ಆರ್ಥಿಕ ಜಾಗೃತಿ ಮಾಸಾಚರಣೆ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಯೋಜನೆಯ ವತಿಯಿಂದ ಆರ್ಥಿಕ ಜಾಗೃತಿ ಮಾಸಾಚರಣೆಯನ್ನಾಗಿ ಆಚರಿಸಲಾಯಿತು. ಸಂಘಗಳಲ್ಲಿ ಹಣದ ವ್ಯವಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಹಣ ವರ್ಗಾವಣೆ ಸಂದರ್ಭದಲ್ಲಿ ನಿಯಮ ಪಾಲನೆ ಮಾಡುವುದು, ಹಣದ ಅವ್ಯವಹಾರಗಳನ್ನು ತಪ್ಪಿಸಿ ಸ್ವಸಹಾಯ ಸಂಘ ಚಳುವಳಿಯನ್ನು ಪಾರದರ್ಶಕವನ್ನಾಗಿ ಮಾಡುವುದೇ ಈ ಮಾಸಾಚರಣೆಯ ಉದ್ದೇಶ.ಲಕ್ಷ್ಮೀ ಚಂಚಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಣ ಕೈಯಿಂದ ಕೈಗೆ ವರ್ಗಾವಣೆ ಆಗುವಾಗ ಅದು ಯಾರ ಹಣ ಎಂದು ಕಂಡು ಹಿಡಿಯಲು ಸಾಧ್ಯವಾಗದಿರುವುದೇ […]

ಸ್ವಯಂ, ಸ್ವ್ವಸಹಾಯ ಮತ್ತು ಸಮಷ್ಠಿ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ‘ಅಂತ್ಯೋದಯ’, ‘ಸರ್ವೋದಯ’ ಹಾಗೂ ‘ಗ್ರಾಮಾಭ್ಯುದಯ’ ಎಂಬ ಮೂರು ಪರಿಕಲ್ಪನೆಗಳ ಮೂಲಕ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಕಂಡಿದ್ದರು. ‘ಅಂತ್ಯೋದಯ’ ಎನ್ನುವುದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯಾಗಿದ್ದು, ‘ಸರ್ವೋದಯ’ ಎನ್ನುವುದು ಸಮಾಜದ ಸರ್ವರ ಅಭಿವೃದ್ಧಿಯಾಗಿರುತ್ತದೆ. ಹೀಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಸರ್ವರ ಶ್ರೇಯಾಭಿವೃದ್ಧಿಯ ಮೂಲಕ ಪ್ರತಿ ಗ್ರಾಮಗಳು ಅಭ್ಯುದಯವಾಗಬೇಕೆನ್ನುವುದು ರಾಷ್ಟ್ರಪಿತರ ಕನಸಾಗಿತ್ತು.ಪೂಜ್ಯ ಡಾ|| ಡಿ. ವೀರೇಂದ್ರ […]

ಭಾರತೀಯ ಕಲ್ಪನೆಯಲ್ಲಿ ಕೃಷಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಭಾರತೀಯ ಕಲ್ಪನೆಯಲ್ಲಿ ಭೂಮಿಯನ್ನು “ತಾಯಿ” ಎಂದು ಸಂಬೋಧಿಸಲಾಗಿದೆ. ಗದ್ದೆಗಿಳಿಯುವ ಮುನ್ನ ಭೂಮಿ ಮುಟ್ಟಿ ನಮಸ್ಕರಿಸುವವರೂ ಇದ್ದಾರೆ. ಭೂಮಿಗೆ ಕಾಲಕಾಲಕ್ಕೆ ಬೇಕಾದ ನೀರು, ಗೊಬ್ಬರಗಳನ್ನು ಕೊಟ್ಟು ಅದು ಸದಾ ಜೀವಂತವಾಗಿರುವAತೆ ನಮ್ಮ ಹಿರಿಯರು ನೋಡಿಕೊಳ್ಳುತ್ತಿದ್ದರು. ಆದ್ದರಿಂದಲೇ ಸಾವಿರಾರು ವರ್ಷಗಳಿಂದ ನಾವು ಬೆಳೆ ತೆಗೆಯುತ್ತಿದ್ದರೂ ಮತ್ತೆ ಮತ್ತೆ ಭೂಮಿ ಬಸಿರಾಗುವುದನ್ನು ಕಾಣುತ್ತೇವೆ. ಮನುಷ್ಯ, ದನಕರು ಮಾತ್ರವಲ್ಲ ಅನೇಕ ರೀತಿಯ ಕ್ರಿಮಿ-ಕೀಟಗಳು, ಪ್ರಾಣಿ – ಪಕ್ಷಿಗಳು, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಈ ಗದ್ದೆ, ಭೂಮಿಯಿಂದಾಗಿ ಬದುಕುತ್ತಿವೆ. […]

ಸ್ವಚ್ಛತೆಯಿಂದ ಉತ್ತಮ ಆರೋಗ್ಯ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ನಮ್ಮ ದೇಶದಲ್ಲಿ ವಿಶೇಷವಾಗಿ ನಮ್ಮ ಪೂರ್ವಜರು ಕೊರೊನಾದಂತಹ ವ್ಯಾಧಿ, ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದಕ್ಕಾಗಿ ಹಾಗೂ ಆರೋಗ್ಯಪೂರ್ಣ ಬದುಕಿಗಾಗಿ ಸ್ವಚ್ಛತೆಯ ಪಾಠವನ್ನು ಸಂಪ್ರದಾಯ ಮತ್ತು ಆಚರಣೆಗಳ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ. ಹಿರಿಯರು ವೈಯಕ್ತಿಕ ಆರೋಗ್ಯದ ಕುರಿತು ಹೆಚ್ಚಿನ ಚಿಂತನೆಯನ್ನು ನಡೆಸುತ್ತಿದ್ದರು. ಅನೇಕರು ಇದನ್ನು “ಮಡಿ’’ ಎಂದು ಕಲ್ಪನೆ ಮಾಡಿಕೊಂಡು ಮೂಗು ಮುರಿದದ್ದೂ ಇದೆ. ದೇವಸ್ಥಾನಗಳಿಗೆ ಹೋಗುವಾಗ ಸ್ನಾನ ಮಾಡಿ, ಮಡಿ ಬಟ್ಟೆ ಉಟ್ಟುಕೊಂಡು ಹೋಗುತ್ತಿದ್ದೆವು. ಹಳ್ಳಿಗಳಲ್ಲಿ ಇಂದಿಗೂ ಈ ಸಂಪ್ರದಾಯವಿದೆ. ಇದು […]