ಮನಸ್ಸು ನಿರ್ಮಲಗೊಳಿಸುವ ಶ್ರದ್ಧಾಕೇಂದ್ರಗಳು

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ನಾವು ಯಾವುದೇ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡಿದಾಗ ಮೊದಲು ನಮ್ಮನ್ನು ಆಕರ್ಷಿಸುವುದು ಅಲ್ಲಿನ ಪರಿಸರ. ಸುತ್ತಮುತ್ತಲಿನ ಪರಿಸರ ಆಹ್ಲಾದಕರವಾಗಿ ಸ್ವಚ್ಛತೆಯಿಂದ ಕೂಡಿದ್ದರೆ ಅಂತಹ ಶ್ರದ್ಧಾಕೇಂದ್ರದ ಬಗ್ಗೆ ನಮಗೆ ಗೊತ್ತಿಲ್ಲದಂತೆ ನಮ್ಮಲ್ಲೊಂದು ಭಕ್ತಿಯ ಭಾವನೆ ಉದ್ದೀಪನಗೊಳ್ಳುತ್ತದೆ.ಶ್ರದ್ಧಾಕೇಂದ್ರಗಳೆoದರೆ ಅವು ಕೇವಲ ಭಕ್ತಿಯ ಕೇಂದ್ರಗಳಷ್ಟೇ ಆಗಿರದೆ ಸ್ವಚ್ಛತೆಯ ಕೇಂದ್ರಗಳು ಆಗಿರಬೇಕು. ಹಾಗಾದರೆ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಯಾರ ಹೊಣೆ? ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರದ್ಧಾಕೇಂದ್ರಗಳ ಶುಚಿತ್ವ ಕೇವಲ ಅಲ್ಲಿನ ಆಡಳಿತ ಮಂಡಳಿಯವರ ಜವಾಬ್ದಾರಿಯಷ್ಟೇ ಅಲ್ಲ, ಅದು ಪ್ರತಿಯೊಬ್ಬ […]