಗಾರರು ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದರೆ ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಯರನಾಳ ಗ್ರಾಮದ ಶತ್ರುಘ್ನ ಶಿವರಾಂ ದಿವೋಟೆಯವರ ಹೊಲ ವರ್ಷವಿಡೀ ಅಲ್ಪಾವಧಿ ಬಹು ಬೆಳೆಗಳಾದ ವಿವಿಧ ಬಗೆಯ ಸೊಪ್ಪು – ತರಕಾರಿಗಳಿಂದ ಕಂಗೊಳಿಸುತ್ತಿದೆ. ಬಹು ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಕೊರೊನಾ ಲಾಕ್ಡೌನ್ನಲ್ಲಿಯೂ ಹತ್ತಾರು ಬೆಳೆಗಳು ಇಳುವರಿಯನ್ನು ನೀಡಿವೆ.ಇದನ್ನು ಮಾರಾಟ ಮಾಡಿ ನೆಮ್ಮದಿಯ ಜೀವನವನ್ನು ನಡೆಸಿದ್ದಾರೆ. ‘ತನ್ನ ಬದುಕಿನ ದಾರಿಯನ್ನು ಬದಲಿಸಿದ್ದು ಗ್ರಾಮಾಭಿವೃದ್ಧಿ […]
ಬಾಲ್ಯವನ್ನು ಕಸಿದುಕೊಳ್ಳುವ ‘ಬಾಲ್ಯ ವಿವಾಹ’
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ಬಂದಿದೆ. ಎಲ್ಲಾದರೂ ಬಾಲ್ಯ ವಿವಾಹಗಳು ನಡೆಯುವ ಸುದ್ದಿ ಗೊತ್ತಾದರೆ ಇಲಾಖೆಗಳ ಅಧಿಕಾರಿಗಳು ಅಲ್ಲಿಗೆ ದೌಡಾಯಿಸುತ್ತಾರೆ. ಅಂತಹ ವಿವಾಹಗಳನ್ನು ತಡೆಹಿಡಿಯುತ್ತಾರೆ. ಸರಕಾರ ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಆದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಲಾಕ್ಡೌನ್ನ ಸಂದರ್ಭದಲ್ಲಂತೂ ಹೆಚ್ಚಿನ […]
ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಹಿಂದೆ ಕೆಲವೇ ವಲಯಗಳಿಗೆ ಸೀಮಿತವಾಗಿದ್ದ ಆನ್ಲೈನ್ ವ್ಯವಸ್ಥೆಯು ಕೋವಿಡ್ನ ಪ್ರಭಾವದಿಂದಾಗಿ ತನ್ನ ಆಧಿಪತ್ಯವನ್ನು ಎಲ್ಲೆಡೆ ಸ್ಥಾಪಿಸಿತು. ಆನ್ಲೈನ್ ಕ್ಲಾಸ್, ಆನ್ಲೈನ್ ಮೀಟಿಂಗ್, ಆನ್ಲೈನ್ ಪ್ರೋಗ್ರಾಮ್ ಹೀಗೆ ಎಲ್ಲವೂ ಆನ್ಲೈನ್ ಆಗತೊಡಗಿದೆ. ಈ ಆನ್ಲೈನ್ನ ಪ್ರಕ್ರಿಯೆಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಸಾಧನ ‘ಸ್ಮಾರ್ಟ್ ಫೋನ್’ ಆಗಿದೆ. ಈ ಸ್ಮಾರ್ಟ್ ಫೋನ್ ತುಂಬಾ ಸ್ಮಾರ್ಟ್ ಆಗಿದ್ದು, ಒಂದು ಹರಿತವಾದ ಸಾಧನಕ್ಕೆ ಹೋಲಿಸಬಹುದು.ವೈದ್ಯರ ಕೈಗಳಲ್ಲಿ ಹರಿತವಾದ […]
ಬದುಕಿರಿ, ಬದುಕಲು ಬಿಡಿ – ಪೂಜ್ಯರಿಂದ ಪರಿಸರ ಸಂರಕ್ಷಣೆಯ ನೂತನ ಸೂತ್ರ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನಮ್ಮ ಸಂಸ್ಥೆಯ ನೆಚ್ಚಿನ ಅಧ್ಯಕ್ಷರು, ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು, ಪರಿಸರ ಪ್ರೇಮಿಗಳೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಪಶ್ಚಿಮಘಟ್ಟದ ತಪ್ಪಲಿನ ಧರ್ಮಸ್ಥಳದಲ್ಲಿ ಹುಟ್ಟಿ ಬೆಳೆದರೂ, ವರ್ಷಕ್ಕೆ ಒಂದೆರಡು ಬಾರಿಯಾದರೂ ಜನರಿಂದ ದೂರವಾಗಿ, ಪ್ರಕೃತಿಯ ಮಡಿಲಲ್ಲಿ ಕಳಸದ ಹತ್ತಿರದ ತಮ್ಮ ತೋಟದಲ್ಲಿ ಹಲವು ಸಮಯ ಕಳೆಯುವುದು ಪೂಜ್ಯರ ವಾಡಿಕೆ. ಅಲ್ಲದೆ ಜಾಗತಿಕ ಪ್ರವಾಸದ ಸಮಯದಲ್ಲಿ ಪ್ರಪಂಚದ ವಿವಿಧ ಪ್ರಾಕೃತಿಕ ಸ್ಥಳಗಳಲ್ಲಿ ಅವರು ಹೆಚ್ಚ್ಚಿನ ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ. ಉತ್ತಮ ಛಾಯಾಗ್ರಾಹಕರಾಗಿರುವ […]
ಚಾರ್ಮಾಡಿಯಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆಗೆ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ
ನಾವೆಷ್ಟು ಜವಾಬ್ದಾರರು?
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಏನಾದರೂ ಒಂದು ಒಳ್ಳೆಯ ಕೆಲಸ ಆದರೆ ತಕ್ಷಣ ‘ಅದು ನಾನು ಮಾಡಿದ್ದು, ನಾನು ಹೇಳಿದ್ದು, ನನ್ನಿಂದಾಗಿ ಆಗಿದ್ದು’ ಇತ್ಯಾದಿ ಮಾತುಗಳು ಬರುತ್ತವೆ. ಕೆಟ್ಟದಾದಾಗ ಅದಕ್ಕೆ ಯಾರೂ ಹೊಣೆಗಾರರಿರುವುದಿಲ್ಲ. ನಮ್ಮ ಹಕ್ಕು, ಸವಲತ್ತುಗಳ ಬಗ್ಗೆ ನಮಗೆಲ್ಲ್ಲಾ ಚೆನ್ನಾಗಿ ಗೊತ್ತಿದೆ. ಆದರೆ ಕರ್ತವ್ಯದ ವಿಚಾರ ಬಂದಾಗ ಅಲ್ಲಿ ನಾವಿಲ್ಲ. ಇತ್ತೀಚೆಗೆ ವಾಟ್ಸಪ್ ಮೆಸೇಜ್ ಗಳ ಸೃಷ್ಟಿಕರ್ತರು ಯಾರೆಂಬುದೇ ಗೊತ್ತಿರುವುದಿಲ್ಲ. ನಮಗೆ ಬರುವ ಮೆಸೇಜ್ ಗಳು ಫಾರ್ವಡ್ ಆಗಿದ್ದು, ನಾವು ಕಳುಹಿಸುವುದೂ ಹಾಗೆ. ನನಗೆ ಬರುವ […]
ಶಹಬ್ಬಾಸ್ ಭಾರತ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಭಾರತ ದೇಶದಲ್ಲಿ ಕೋವಿಡ್ನ ಎರಡನೇ ಅಲೆ ತೀವ್ರವಾಗಿ ಅಪ್ಪಳಿಸಿದಾಗ ಇಡೀ ಜಗತ್ತೇ ಭಾರತದತ್ತ ಆತಂಕದಿಂದ ನೋಡುವಂತಾಯಿತು. ಮೇ 7 ರ ಪ್ರಕಾರ ಒಂದೇ ದಿನದಲ್ಲಿ ಸುಮಾರು 4 ಲಕ್ಷ ಜನರು ಸೋಂಕಿತರಾಗಿದ್ದು, ಅದೇ ದಿನ 4,187 ಜನ ಮರಣ ಹೊಂದಿದಾಗ ಭಾರತ ದೇಶವು ಇತಿಹಾಸದಲ್ಲೇ ಕಂಡರಿಯದ ದುರಂತವನ್ನು ಕಾಣಬಹುದೆಂದು ಎಲ್ಲರೂ ಆತಂಕಪಟ್ಟಿದ್ದರು. ಆದರೆ ಕೇವಲ ಒಂದುವರೆ ತಿಂಗಳ ಅವಧಿಯಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ […]
ರಬ್ಬರ್ ತೋಟದಲ್ಲಿ ಗೇರು ಹಣ್ಣಿನ ಘಮ
ಶ್ರೀ ಹೆಗ್ಗಡೆ ಕುಟುಂಬದವರಿಂದ ‘ಯಂತ್ರಶ್ರೀ’ ಕಾರ್ಯಕ್ರಮ ವೀಕ್ಷಣೆ

ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಬೃಹತ್ ‘ಯಂತ್ರಶ್ರೀ ಅಭಿಯಾನ’ದ ಪ್ರಾತ್ಯಕ್ಷಿತೆಯನ್ನು ಧರ್ಮಸ್ಥಳದಲ್ಲಿ ಪೂಜ್ಯರು ಮತ್ತು ಅವರ ಕುಟುಂಬದವರು ಪರಿಶೀಲಿಸಿ ಪ್ರೋತ್ಸಾಹಿಸಿದರು.