ಗ್ರಾಮಾಭಿವೃದ್ಧಿ ಯೋಜನೆಗೆ ಸ್ಕಾಚ್‌ ಪ್ರಶಸ್ತಿ ಗರಿ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಪೂಜ್ಯ ಶ್ರೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭ್ಯವಾಗಿವೆ. ದೇಶದ ಒಂದು ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಯಾಗಿ ಅನೇಕ ಸಾಮಾಜಿಕ ಸೇವೆಗಳನ್ನು ಸಲ್ಲಿಸುವುದರ ಜೊತೆಗೆ ಆರ್ಥಿಕ ಸಬಲೀಕರಣವನ್ನು ಕೈಗೊಂಡಿರುವ ಏಕೈಕ ಹಾಗೂ ವಿಶಿಷ್ಟ ಸಂಸ್ಥೆ ಇದು ಎಂದರೆ ತಪ್ಪಾಗಲಾರದು.ಬ್ಯಾಂಕ್‌ಗಳ ಬಿ.ಸಿ. (ವ್ಯವಹಾರ ಪ್ರತಿನಿಧಿ)ಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಅವುಗಳನ್ನು ಆರ್ಥಿಕ ಸೇರ್ಪಡೆಗೊಳಿಸುವ ಮೂಲಕ ಬಡವರ ಆರ್ಥಿಕ […]

ವಿದೇಶಿ ವಲಸೆ ಪಕ್ಷಿಗಳ ವಾಸಸ್ಥಾನ ರಾಮ್ಸರ್

ಪಕ್ಷಿಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹತ್ತಾರು ದೇಶಗಳ ಬಗೆ ಬಗೆಯ ಪಕ್ಷಿಗಳು ಒಂದೆಡೆ ಕಾಣಸಿಕ್ಕರಂತೂ ಅದು ಕಣ್ಣಿಗೊಂದು ಹಬ್ಬ. ವಿದೇಶಿ ಪಕ್ಷಿಗಳು ತಂಗುವ ಅಪೂರ್ವ ತಾಣವೊಂದಕ್ಕೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇಲ್ಲಿದೆ.ಗದಗ ತಾಲೂಕಿನ ಶಿರಹಟ್ಟಿಯಿಂದ ಎಂಟು ಕಿ.ಮೀ. ದೂರದ ಮಾಗಡಿ ಗ್ರಾಮದಲ್ಲಿ 134.15 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ವಿಶಾಲವಾದ ಮಾಗಡಿ ಕೆರೆಯೊಂದಿದೆ. ನವೆಂಬರ್‌ನಿoದ ಮಾರ್ಚ್ವರೆಗೆ ಇದು ಪಕ್ಷಿಪ್ರಿಯರ ಹಾಟ್‌ಸ್ಪಾಟ್. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಮಂಗೋಲಿಯಾ, ಸೈಬೇರಿಯಾ, ಆಸ್ಟ್ರೇಲಿಯಾ, ಚೀನಾ, ನೈಜಿರಿಯಾ, ಟಿಬೆಟ್, ಪಾಕಿಸ್ತಾನ, […]

ಉಡುಗೊರೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಉಡುಗೊರೆಗಳೆಂದರೆ ಎಲ್ಲರಿಗೂ ಇಷ್ಟ. ಮಕ್ಕಳಂತೂ ಹುಟ್ಟುಹಬ್ಬದ ಉಡುಗೊರೆಗಾಗಿ ವರ್ಷವಿಡೀ ಕಾಯುತ್ತಿರುತ್ತಾರೆ. ಹಾಗೆಯೇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ, ಒಳ್ಳೆಯ ಕೆಲಸ ಮಾಡಿದ್ರೆ ‘ಶಹಬ್ಬಾಸ್ ಗಿರಿ’ಯ ಜೊತೆಗೆ ಒಂದು ಚಿಕ್ಕ ಉಡುಗೊರೆಯ ನಿರೀಕ್ಷೆಯೂ ಇದ್ದೆ ಇರುತ್ತದೆ. ಮನೆ ಮಂದಿಯ ಹುಟ್ಟುಹಬ್ಬ, ಮದುವೆಗೆ ಬರುವ ಉಡುಗೊರೆಗಳ ಪೇಪರ್ ಅನ್ನು ತೆರೆದು ಅವುಗಳನ್ನು ನೋಡುವ ತವಕ ಎಲ್ಲರಲ್ಲೂ ಇರುತ್ತದೆ. ಕೆಲವೊಮ್ಮೆ ನಮ್ಮ ಮನೆ ಪಕ್ಕದವರು, ಹತ್ತಿರದ ಸಂಬoಧಿಕರು, ಆತ್ಮೀಯ ಸ್ನೇಹಿತರು ಕೊಟ್ಟ ದೊಡ್ಡ ಉಡುಗೊರೆಯೂ ಸಣ್ಣದೆಂದೆನಿಸುವುದಿದೆ. […]

ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ

ಅನಿಲ್ ಕುಮಾರ್ ಎಸ್‍.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಶ್ರದ್ಧಾಕೇಂದ್ರಗಳ ಸ್ವಚ್ಛತೆ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳಲಾಯಿತು. ಈ ಸಂಚಿಕೆಯಲ್ಲಿ ಪೂಜ್ಯ ಹೆಗ್ಗಡೆಯವರು ಗ್ರಾಮೀಣ ಶಿಕ್ಷಣಕ್ಕೆ ಯೋಜನೆಯ ಮೂಲಕ ಕೈಗೊಂಡ ಅಮೂಲಾಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ತಿಳಿದುಕೊಳ್ಳೋಣ.ನಾಲ್ಕು ದಶಕಗಳ ಹಿಂದೆ ಅಂದರೆ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾರಂಭದ ದಿನಗಳಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಸಿಗುತ್ತಿದ್ದ ಶಿಕ್ಷಣ ಸೌಲಭ್ಯಗಳ ಬಗ್ಗೆ ಇಂದು ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ. ಬಹುತೇಕ ಹಳ್ಳಿಗಳಲ್ಲಿ ಶಾಲೆಗಳೇ ಇರಲಿಲ್ಲ. ಇನ್ನು ಅರೆಪಟ್ಟಣ ಪ್ರದೇಶಗಳಲ್ಲಿ ಶಾಲೆಗಳಿದ್ದರೂ, ಅಲ್ಲಿಗೆ ಹಳ್ಳಿಗಳಿಂದ ಬಡ […]

ಕನ್ನಡದ ಕಂಪು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ನಾಡಗೀತೆ ನೂರು ವರ್ಷಗಳ ಸಂಭ್ರಮದಲ್ಲಿದೆ. ಪ್ರತಿಯೊಂದು ನಾಡಿಗೂ ಅಲ್ಲಿನ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯೇ ಜೀವಾಳ. ನಮ್ಮ ಕನ್ನಡ ನಾಡು ಕೂಡ ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ಊರು, ಬೆಟ್ಟಗಳು, ದೇವಾಲಯ ಒಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿನ ಕಲೆಗಳು ನಮ್ಮ ಪೂರ್ವಜರ ಜೀವನದ ನಂಬಿಕೆ, ಪರಂಪರೆ, ಮೌಲ್ಯಗಳ ಕಥೆಗಳನ್ನು ಹೇಳುತ್ತವೆ. ಹಾಗಾಗಿ ‘ಕನ್ನಡ ನಾಡು’ ಎಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ, ಬದಲಾಗಿ ಕನ್ನಡಿಗರ ಜೀವಂತಿಕೆಯ ದರ್ಶನವಾಗಿದೆ.ಕನ್ನಡ ನಾಡಿನ […]

ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ ಪ್ರಶಸ್ತಿ

ಅನಿಲ್ ಕುಮಾರ್ ಎಸ್.ಎಸ್. ಭಾರತೀಯ ರಿಸರ್ವ್ ಬ್ಯಾಂಕ್ ಅನುವು ಮಾಡಿಕೊಟ್ಟಿರುವಂತೆ ‘ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ’ (Business Correspondence) ಆಗಿ ಸೇವೆಗೈಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ದೇಶದ ಬ್ಯಾಂಕಿoಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ (Chamber Of MSME)’ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎo.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ’ ಲಭಿಸಿದೆ. ಇದೊಂದು ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ದೇಶದಲ್ಲಿ […]

ಉಡುಗೊರೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು