ಮತ್ತೊಂದು ಕ್ರೀಡಾ ಲೀಗ್ – ಅಲ್ಟಿಮೇಟ್ ಖೋ ಖೋ

ದಿನಕರ ಯಾವಾಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಕ್ರಿಕೆಟ್ ಟೂರ್ನಿಯು ಅತ್ಯಂತ ಯಶಸ್ವಿಯಾಯಿತೋ ಅದರ ಬಳಿಕ ಭಾರತದಲ್ಲಿ ಹಲವಾರು ಕ್ರೀಡೆಗಳನ್ನು ಅದೇ ರೀತಿ ಜನಪ್ರಿಯತೆಗೆ ತರಲು ಪ್ರಯತ್ನಗಳು ಸಾಗಿದವು. ಅದೇ ಬಗೆಯ ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಫುಟ್ಬಾಲ್ ಮುಂತಾದ ಲೀಗ್ ಟೂರ್ನಿಗಳು ಶುರುವಾದವು. ಕಬಡ್ಡಿಯಂತಹ ಟೂರ್ನಿಗಳು ಭಾರೀ ಯಶಸ್ಸು ಕಂಡರೂ ಕೆಲವು ಅಷ್ಟರಮಟ್ಟಿಗೆ ಯಶಸ್ಸು ಕಾಣಲಿಲ್ಲವೆನ್ನುವುದೂ ನಿಜ.ಅಲ್ಟಿಮೇಟ್ ಖೋ ಖೋಖೋ ಖೋ ಪಂದ್ಯದ ಲೀಗ್ ಟೂರ್ನಿಯ ಮೊತ್ತಮೊದಲ ಸೀಸನ್ ಆಗಸ್ಟ್ 14ಕ್ಕೆ ಆರಂಭವಾಗಿ ಸೆಪ್ಟೆಂಬರ್ ಮೊದಲ […]

ಸಾಗರದಲ್ಲಿನ ಕ್ರಾಂತಿ ‘ವಿಕ್ರಾಂತ್’

ಬರಹ : ರಾಜೀವ ಹೆಗಡೆ ಭಾರತದ ‘ಆತ್ಮನಿರ್ಭರತೆ’ಯ ಹೊಸ ರೂಪವೇ ಐಎನ್‌ಎಸ್ ವಿಕ್ರಾಂತ್. ದಶಕಗಳ ಕಾಲ ನೌಕಾದಳ ಹಾಗೂ ಭಾರತೀಯರ ಪಾಲಿಗೆ ಗಗನ ಕುಸುಮವಾಗಿದ್ದ ಸ್ವದೇಶಿ ಯುದ್ಧ ನೌಕೆ ನಿರ್ಮಾಣದ ಕನಸನ್ನು ನನಸು ಮಾಡಿದ್ದು ವಿಕ್ರಾಂತ್ ಯುದ್ಧನೌಕೆ. ಕೋಟ್ಯಾಂತರ ಜನರಲ್ಲಿ ‘ಆತ್ಮನಿರ್ಭರತೆ’ಯ ಹೊಸ ಮಂತ್ರವು ಮತ್ತೊಮ್ಮೆ ಮಾರ್ದನಿಸುವಂತೆ ಮಾಡಿದ್ದು ಈ ಸಾಗರ ಸಮರವೀರ ‘ವಿಕ್ರಾಂತ್’. ಸ್ವಾತಂತ್ರದ ಅಮೃತಮಹೋತ್ಸವದ ವರ್ಷದಲ್ಲಿ ರಕ್ಷಣಾ ಪಡೆಗಳಿಗೆ ಸ್ವದೇಶಿ ಅಮೃತದಂತೆ ಐಎನ್‌ಎಸ್ ವಿಕ್ರಾಂತ್ ದೊರೆತಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧನೌಕೆ ಹೊಂದಿದ […]

ಭಜನೆಯಿಂದ ಬದಲಾವಣೆ

ಬರಹ : ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಕಳೆದ 24 ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ವಾರಗಳ ಕಾಲ ಭಜನಾ ತರಬೇತಿ ಕಮ್ಮಟವನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ಬೇರೆ ಬೇರೆ ತಾಲೂಕುಗಳಿಂದ ಈವರೆಗೆ ಸರಿಸುಮಾರು 4,500 ಮಂದಿ ಭಜಕರು ಕಮ್ಮಟದಲ್ಲಿ ಭಾಗವಹಿಸುವ ಮೂಲಕ ಕಮ್ಮಟದ ಪ್ರಯೋಜವನ್ನು ಪಡೆದಿದ್ದಾರೆ. ತಮಗೆ ಭಜನಾ ಸಂಸ್ಕೃತಿಯ ಮೇಲಿರುವ ವಿಶ್ವಾಸ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ರಾಜ್ಯದಿಂದ ಮಾತ್ರವಲ್ಲದೇ ಮುಂಬೈಯಿoದಲೂ ಬಂದ ಭಜಕರು ಬಂದು ಒಂದು ವಾರಗಳ ಕಾಲ ಕಮ್ಮಟದಲ್ಲಿದ್ದು ತರಬೇತಿ ಪಡೆದು […]

ಸುಸ್ಥಿರ ಮಾದರಿಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆ

ಬರಹ : ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸರಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು. ಸರಕಾರಿ ಸಂಸ್ಥೆಗಳು ಸರಕಾರದ ಹಣದಿಂದ ಎಲ್ಲ ಖರ್ಚು ವೆಚ್ಚಗಳನ್ನು ನಿರ್ವಹಿಸಿದರೆ ಖಾಸಗಿ ಸಂಸ್ಥೆಗಳು ವ್ಯವಹಾರ ಮಾಡಿ ಆದಾಯ ಗಳಿಸಿ ಖರ್ಚನ್ನು ನಿರ್ವಹಿಸುತ್ತವೆ. ಸ್ವಯಂಸೇವಾ ಸಂಸ್ಥೆಗಳಾದರೋ ದಾನಿಗಳು ನೀಡುವ ಬಂಡವಾಳವನ್ನು ಉಪಯೋಗಿಸಿಕೊಂಡು ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತವೆ. 40 ವರ್ಷಗಳ ಹಿಂದೆ ಪ್ರಾರಂಭಗೊ೦ಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು […]

ಇಂಡಿಯಾ @75ನಲ್ಲಿ ಇಂಡಿಯನ್ @70

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಹಳ್ಳಿಯಲ್ಲಿರುವ ತುಂಬಾ ವಯಸ್ಸಾದವರಲ್ಲಿ ನಿಮಗೆ ಎಷ್ಟು ಮಕ್ಕಳು ಎಂದು ಕೇಳಿದರೆ ಸಹಜವಾಗಿ ಎಂಟೋ, ಹತ್ತೋ ಎಂದು ಹೇಳುತ್ತಾರೆ. ಮುಂದುವರೆದು ಅವರಲ್ಲಿ ಅರ್ಧದಷ್ಟು ಸಂಖ್ಯೆಯ ಮಕ್ಕಳು ಬಹಳ ಮೊದಲೇ ಮರಣ ಹೊಂದಿರುತ್ತಾರೆ ಎಂದೂ ತಿಳಿಸುವರು. ಸಾಮಾನ್ಯವಾಗಿ ಅನಾರೋಗ್ಯದಿಂದ ಬಹುಪ್ರಮಾಣದ ಜನರು ಅಂದಿನ ಕಾಲದಲ್ಲಿ ಮರಣ ಹೊಂದುತ್ತಿದ್ದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ನಂತರ 1950 ರಲ್ಲಿ ಅಂದಿನ ಜನರ ಜೀವಿತಾವಧಿಯ ವಯಸ್ಸು ಕೇವಲ 35.21 […]