ಎಫ್ಐಆರ್ ಎಂಬ ನಾಣ್ಯದ ಎರಡು ಮುಖಗಳು
ಲಕ್ಷ್ಮೀ ಘಾಟೆ ಅದೊಂದು ರಾತ್ರಿ, ಸುಮಾರು 10:17ರ ಸಮಯ ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಮೆಟ್ಟಿಲು ಹತ್ತಿದ ಮಹಿಳೆಯೋರ್ವರು ಸಮೀಪದ ಬಸ್ ನಿಲ್ದಾಣವೊಂದರಲ್ಲಿ ನನ್ನ ಮೇಲೆ ದಾಳಿಯಾಗಿದೆ ಎನ್ನುತ್ತಾರೆ. ಅಲ್ಲಿದ್ದ ಡೆಸ್ಕ್ ಅಧಿಕಾರಿಯೊಬ್ಬರು ಡೈರಿ ತೆಗೆದು ಇವರ ದೂರನ್ನು ದಾಖಲಿಸುತ್ತಾರೆ. ಮುಖ್ಯಾಂಶಗಳನ್ನು ಬರೆದು, ಸ್ಟಾö್ಯಂಪ್ ಮುದ್ರಿಸಿದ ಎಫ್ಐಆರ್ ಪ್ರತಿಯನ್ನು ಆಕೆಗೆ ನೀಡುತ್ತಾರೆ. ಸಂತ್ರಸ್ತರಿಗೆ ಈ ಪ್ರತಿ ಒಂದು ಭರವಸೆಯಿದ್ದಂತೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಸಮಾಧಾನ ಭಾವ ಅವರಲ್ಲಿ ಮೂಡುತ್ತದೆ.ಭಾರತದ ಎಫ್ಐಆರ್ ವ್ಯವಸ್ಥೆ ಒಂದು […]
ನೌಕರರ ನೆರವಿಗೆ ಇ.ಎಸ್.ಐ. ವಿಮಾ ಸೌಲಭ್ಯ
ರವಿಚಂದ್ರ, ಚಾರ್ಮಾಡಿ ನೌಕರರ ರಾಜ್ಯ ವಿಮಾನಿಗಮ (ಇ.ಎಸ್.ಐ.ಸಿ.) ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿದ್ದು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.ಇ.ಎಸ್.ಐ.ಸಿ. ಎಂದರೇನು?ಸಾಮಾನ್ಯವಾಗಿ ಇ.ಎಸ್.ಐ. ಎಂದೇ ಕರೆಯುತ್ತಾರೆ. ಇದು ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು ಇದರ ಪ್ರಾಥಮಿಕ ಉದ್ದೇಶವೆಂದರೆ ಅನಾರೋಗ್ಯ, ಹೆರಿಗೆ, ಮಾತೃತ್ವ, ಅಂಗವೈಕಲ್ಯ, ಉದ್ಯೋಗದ ಕಾರಣಗಳಿಂದ ಗಾಯ, ಸಾವು ಇತ್ಯಾದಿಗಳ ಸಂದರ್ಭದಲ್ಲಿ ಸಂಘಟಿತ ವಲಯದ ‘ಉದ್ಯೋಗಿ’ಗಳನ್ನು ರಕ್ಷಿಸುವುದು. ಈ […]
ಗ್ರಾಮೀಣ ಭಾಗದ ಜನರಲ್ಲೂ ಹೆಚ್ಚುತ್ತಿದೆ ಟೆನ್ಶನ್
ಇದು ಡಿಜಿಟಲ್ ಯುಗ. ಎಲ್ಲವೂ ಶರವೇಗದಲ್ಲಿ ಆಗಬೇಕೆಂದು ಹಾತೊರೆಯುತ್ತಿರುವುದರ ಪರಿಣಾಮ ‘ಟೆನ್ಶನ್’ ಎಂಬ ಭೂತ ಎಲ್ಲರನ್ನು ಆವರಿಸಿಕೊಂಡಿದೆ. ಹಿಂದೆ ನಗರಗಳಲ್ಲಿರುವ ಜನರು ಅತಿಯಾದ ಒತ್ತಡಗಳಿಂದ ಬಳಲುತ್ತಿದ್ದರು. ಇದೀಗ ಈ ಭೂತ ಗ್ರಾಮೀಣ ಜನರ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಒತ್ತಡದ ಬದುಕು, ಸಂಬoಧಗಳಲ್ಲಿನ ಉದ್ವಿಗ್ನತೆ, ಭಾವನಾತ್ಮಕ ಬೆಂಬಲದ ಕೊರತೆಯಿಂದಾಗಿ ಉದ್ವೇಗ, ಆತಂಕ, ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಾತಿಗೆ ಕೇಂದ್ರ ಸರಕಾರ ಆರಂಭಿಸಿರುವ ಸಹಾಯವಾಣಿಗೆ ದೊರೆತ ಸ್ಪಂದನೆಯೇ ಸಾಕ್ಷಿ. 2022ರಲ್ಲಿ ಆರಂಭಿಸಿದ ಸಹಾಯವಾಣಿಯಲ್ಲಿ ಈವರೆಗೆ ದಿನವೊಂದಕ್ಕೆ […]
ಹಠವಾದಿ ಮಕ್ಕಳಿಗೆ ತಾಳ್ಮೆಯ ಮದ್ದು
ಅಶ್ವಿನಿ ಹೆಚ್. ತಾನು ಬಯಸಿದಂತೆ ಆಗಲೇಬೇಕು ಎಂಬ ಪಟ್ಟು ಬಿಡದ ಮನೋಭಾವವನ್ನು ಹಠವೆನ್ನುತ್ತಾರೆ. ಇದು ಇತರರ ಅಭಿಪ್ರಾಯ, ಸಲಹೆ ಅಥವಾ ತಾರ್ಕಿಕತೆಯನ್ನು ಕಡೆಗಣಿಸಿ ತಮ್ಮ ನಿರ್ಧಾರಗಳನ್ನೇ ಸಮರ್ಥಿಸಿಕೊಳ್ಳುವ ಸ್ಥಿತಿಯೂ ಹೌದು.ಮಕ್ಕಳಲ್ಲಿ ಹಠಮಾರಿ ವರ್ತನೆ ಕಾಣಿಸಿಕೊಂಡಾಗ ಬಹಳಷ್ಟು ಪೋಷಕರು ಅದನ್ನು ತಲೆನೋವಿನಂತೆ ಕಾಣುತ್ತಾರೆ. ಆದರೆ ನಾವು ಒಮ್ಮೆ ಆಳವಾಗಿ ಚಿಂತಿಸಿದರೆ ಹಠವು ಕೇವಲ ನಕಾರಾತ್ಮಕ ಗುಣವಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇದೇ ಹಠಕ್ಕೆ ಸರಿಯಾದ ಮಾರ್ಗದರ್ಶನ ದೊರೆತರೆ ಮುಂದೊoದು ದಿನ ಜೀವನದಲ್ಲಿ ದೃಢ ಸಂಕಲ್ಪ, ಪರಿಶ್ರಮ ಹಾಗೂ […]
ಉಪರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ..
ರಾಜೀವ ಹೆಗಡೆ ಭಾರತದ ಸಂವಿಧಾನದಲ್ಲಿ ರಾಷ್ಟçಪತಿಯನ್ನು ಪ್ರಥಮ ಪ್ರಜೆ ಎಂದು ಉಲ್ಲೇಖಿಸಿದರೆ, ನಂತರದ ಸ್ಥಾನ ಉಪರಾಷ್ಟçಪತಿಗೆ ಸಿಗುತ್ತದೆ. ಆದರೆ ಆಡಳಿತ ಹಾಗೂ ಕಾನೂನು ದೃಷ್ಟಿಯಲ್ಲೂ ಈ ಹುದ್ದೆ ಬಹುತೇಕ ಉತ್ಸವ ಮೂರ್ತಿಯ ಹುದ್ದೆಯಷ್ಟೇ. ಪ್ರಾಯೋಗಿಕವಾಗಿ ನೋಡಿದಾಗ ಉಪರಾಷ್ಟçಪತಿಗೆ ಇರುವ ಅತ್ಯಂತ ದೊಡ್ಡ ಜವಾಬ್ದಾರಿಯೆಂದರೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯನ್ನು ನಡೆಸುವುದು. ಈ ಸಭೆಗೆ ಅಧ್ಯಕ್ಷರಾಗಿರುವುದೇ ಉಪರಾಷ್ಟçಪತಿಗೆ ಇರುವ ಬಹು ದೊಡ್ಡ ಅಧಿಕಾರವಾಗಿದೆ. ಇಂತಹ ಹುದ್ದೆಯು ಇತ್ತೀಚೆಗೆ ಅಚಾನಕ್ಕಾಗಿ ಖಾಲಿಯಾಯಿತು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜಗದೀಪ್ ಧನಕರ್ ಅವರು ರಾಜೀನಾಮೆ […]
ಬುದ್ಧಿ ಮತ್ತು ಭಾವ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ದೋಣಿಯೊಂದರಲ್ಲಿ ಒಂದಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಜೋರಾಗಿ ಬೀಸಿದ ಬಿರುಗಾಳಿಗೆ ಸಿಲುಕಿ ದೋಣಿ ಮಗುಚಿ ಬೀಳುತ್ತದೆ. ದೋಣಿಯಲ್ಲಿದ್ದ ಕೆಲವರು ನೀರು ಪಾಲಾಗುತ್ತಾರೆ. ಅವರಲ್ಲಿ ಇಬ್ಬರು ವ್ಯಕ್ತಿಗಳು ಈಜುತ್ತಾ ಹೇಗೋ ದಡ ಸೇರುತ್ತಾರೆ. ಅವರಲ್ಲೊಬ್ಬ ತನ್ನಲ್ಲಿದ್ದ ಕಂಪ್ಯೂಟರ್ ಅನ್ನು ನೀರು ತಾಗಿದರೂ ಒದ್ದೆಯಾಗದ ಬ್ಯಾಗ್ನಲ್ಲಿ ಇಟ್ಟಿದ್ದರಿಂದ ಅದು ಸುರಕ್ಷಿತವಾಗಿರುತ್ತದೆ. ಇನ್ನೊಬ್ಬನ ಕೈಯಲ್ಲಿ ಕೊಳಲು ಇರುತ್ತದೆ. ಅದೂ ಕೂಡ ಸುರಕ್ಷಿತವಾಗಿರುತ್ತದೆ. ಇಬ್ಬರು ದಡ ಸೇರಿದ ಕೆಲವೇ ಕ್ಷಣಗಳಲ್ಲಿ ಒಡೆದ ದೋಣಿ ಕೂಡ ದಡ […]
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ಜ್ಞಾನವಿಕಾಸ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ‘ಹಿಂದಿನ ಸಂಚಿಕೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘದಿoದ ಉಂಟಾದ ಪರಿವರ್ತನೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಯಶಸ್ಸಿನಿಂದಾಗಿ ಪೂಜ್ಯರು ಹಾಗೂ ಮಾತೃಶ್ರೀಯವರ ಚಿತ್ತ ಮಹಿಳಾ ಸಬಲೀಕರಣದತ್ತ ವಾಲಿತು. ಪ್ರಾರಂಭದ ಉತ್ತಮವಾದ ಪರಿಣಾಮದಿಂದಾಗಿ ಮಹಿಳಾ ಸ್ವಸಹಾಯ ಸಂಘಗಳ ಅದ್ಭುತ ಪರಿಕಲ್ಪನೆಗೆ 1990ರ ದಶಕದ ಆರಂಭದಲ್ಲಿ ಚಾಲನೆ ಸಿಕ್ಕಿತು. ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳೆಯರ ಸ್ಥಿತಿಗತಿಗಳು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತದ್ದು ಎಂತಹ ದೊಡ್ಡ ಕಠಿಣ ಸವಾಲಾಗಿತ್ತು ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೂ ಕಾರ್ಯಕರ್ತರ […]
ಬದುಕು ಮತ್ತು ಬದುಕಗೊಡು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಸಾವಿರಾರು ವರ್ಷಗಳಿಂದ ಪ್ರಕೃತಿಯ ಮೇಲೆ ಆಘಾತಗಳು ನಡೆಯುತ್ತಾ ಬಂದಿವೆ. ಕೃಷಿ, ಜನವಸತಿ ಪ್ರದೇಶ ನಿರ್ಮಿಸಲು, ವಾಣಿಜ್ಯ ಉದ್ದೇಶಗಳಿಗಾಗಿ ಹೀಗೆ ಸುತ್ತಮುತ್ತಲಿರುವ ಕಾಡುಗಳನ್ನು ನಾಶಮಾಡಿದ ಪರಿಣಾಮ ಕಾಡು ಪ್ರಾಣಿಗಳು ತಾವು ವಾಸಿಸುವ ಕಾಡಿನಿಂದ ದೂರ ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ದಿನಕಳೆದಂತೆ ಅನೇಕ ಕಾರಣಗಳಿಗಾಗಿ ಕಾಡನ್ನು ನಾಶ ಮಾಡುವ ಮನಸ್ಥಿತಿ ಹೆಚ್ಚಾಗುತ್ತಾ ಬಂತು. ಕಾಡು ನಾಶ ಒಂದೆಡೆಯಾದರೆ ಕಾಡನ್ನು ರಕ್ಷಣೆ ಮಾಡುವ ನಿಟ್ಟಿನಲ್ಲೂ ಅನೇಕರು ತಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಇಂದಿಗೂ ಪರಿಸರ […]
ದ್ವಿಸಹಸ್ರ ಮದ್ಯರ್ಜನ ಶಿಬಿರ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಮಹಾತ್ಮಾ ಗಾಂಧೀಜಿಯವರು ಅಂದು ಕಂಡ ಗ್ರಾಮಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ಯುವಜನತೆಗೆ ಉದ್ಯೋಗ, ಸ್ವಚ್ಛ ಭಾರತ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ನೈತಿಕ ಶಿಕ್ಷಣ, ಯೋಗ, ಭಜನೆ ಮದ್ಯವರ್ಜಿತ ಭಾರತ ಹೀಗೆ ಎಷ್ಟೋ ಕನಸುಗಳನ್ನು ಕರ್ನಾಟಕ ರಾಜ್ಯದಲ್ಲಿ ಅಕ್ಷರಶಃ ನನಸು ಮಾಡುತ್ತಿರುವವರು ನಮ್ಮ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು.ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಲ್ಲಿ ‘ಜನಜಾಗೃತಿ ವೇದಿಕೆ’ಯ ಕಾರ್ಯಕ್ರಮ ಮುಖ್ಯವಾದ ಕಾರ್ಯಕ್ರಮವಾಗಿದೆ. ಜನಜಾಗೃತಿ ವೇದಿಕೆಯ ಮೂಲಕ ಕೈಗೊಳ್ಳಲಾಗುವ ‘ಮದ್ಯವರ್ಜನ ಶಿಬಿರ’ ಒಂದು ವ್ಯಕ್ತಿಗತ […]
ಬೆಳಿಗ್ಗೆ ಬೇಗ ಎದ್ದೇಳಿ
ಡಾ. ಗೀತಾ ಎ.ಜೆ.
ಮೈಚಳಿ ಸಾಹಿತ್ಯ
ರೇಶ್ಮಾ ಭಟ್
ಜಿದ್ದಾಜಿದ್ದಿನ ಅಂಗಳದಲ್ಲಿ ಅರಳಿತು ಬಾಂಧವ್ಯದ ಹೂ…
– ಎ.ಆರ್. ಮಣಿಕಾಂತ್
ಬುದ್ಧಿ ಮತ್ತು ಭಾವ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ದ್ವಿಸಹಸ್ರ ಮದ್ಯವರ್ಜನ ಶಿಬಿರ
ಅನಿಲ್ ಕುಮಾರ್ ಎಸ್.ಎಸ್.
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ಸಾಹಿತ್ಯ
ಅನಿಲ್ ಕುಮಾರ್ ಎಸ್.ಎಸ್.
ಬದುಕು ಮತ್ತು ಬದುಕಗೊಡು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಜೀವನದ ಬಣ್ಣ ಬೂದು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಈ ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದೆಂಬುದು ಎಲ್ಲೂ ಇಲ್ಲ. ನಮ್ಮ ಯೋಚನೆ ನಮ್ಮನ್ನು ಆ ರೀತಿ ಚಿಂತಿಸುವAತೆ ಮಾಡುತ್ತದೆ. ಗುಲಾಬಿಯನ್ನು ನೋಡುವಾಗ ದೇವರು ಮುಳ್ಳುಗಳನ್ಯಾಕೆ ಈ ಗಿಡದಲ್ಲಿ ಸೃಷ್ಟಿಸಿದರು ಎಂದು ಒಬ್ಬ ಚಿಂತಿಸಿದರೆ, ಇನ್ನೊಬ್ಬ ಮುಳ್ಳುಗಳ ಮಧ್ಯೆ ಇಷ್ಟು ಸುಂದರವಾದ ಹೂವನ್ನಿಟ್ಟ ದೇವರಿಗೆ ಧನ್ಯವಾದ ಹೇಳಬೇಕೆಂದು ಬಯಸುತ್ತಾನೆ. ಮನೆಯಲ್ಲಿ ಯಾವುದೇ ಒಂದು ವಸ್ತುವನ್ನು ಕಂಡರಾಗದು ಅಂದಾಗ ಅದನ್ನು ಸುಲಭವಾಗಿ ಬದಲಿಸಬಹುದು. ಉದಾಹರಣೆಗೆ ತನ್ನ ಕೋಣೆಯಲ್ಲಿರುವ ಸೋಫಾ ಹಳೆಯದಾಗಿ ಬಣ್ಣ ಕಳೆದುಕೊಂಡಿದೆ ಅದನ್ನು ನೋಡಿದಾಗಲೆಲ್ಲಾ […]
ಕೂಲಿಗಾಗಿ ಕಾಳು ಸೃಷ್ಠಿಸಿದ ಸ್ವಾಭಿಮಾನದ ಬದುಕು
ಶ್ರೀ ಅನಿಲ್ ಕುಮಾರ್ ಎಸ್.ಎಸ್. ಕಳೆದ ಸಂಚಿಕೆಯಲ್ಲಿ ‘ಕೃಷಿ ಯಂತ್ರಧಾರೆ’ಯ ಮೂಲಕ ರೈತರ ಪಾಲಿಗೆ ಯೋಜನೆ ನೀಡುತ್ತಿರುವ ಸೇವೆಗಳ ಬಗ್ಗೆ ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಸಮುದಾಯದ ಅನೇಕ ಸೇವಾಕಾರ್ಯಗಳ ಬಗ್ಗೆ ಒಂದೊoದಾಗಿ ತಿಳಿದುಕೊಳ್ಳೋಣ.ಸಮುದಾಯ ಕಾರ್ಯಕ್ರಮಗಳ ಮೂಲಕ ಬಡವರ, ದುರ್ಬಲರ ಜೀವನಮಟ್ಟವನ್ನು ಉನ್ನತೀಕರಿಸುವ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶಕ್ಕಾಗಿಯೇ ಶ್ರೀ ಹೆಗ್ಗಡೆಯವರು 1982ರಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯನ್ನು ಹುಟ್ಟುಹಾಕಿದರು. ಆರಂಭದ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗಾಗಿ ಹಳ್ಳಿಯ ಪ್ರತಿ ಮನೆ ಮನೆಗಳಿಗೆ ತೆರಳಿ ತಳಮಟ್ಟದ […]
ಭವಿಷ್ಯ ಭದ್ರಗೊಳಿಸುವ ಭವಿಷ್ಯನಿಧಿ
ರವಿಚಂದ್ರ ಚಾರ್ಮಾಡಿ ನೌಕರನೊಬ್ಬ ನಿವೃತ್ತನಾದ ನಂತರ ಅವನ ಭವಿಷ್ಯತ್ತಿನ ಸುರಕ್ಷತೆಗಾಗಿ ‘ನೌಕರರ ಭವಿಷ್ಯನಿಧಿ’ ಸಂಸ್ಥೆಯಿoದ ನಿರ್ವಹಿಸಲ್ಪಡುವ ಉಳಿತಾಯ ಕಾರ್ಯಕ್ರಮವನ್ನು ಭವಿಷ್ಯನಿಧಿ ಎಂದು ಕರೆಯುತ್ತಾರೆ. ಇದಕ್ಕೆ ಪಿ.ಎಫ್., ಇ.ಪಿ.ಎಫ್. ಎಂಬ ಹೆಸರುಗಳು ಇವೆ. ಭವಿಷ್ಯನಿಧಿಗೆ ನೌಕರರು ಮತ್ತು ಉದ್ಯೋಗದಾತರಿಬ್ಬರೂ ವಂತಿಗೆ/ಕೊಡುಗೆಯನ್ನು ನೀಡಬೇಕಾಗುತ್ತದೆ.ಪಿ.ಎಫ್. ಯಾರಿಗೆ ಲಭ್ಯ? : ಯಾವ ಸಂಸ್ಥೆ ಕನಿಷ್ಠ 20 ಮತ್ತು ಅದಕ್ಕಿಂತ ಹೆಚ್ಚಿನ ನೌಕರರನ್ನು ಹೊಂದಿದೆಯೋ ಆ ಸಂಸ್ಥೆಗಳು ನೌಕರರ ಪಿ.ಎಫ್. ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದ್ದರಿಂದ ಇಂದು ಹೆಚ್ಚಿನೆಡೆ ಪಿ.ಎಫ್. ಸೌಲಭ್ಯದ ವ್ಯವಸ್ಥೆಯಿದೆ. […]
ಒಲವೇ ಜೀವನ ಲೆಕ್ಕಾಚಾರ
ಒಲವೇ ಜೀವನ ಲೆಕ್ಕಾಚಾರ ಒಮ್ಮೆ ಬೀಡಿನಲ್ಲಿ ಅಳುತ್ತಿದ್ದ ಮಗುವನ್ನು ತಾಯಿ ಹೊರಗೆ ಕರೆದುಕೊಂಡು ಹೋದಳು, ತುಸು ಹೊತ್ತಾದ ಮೇಲೆ ನನ್ನನ್ನು ಭೇಟಿಯಾಗಲು ಮತ್ತೆ ಬೀಡಿಗೆ ಮರಳಿ ಬಂದಳು. ಅಳುತ್ತಿದ್ದ ಮಗು ಸುಮ್ಮನಾಗಿತ್ತು. ಒಮ್ಮೆ ಬಂದು ಹೋಗಿ ಮತ್ತೆ ಬಂದದ್ದನ್ನು ನಾನು ಗಮನಿಸಿದ್ದೆ ಅಂದುಕೊoಡು ‘ಮಗೂವಿಗೆ ಹಸಿವಾಗಿತ್ತು ಹಾಗೆ ಹೊರಗೆ ಹೋದೆ, ಒಂದು ಐದು ತುತ್ತು ಅನ್ನ ತಿನ್ನಿಸಿದೆ ಸ್ವಾಮಿ, ಮಗು ಸುಮ್ಮನಾಯಿತು’ ಎಂದಳು. ಮತ್ತೊಂದು ಸನ್ನಿವೇಶದಲ್ಲಿ ದೇವಸ್ಥಾನದ ಬಳಿ ಒಬ್ಬಳು ಹಗ್ಗದ ಮೇಲೆ ನಡೆಯುತ್ತಾ ಸರ್ಕಸ್ ಮಾಡುವುದನ್ನು […]