2026 ಜೂನ್
ಅಮೆರಿಕ ಸೇರುವ ಮಧುಗಿರಿಯ ಹೀರೆನಾರು
ಡಾ. ಚಂದ್ರಹಾಸ್ ಚಾರ್ಮಾಡಿ ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮೈ ಉಜ್ಜಲು ತೆಂಗು, ಹೀರೆ ಕಾಯಿಯ ನಾರನ್ನು ಬಳಸುತ್ತಿದ್ದರು. ದಿನಕಳೆದಂತೆ ಅವು ತೆರೆಮರೆಗೆ ಸರಿಯಿತು. ಇದೀಗ ಹೀರೆನಾರು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ನೋಡಲು ಇದೇನ್ ಮಹಾ! ಹೀರೆಯಿಂದ ತೆಗೆದ ನಾರಲ್ಲವೇ! ಎಂದು ಭಾವಿಸಿದರೂ ಅದರ ವಿನ್ಯಾಸ ಮಾತ್ರ ಎಂಥವರನ್ನು ಮೋಡಿ ಮಾಡುವಂತಿದೆ. ಮಧುಗಿರಿ ತಾಲೂಕಿನ ಅಕ್ಕಿಕಾಳು ಶಿವಣ್ಣರವರಿಗೆ ಹೀರೆ ನಾರಿನ ವಸ್ತುಗಳು ಸುಂದರ ಬದುಕನ್ನು ನೀಡಿದೆ. ಆಂಧ್ರಪ್ರದೇಶಕ್ಕೆ ತಾಗಿಕೊಂಡAತೆ ಇರುವ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಸುವರ್ಣ ತುಪ್ಪದ […]
ಷಡ್ ಲೇಶ್ಯೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಮಾವಿನ ತೋಟದೊಳಗೆ ಓರ್ವ ಮುನಿ ತಪಸ್ಸು ಮಾಡುತ್ತಿರುತ್ತಾನೆ. ಒಂದು ದಿನ ಆ ತೋಟಕ್ಕೆ ಕೈಯಲ್ಲಿ ಕೊಡಲಿ ಹಿಡಿದುಕೊಂಡ ಆಗಂತುಕನೊಬ್ಬನ ಪ್ರವೇಶವಾಗುತ್ತದೆ. ಹಸಿವಿನಿಂದಾಗಿ ಆತನ ಮುಖದಲ್ಲಿ ರೋಷ, ಅಸಹನೆ ಎದ್ದು ಕಾಣುತ್ತಿರುತ್ತದೆ. ಒಂದೆ ಸಮನೆ ತನ್ನ ಕೈಯಲ್ಲಿರುವ ಕೊಡಲಿಯಿಂದ ಮಾವಿನ ಮರವೊಂದರ ಬುಡವನ್ನೇ ಕಡಿಯಲಾರಂಭಿಸುತ್ತಾನೆ. ಇದನ್ನು ಕಂಡು ಮುನಿ ಚಿಂತಿಸುತ್ತಾನೆ. ‘ಇವನ ಹಸಿವು ನೀಗಲು ಎಂಟರಿoದ ಹತ್ತು ಹಣ್ಣುಗಳು ಸಾಕಾಗುತ್ತದೆ. ಆದರೆ ಈತ ಇಡೀ ಮರವನ್ನೇ ಉರುಳಿಸುತ್ತಿದ್ದಾನೆ’. ಬಿದ್ದ ಹಣ್ಣನ್ನು ಹೆಕ್ಕಿ […]
ಉತ್ತಮ ಆರೋಗ್ಯ ರಕ್ಷಣೆಗಾಗಿ ಶುದ್ಧ ನೀರನ್ನೊದಗಿಸುವ ಶುದ್ಧಗಂಗಾ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ರುದ್ರಭೂಮಿ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರ ಧೀಮಂತ ಚಿಂತನೆಯಿAದ ಮೂಡಿಬಂದ ‘ಶುದ್ಧಗಂಗಾ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ.ನಮ್ಮ ದೇಹದ ಶೇ. 70ರಷ್ಟು ಭಾಗ ದ್ರವದಿಂದ ಕೂಡಿರುತ್ತದೆ.ಹಾಗೆಯೇ ವೈದ್ಯರು ನಿತ್ಯ ಎರಡು-ಮೂರು ಲೀಟರ್ ನೀರು ಅಥವಾ ದ್ರವ ಆಹಾರವನ್ನು ಸೇವಿಸಬೇಕೆಂದು ಹೇಳುತ್ತಾರೆ. ಒಂದು ವೇಳೆ ನಾವು ಕುಡಿಯುವ ನೀರು ಮಲಿನವಾಗಿ ಅನಾರೋಗ್ಯಕ್ಕೆ ಕಾರಣವಾದರೆ, ಅಂತಹ ದುರಾದೃಷ್ಟ ಜನರ ದೈನಂದಿನ ಜೀವನ ಹೇಗಿರಬಹುದು? ಅವರು […]
ಬದಲಿ ಇಂಧನಗಳತ್ತ – ಹರಿಸಬೇಕಿದೆ ಚಿತ್ತ
ಜಗತ್ತಿನ ಪ್ರತಿಯೊಂದು ಘಟನೆಯು ಮುಂದಿನ ಬದುಕಿಗೆ ಒಂದು ಸುಂದರವಾದ ಮುನ್ನುಡಿಯನ್ನು ನೀಡುತ್ತದೆ. ಯಾವುದೋ ಒಂದು ಪ್ರಮುಖವಾದದ್ದು ಇನ್ನೇನು ತೆರೆಮರೆಗೆ ಸರಿಯುತ್ತದೆ, ಅದನ್ನು ಉಳಿಸುವವರೇ ಇಲ್ಲ ಎನ್ನುವಾಗ ವಿಸ್ಮಯದಂತೆ ಕೆಲವೊಂದು ಘಟನೆಗಳು ನಡೆದು ಅವು ಮತ್ತೆ ಹಿಂದಿನ ದಿನಗಳತ್ತ ಮುಖ ಮಾಡುವಂತೆ ಮಾಡುತ್ತವೆ. ಕೊರೊನಾ ಎಂಬ ಮಹಾಮಾರಿ ಜಗತ್ತಿಗೆ ಆರೋಗ್ಯದ ಬಗೆಗಿನ ಕಾಳಜಿಯ ಪಾಠವನ್ನು ಕಲಿಸಿದೆ. ಇದೀಗ ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಕೂಡಾ ಭವಿಷ್ಯದ ದಿನಗಳಿಗೆ ನಾವು ಹೇಗೆ ಸಿದ್ಧರಾಗಬೇಕು ಎಂಬ ಪಥವನ್ನು ತೋರಿಸಿದೆ. ಇದು ಕೇವಲ ಮೂರು ದೇಶಗಳ […]
ಮಹಿಳಾ ಮೀಸಲಾತಿ – ಭರವಸೆ ಮತ್ತು ವಾಸ್ತವ
ಡಾ. ಗೀತಾ ಎ.ಜೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಂಸ್ಥೆಗಳಲ್ಲಿ ಮಹಿಳೆಯರ ಪಾಲು ಶೇ. 14-15ರಷ್ಟು. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ಮೀಸಲಾತಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂಬ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಪಟ್ಟರೂ ಅಲ್ಲಿ ಮಹಿಳೆಯರ ಪಾಲಿಗೆ ಗೆಲುವು ದೊರೆಯಲಿಲ್ಲ.ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿಯ ಇತಿಹಾಸದ ಹೆಜ್ಜೆಗಳನ್ನು ಗಮನಿಸುವುದಾದರೆ 1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ. 33ರಷ್ಟು ಮೀಸಲಾತಿ ನೀಡಿದ್ದು […]
ಮಳೆಗಾಲದ ವಿಪತ್ತುಗಳ ಬಗ್ಗೆ ಜಾಗರೂಕರಾಗಿರೋಣ!
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಚಾರ್ಮಾಡಿ ಘಾಟ್ ರಸ್ತೆ ಬದಿಯಲ್ಲಿದ್ದ ಕಾಡಾನೆಯ ಜೊತೆ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಂಡ ಸುದ್ದಿ ಹಿಂದೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಸಾಹಸಗಳನ್ನು ಮಾಡುವುದು ಆಪತ್ತನ್ನು ಮೈ ಮೇಲೆ ಎಳೆದುಕೊಂಡಂತೆ. ಇತ್ತೀಚಿನ ದಿನಗಳಲ್ಲಿ ಅಪಾಯದ ಬಗ್ಗೆ ಅರಿವಿರುವ ವಿದ್ಯಾವಂತರೇ ಭಂಡ ಧೈರ್ಯ ಪ್ರದರ್ಶಿಸಿ ತೊಂದರೆಗಳನ್ನು ಆಹ್ವಾನಿಸುವುದು ದುರಾದೃಷ್ಟಕರ. ಒಂದು ವೇಳೆ ಆನೆ ತುಳಿದು ಗಂಭೀರ ಗಾಯಗಳಾದರೆ, ಜೀವ ಹಾನಿ ಮುಂತಾದ ದುರ್ಘಟನೆ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಮುಂದಕ್ಕೆ ಅವರ ಕುಟುಂಬದ ಗತಿ […]
ದೇಶಕ್ಕೆ ಮಾದರಿಯಾದ ಬೀದರ್ ಕ್ಷೀರ ಕ್ರಾಂತಿ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಮೂರು ದಶಕಗಳ ಹಿಂದೆಯೇ ದಿನನಿತ್ಯ ಆದಾಯ ತರುವ ಒಂದು ಸುಸ್ಥಿರ ಮೂಲ ಹೈನುಗಾರಿಕೆ ಎಂದು ತಿಳಿದುಕೊಂಡ ಪೂಜ್ಯ ಶ್ರೀ ಹೆಗ್ಗಡೆಯವರು ಕರಾವಳಿ ಭಾಗದಲ್ಲಿ ಹೈನುಗಾರಿಕಾ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಿದರ ಫಲವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಒಂದು ಪ್ರಮುಖ ಹೈನುಗಾರಿಕಾ ಜಿಲ್ಲೆಯಾಗಿ ಗುರುತಿಸಿಕೊಂಡಿತು. ಇದೀಗ ಪೂಜ್ಯರ ಚಿತ್ತ ಕರ್ನಾಟಕ ರಾಜ್ಯದ ಕಿರೀಟಪ್ರಾಯವಾದ ಬೀದರ್ ಜಿಲ್ಲೆಯತ್ತ ಹರಿದು, ಬೀದರ್ ಜಿಲ್ಲೆಯಲ್ಲಿಯೂ ಕ್ಷೀರ ಕ್ರಾಂತಿ ಸೃಷ್ಟಿಯಾಯಿತು. ಶ್ರೀ ಹೆಗ್ಗಡೆಯವರು ತನ್ನ […]
Gelathi
Bank Manager Noov
Spoorthi
Adhyakshara Nalnudi
Editorial
2026 ಮೇ
ಧೈರ್ಯ ತುಂಬಿದ ಪೂಜ್ಯರ ಆಗಮನ – ಕೊಡಗಿನ ಮೊಣ್ಣಂಗೇರಿ ಮರುನಿರ್ಮಾಣ
‘ಕೊಡಗು’ ಈ ಹೆಸರನ್ನು ಕೇಳಿದ ಕೂಡಲೇ ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಭಾರತಾಂಬೆಯ ರಕ್ಷಣೆಗೆ ಈ ಭೂಮಿ ನೀಡಿದ-ನೀಡುತ್ತಿರುವ ಕೊಡುಗೆ, ಚುಮುಚುಮು ಚಳಿ, ಕಾಫಿ ತೋಟ, ಸುಂದರ ತಾಣಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಹೂರಣ ನಮ್ಮ ಕಣ್ಣೆದುರಿನಲ್ಲಿ ರಾರಾಜಿಸುತ್ತದೆ. ಆದರೆ 2018ರ ಆಗಸ್ಟ್ 16 ಕೊಡಗಿನ ಸುಂದರ ಬದುಕಿನ ಕಥೆಗೆ ‘ಪ್ರಕೃತಿ ವಿಕೋಪ’ ಹೊಸ ಅಧ್ಯಾಯವೊಂದನ್ನು ಬರೆದಿದೆ.ನಿಶ್ಯಬ್ಧವಾಗಿದ್ದ ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಂಡು ರೌದ್ರನರ್ತನವನ್ನು ಪ್ರದರ್ಶಿಸಿದ ಪರಿಣಾಮ ಮಕ್ಕಂದೂರು, ಗಾಳಿಬೀಡು, ಮಾದಪುರ, ಮದೆನಾಡು, ಕೆ. ನಿಡುಗನೆ, ಹಟ್ಟಿಹೊಳೆ, ಎರಡನೇ […]
ಅರಿವೆಯ ಅರಿವು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ದಾಸರ ಮಾತಿನಂತೆ ಮನುಷ್ಯ ಮೊದಲು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಬಗ್ಗೆ ಚಿಂತಿಸಿದರೆ, ಎರಡನೇಯದಾಗಿ ಬಟ್ಟೆಯ ಬಗ್ಗೆ ಚಿಂತಿಸುತ್ತಾನೆ. ಐರೋಪ್ಯ ದೇಶದ ಜನಪದ ಕಥೆಯೊಂದರಲ್ಲಿ ರಾಕ್ಷಸನೊಬ್ಬ ಪುರುಷರು ಯಾರೂ ಮನೆಯಲ್ಲಿ ಇಲ್ಲದ ವೇಳೆ ಒಂದು ಮನೆಗೆ ಬರುತ್ತಾನೆ. ಆಗ ಆ ಮನೆಯಲ್ಲಿದ್ದ ಮಹಿಳೆಗೆ ಬೇರೆ ದಾರಿ ಕಾಣದೆ ಗಂಡನ ಕೋಟಿನಿಂದ ತನ್ನ ಮತ್ತು ಮಕ್ಕಳ ರಕ್ಷಣೆ ಮಾಡುತ್ತಾಳಂತೆ. ಇದೊಂದು ಉಪಮೆ ಅಷ್ಟೇ. ಆದರೆ ಅನೇಕ […]
ರುದ್ರಭೂಮಿಗೆ ನೂತನ ಪರಿಕಲ್ಪನೆ ನೀಡಿದ ಗ್ರಾ.ಯೋಜನೆ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಜ್ಞಾನದೀಪ ಶಿಕ್ಷಕರ ಒದಗಣೆ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ‘ರುದ್ರಭೂಮಿ’ಗಳ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಕೊಡುಗೆಯ ಬಗ್ಗೆ ತಿಳಿದುಕೊಳ್ಳೋಣ.ಪ್ರತಿಯೊಬ್ಬರ ಪಾಲಿಗೂ ಸಾವು ಸಹಜ. ಉಸಿರು ನಿಂತು ಹೋದ ಮೇಲೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶಾಸ್ತೊçÃಕ್ತವಾಗಿ ಪವಿತ್ರವಾದ ಸ್ಥಳದಲ್ಲಿ ನಡೆಯಬೇಕು. ಅಂತಹ ಮಹತ್ವದ ಕೆಲಸ ನಡೆಯುವುದೇ ‘ರುದ್ರಭೂಮಿ’ಗಳಲ್ಲಿ. ರುದ್ರಭೂಮಿ ಎಂದರೆ ಶಿವನ ಸ್ಥಾನ ಎಂದರ್ಥ. ಅವನ ಆವಾಸಸ್ಥಾನದಲ್ಲಿ ಅಗ್ನಿ ಸಂಸ್ಕಾರದಂತಹ ಮಹತ್ವಪೂರ್ಣ ಕಾರ್ಯಗಳು ನಡೆಯುವುದರಿಂದ […]
ಕಚ್ಛಾ ತೈಲ ಸಾಮ್ರಾಜ್ಯದಲ್ಲಿ ಭಾರತ
ಕಳೆದೊಂದು ತಿಂಗಳಿನಿಂದ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳೆಂದರೆ ಯುದ್ಧ ಹಾಗೂ ಇಂಧನದ ಬೆಲೆ. ಇವೆರಡೂ ವಿಚಾರದಲ್ಲಿ ಭಾರತವು ಅತ್ಯಂತ ನಾಜೂಕಿನ ಜಾಗದಲ್ಲಿ ಕುಳಿತಿದೆ. ಹಾಗೆಯೇ ಭಾರತವು ಜಾಗತಿಕವಾಗಿ ಕಚ್ಛಾತೈಲಗಳ ಆಮದು, ಬಳಕೆದಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದರೆ, ಅಚ್ಚರಿಯ ರೀತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲೂ ಎರಡನೇ ಸ್ಥಾನವನ್ನು ಪಡೆದಿದೆ. ಇದು ಭಾರತದ ಪೆಟ್ರೋಲಿಯಂ ವಹಿವಾಟಿನ ಸಂಕೀರ್ಣತೆಯನ್ನು ತೋರಿಸುತ್ತದೆ. ಇಂತಹ ವೈವಿಧ್ಯತೆಯ ಕಾರಣದಿಂದಲೇ ಜಾಗತಿಕ ಸಮರ ಕಾಲದಲ್ಲಿ ಭಾರತವು ಇಂಧನ ಸಂಕಷ್ಟದಲ್ಲಿ ಸಿಲುಕಿಲ್ಲ ಎನ್ನುವ ವಾದವಿದೆ. ಏಕೆಂದರೆ […]
ಮನಸ್ಸನ್ನು ಗೆಲ್ಲುವುದೆ ಮಹಾಸಾಧನೆ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಜಗತ್ತಿನ ಅತ್ಯದ್ಭುತ ಸೃಷ್ಟಿ ಯಾವುದು ಎಂದು ಕೇಳಿದರೆ ಅದು ಮನುಷ್ಯನ ಮನಸ್ಸು. ಅದು ಅದೃಶ್ಯ. ಆದರೆ ತನ್ನ ಇರುವಿಕೆಯನ್ನು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳ ಮೂಲಕ ಅಭಿವ್ಯಕ್ತಗೊಳಿಸುತ್ತಿರುತ್ತದೆ. ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಶಕ್ತಿಶಾಲಿ ಅಸ್ತçವಿದು.ಏಕಾಗ್ರತೆ ಹೊಂದಿರುವ ಮನಸ್ಸು, ಚಂಚಲ ಮನಸ್ಸು, ಒಳ್ಳೆಯ ಆಲೋಚನೆ, ಕೆಟ್ಟ ಆಲೋಚನೆಯ ಮನಸ್ಸುಗಳನ್ನು ನಾವು ಕಾಣುತ್ತೇವೆ. ಮನಸ್ಸು ಮನುಷ್ಯನ ನಡತೆಯ ಪ್ರತಿಬಿಂಬದಂತೆ ವರ್ತಿಸುತ್ತದೆ. ದೇಹ ಭೌತಿಕವಾದರೆ ಮನಸ್ಸು ಅಂತರ್ಯ. ಅದನ್ನು ಆತ್ಮದ ಬಂಧು ಎನ್ನಬಹುದು.ಮನಸ್ಸು ಎಲ್ಲಿದೆ? […]
ಚಿನ್ನದಂಥ ಸಾಲ ಮಾಡಿ ಜಾಣೆಯರಾದ ಯೋಜನೆಯ ಸದಸ್ಯರು
ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ‘ಚಿನ್ನಕ್ಕೆ ಚಿನ್ನವೇ ಸಾಟಿ’ ಎನ್ನುವ ಮಾತಿದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಬೆಲೆಬಾಳುವ ವಸ್ತು ಚಿನ್ನ ಆಗಿದೆ. ಆರ್ಥಿಕ ವಿಚಾರದಲ್ಲಿ ಹಣ, ದುಡ್ಡು, ಕಾಸು ಭಾರತದಲ್ಲಿ ರೂಪಾಯಿ ಆದರೆ, ಅಮೆರಿಕಾದಲ್ಲಿ ಡಾಲರ್, ಜಪಾನ್ನಲ್ಲಿ ಯೆನ್ ಹಾಗೂ ಇತರ ದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಬಳಕೆಯಾಗುತ್ತಿವೆ. ಇವುಗಳ ಮೌಲ್ಯಗಳು ವಿದೇಶಿ ಕರೆನ್ಸಿಯ ವಿನಿಮಯದ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿವೆ. ಆದರೆ ಎಲ್ಲಾ ದೇಶಗಳಲ್ಲೂ ಆ ದೇಶದ ಕರೆನ್ಸಿಯ ನಂತರ ಗಟ್ಟಿಯಾಗಿ ನಿಲ್ಲುವ […]