ನಾವೇನಾಗಬೇಕು ನಿರ್ಧಾರ ನಮ್ಮದೇ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಂಧದ ಮರಕ್ಕೆ ಇತರ ಎಲ್ಲಾ ಮರಗಳಿಗಿಂತ ಬೆಲೆ ಜಾಸ್ತಿ. ಹಾಗಂತ ಆ ಮರ ಯಾವುದೇ ಹೂ, ಹಣ್ಣುಗಳನ್ನು ಕೊಡುವುದಿಲ್ಲ. ಅದರ ಸುವಾಸನೆಯಿಂದಾಗಿ ಅದರ ಚಂದನ ದೇವರಿಗೆ ಪ್ರಿಯವಾಗುತ್ತದೆ. ಪ್ರತಿಯೊಂದು ಮರಗಿಡಗಳೂ ಪ್ರಕೃತಿ, ಪ್ರಾಣಿ, ಪಕ್ಷಿ, ಮನುಷ್ಯರಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ. ಕೆಲವು ಮರಗಳಲ್ಲಿ ಹೂ, ಹಣ್ಣುಗಳಿರದಿದ್ದರೂ ಅದು ವಿಶಾಲವಾಗಿ ಹಬ್ಬಿಕೊಂಡಿರುವ ತನ್ನ ಕೊಂಬೆ ಹಾಗೂ ತುಂಬಿಕೊoಡ ಹಸಿರೆಲೆಗಳಿಂದಾಗಿ ದಾರಿ ಹೋಕರಿಗೆ ದಣಿವರಿಸಿಕೊಳ್ಳಲು ಸಹಾಯಮಾಡುತ್ತವೆ. ಕೆಲವು ಮರಗಳು ಕೊಂಬೆಗಳಿಲ್ಲದೆ ಉದ್ದಕ್ಕೆ ಬೆಳೆದರೂ […]

ದಿಢೀರ್‌ ಶ್ರೀಮಂತರಾಗುವ ದುರಾಸೆಯಿಂದ ದೂರವಿರಿ

ಡಾ| ಎಲ್. ಎಚ್. ಮಂಜುನಾಥ್ ತೀರಾ ಇತ್ತೀಚೆಗೆ ಧಾರುಣವಾದ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರನ್ನು ಹತ್ಯೆ ಮಾಡಿ ಅವರು ಪ್ರಯಾಣಿಸುತ್ತಿದ್ದ ಕಾರನ್ನೇ ಸುಡಲಾಗಿತ್ತು. ಈ ಹತ್ಯೆಯ ಜಾಡನ್ನು ಹಿಡಿದು ಹೊರಟ ಪೊಲೀಸರ ತನಿಖೆಯಿಂದ ಹೊರಬಂದ ವಿಚಾರವೆಂದರೆ, ಈ ಮೂವರು ಸುಲಭವಾಗಿ ದೊರೆಯುವ ಚಿನ್ನದ ಆಸೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಜೋಡಿಸಿಕೊಂಡು ತುಮಕೂರಿಗೆ ತೆರಳಿ, ಅಲ್ಲಿ ಚಿನ್ನವನ್ನು ಮಾರುತ್ತೇನೆಂದು ನಂಬಿಸಿದ ವ್ಯಕ್ತಿಯ ಕೈಯಲ್ಲಿ ಹಣವನ್ನಿತ್ತು, ಅವರಿಂದಲೇ ಅಮಾನುಷವಾಗಿ ಕೊಲೆಗೀಡಾಗಿದ್ದರು. ವ್ಯಕ್ತಿಯೋರ್ವ […]

ಬಡವರ ಕನಸಿನ ಮನೆಯನ್ನುನನಸು ಮಾಡಿದ ಯೋಜನೆ

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಹಿಂದಿನ ಸಂಚಿಕೆಯಲ್ಲಿ ಗೃಹ ಸಾಲ ಪಡೆಯಲು ಸುಮಾರು 16 ದಾಖಲೆಗಳನ್ನು ನೀಡಿ ಬ್ಯಾಂಕಿನ ವಕೀಲರಿಂದ ಲೀಗಲ್ ಒಪಿನಿಯನ್ ಪಡೆದು, ಮುಂದೆ ಏನು ಮಾಡಬೇಕೆಂದು ತಿಳಿಸುತ್ತೇನೆ ಎಂದಿದ್ದೆ. ಮುಂದಿನ ಹಂತವನ್ನು ಈಗ ತಿಳಿದುಕೊಳ್ಳೋಣ.ಗೃಹ ಸಾಲ ಬೇಕಾದ ಗ್ರಾಹಕ ಅನೇಕ ಒಡಾಟಗಳೊಂದಿಗೆ ಲೀಗಲ್ ಒಪಿನಿಯನ್ ಪಡೆದ ನಂತರ ಆ ಎಲ್ಲಾ ದಾಖಲೆಗಳೊಂದಿಗೆ ಲೀಗಲ್ ಒಪಿನಿಯನ್ ಅನ್ನು ಬ್ಯಾಂಕ್‌ನ ಮ್ಯಾನೇಜರ್‌ಗೆ ಸಲ್ಲಿಸಬೇಕು. ಮ್ಯಾನೆಜರ್ ಅವುಗಳನ್ನು ಪರಿಶೀಲಿಸಿ ಮುಂದಿನ ಹಂತವಾದ ಬ್ಯಾಂಕ್ ಇಂಜಿನಿಯರ್‌ನ ಪರಿಶೀಲನೆ ಮತ್ತು […]

ಆನಂದದಿಂದ ಧಿರ್ಘಾಯುಷ್ಯ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಾವು ದೈಹಿಕವಾಗಿ ಆರೋಗ್ಯಪೂರ್ಣವಾಗಿ ಇರಬೇಕಾದರೆ ಕೆಲವು ದಿನಚರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆರೋಗ್ಯಪೂರ್ಣವಾದ ಆಹಾರದ ಕ್ರಮ, ಸರಳ ಜೀವನ ಮತ್ತು ಒಳ್ಳೆಯ ವಾತಾವರಣ ಹೆಚ್ಚು ಸಮಯ ಬದುಕುವುದಕ್ಕೆ ಕಾರಣವಾಗುತ್ತದೆ ಎಂಬುದಾಗಿ ಜಪಾನೀಯರ ಅಭಿಪ್ರಾಯ. ಪ್ರಪಂಚದಲ್ಲಿ ದೀರ್ಘಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಜಪಾನ್ ದೇಶದ ಇಕಿಗಾವಾ ಎಂಬ ಪ್ರದೇಶದಲ್ಲಿ. ಅಲ್ಲಿಯ ಜನರು ಪರಸ್ಪರ ಸೌಹಾರ್ದದಿಂದ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತ ಸಹೋದರತ್ವ ಭಾವದಿಂದ ಬದುಕುತ್ತಾರಂತೆ. ಜಪಾನಿನ ‘ಉಗಿಮಿ’ ಎಂಬ ಹಳ್ಳಿಯ ಬಹುತೇಕರು ಆರೋಗ್ಯವಂತರು. ಇಲ್ಲಿ ಶತಾಯುಷಿಗಳು […]

ಗಿನಿಪಿಗ್‌ ನೋಡಿದಿರಾ!

ಡಾ. ಚಂದ್ರಹಾಸ್ ಚಾರ್ಮಾಡಿ ಮುಂಗುಸಿಯoತಹ ಮೂತಿ, ಮೊಲದಂತೆ ಚುರುಕು, ಇಲಿಯ ಮೈಕಟ್ಟು ಹೊಂದಿರುವ ಇಲಿಯೂ ಅಲ್ಲದ ಹಂದಿಯೂ ಅಲ್ಲದ ಈ ಪ್ರಾಣಿಯ ಹೆಸರು ಗಿನಿಪಿಗ್. ರಾಜ್ಯದಲ್ಲಿ ಬೆರಳಣಿಕೆಯಷ್ಟು ಮಂದಿ ಗಿನಿಪಿಗ್ ಸಾಕಿ ಅವುಗಳಿಂದ ಕೈತುಂಬಾ ಅದಾಯವನ್ನು ಗಳಿಸುತ್ತಿದ್ದಾರೆ.ದೀಪಕ್ ಹಾಸನ ಜಿಲ್ಲೆಯ ಅರಸೀಕೆರೆಯವರು. ಐ.ಟಿ.ಐ. ಶಿಕ್ಷಣವನ್ನು ಮುಗಿಸಿದ ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ದುಡಿದರು. ಮುಂದಿನ ದಿನಗಳಲ್ಲಿ ಕೃಷಿಯೊಂದಿಗಿನ ಒಲವು ದೀಪಕ್‌ರವರನ್ನು ಮತ್ತೆ ಊರಿಗೆ ಕರೆಯಿತು. ತನ್ನ ಮೂರುವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ಕೃಷಿಗೆ […]

ದಾಕ್ಷಿಣ್ಯಕ್ಕೂ ಮಿತಿಯಿರಲಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ದಯೆ – ದಾಕ್ಷಿಣ್ಯ ಇವೆಲ್ಲಾ ಮಾನವನಲ್ಲಿರಬೇಕಾದ ಒಳ್ಳೆಯ ಗುಣಗಳು. ಇವುಗಳನ್ನು ನಾವು ಬಾಲ್ಯದಿಂದಲೇ ಕಲಿತುಕೊಂಡಿದ್ದೇವೆ. ಆದರೆ ಇಂದು ದಾಕ್ಷಿಣ್ಯಕ್ಕೂ ಒಂದು ಮಿತಿಯನ್ನು ಹಾಕಿಕೊಳ್ಳಬೇಕಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ದಾಕ್ಷಿಣ್ಯ ಮಾಡದಿರುವುದೂ ಬಹಳ ಒಳ್ಳೆಯದು. ಅದು ಮನೆಯಲ್ಲಿ, ಕಚೇರಿ ಅಥವಾ ರಾಜಕೀಯ ಕ್ಷೇತ್ರ ಹೀಗೆ ಎಲ್ಲೇ ಇರಬಹುದು. ಕೆಲವೊಮ್ಮೆ ನಾವು ನೇರವಾಗಿ ‘ಇಲ್ಲ, ಆಗುವುದಿಲ್ಲ’ ಎಂದು ಹೇಳುವ ಧೈರ್ಯವನ್ನು ತೋರಬೇಕಾಗುತ್ತದೆ. ಇಲ್ಲವಾದರೆ ‘ದಾಕ್ಷಿಣ್ಯಕ್ಕೆ ಹೋದ ಮೂಗು ಮತ್ತೆ ಬರುವುದಿಲ’್ಲ ಎಂಬoತಾಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳು […]

ಬಡವರ ಕನಸಿನ ಮನೆಯನ್ನು ನನಸು ಮಾಡಿದ ಯೋಜನೆ

ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್. ಹಿಂದಿನ ಸಂಚಿಕೆಯಲ್ಲಿ ಸುಸ್ಥಿರತೆಯ ಸಂಘಗಳ ಭದ್ರ ಬುನಾದಿಯ ಬಗ್ಗೆ ಚರ್ಚಿಸಿದೆವು. ಇನ್ನು ಮುಂದೆ ಪೂಜ್ಯರ ಮಾರ್ಗದರ್ಶನದಲ್ಲಿ ಪ್ರಾರಂಭಗೊoಡ ಸ್ವಸಹಾಯ ಸಂಘ ಚಳುವಳಿ ರಾಜ್ಯದಲ್ಲಿ ಸೃಷ್ಟಿಸಿದ ಪರಿವರ್ತನೆಯ ಬಗ್ಗೆ ಒಂದು ನೋಟ ಬೀರೋಣ. ನಮ್ಮ ಅಂಕಿ ಅಂಶದ ಪ್ರಕಾರ ಯೋಜನೆಯು ಪ್ರಾರಂಭಗೊoಡ ದಿನದಿಂದ ಇಲ್ಲಿಯವರೆಗೆ ಒಟ್ಟು 31 ಲಕ್ಷ ಪ್ರಗತಿನಿಧಿ ಸಾಲಗಳನ್ನು ಮನೆ ನಿರ್ಮಾಣ, ದುರಸ್ಥಿ, ಖರೀದಿ ಹಾಗೂ ಇತರೆ ಗೃಹಸಾಲ ಸಂಬoಧ ಉದ್ದೇಶಗಳಿಗೆ ನೀಡಲಾಗಿದೆ. ಇನ್ನು ಒಟ್ಟು ಪಡೆದುಕೊಂಡ ಸಾಲದ […]