ತಾಂತ್ರಿಕತೆಯೆಂಬ ಮಂತ್ರ ದಂಡ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಹಿಂದೆ ನಾವೆಲ್ಲ ಮಕ್ಕಳಾಗಿದ್ದಾಗ ಬಂಧು-ಮಿತ್ರರ ಸಂದೇಶ ಹೊತ್ತ ಪತ್ರಕ್ಕಾಗಿ ವಾರಗಟ್ಟಲೆ ಕಾಯುತ್ತಿದ್ದೆವು. ಪತ್ರ ಬರೆದು ಮರುತ್ತರಕ್ಕೆ ಕಾಯುತ್ತಿದ್ದ ಕ್ಷಣಗಳು ಮರೆಯಲಾರದಂಥವು. ಯಾರ ಜೊತೆಗಾದರೂ ತುರ್ತಾಗಿ ಮಾತನಾಡಬೇಕಿದ್ದರೆ, ಸಂದೇಶ ನೀಡಬೇಕಿದ್ದರೆ ಟ್ರಂಕ್ ಕಾಲ್ ಬುಕ್ ಮಾಡಿ ದಿನಗಟ್ಟಲೆ ಕಾಯಬೇಕಾದ ಸಂದರ್ಭಗಳಿದ್ದವು. ಆ ದಿನಗಳಲ್ಲಿ ಇಂದಿನಷ್ಟು ಸರಕಾರಿ ಸೇವೆಗಳು ಇರಲಿಲ್ಲ. ಇದ್ದರೂ ಸೇವೆಗಳನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕು, ಒಂದು ಸಾರಿ ಹೋದರೆ ಸಾಲದು, ನಾಲ್ಕೈದು ಬಾರಿ ಹೋಗಬೇಕು, ಒಮ್ಮೆ ಹೋಗಿ ಬರಲು ಸಾಕಷ್ಟು ದುಡ್ಡು […]

ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ

ತ್ತನೆ ಬೀಜ, ಗೊಬ್ಬರಗಳ ಸಂಗ್ರಹ ಪೂರ್ವ ಸಿದ್ಧತೆ ಹೀಗಿರಲಿಮಳೆಗಾಲದ ಸಿದ್ಧತೆ ಒಂದು ರೀತಿಯಲ್ಲಿ ಯುದ್ಧ ಸಿದ್ಧತೆಯೇ ಸರಿ! ಪ್ರಕೃತಿಯ ‘ಮುನಿಸು’ ‘ರೌದ್ರಾವತಾರ’ ಎದುರಿಸುವುದೆಂದರೆ ಸಣ್ಣ ಮಾತಲ್ಲ ತಾನೆ!? ಹಾಗಾಗಿ ಮಳೆಗಾಲದ ಪೂರ್ವ ಸಿದ್ಧತೆಗೆ ಒತ್ತು ನೀಡುವುದು ಬಹಳ ಮುಖ್ಯ. ಅದರಲ್ಲೂ ‘ಈ ಬಾರಿ ವಿಪರೀತ ಮಳೆಯಾದರೆ ಏನು ಮಾಡಬೇಕು?’ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಆ ಕಲ್ಪನೆಯಲ್ಲೇ ನಮ್ಮ ಸಿದ್ಧತೆ ನಡೆಯಬೇಕಾಗುತ್ತದೆ. ಒಂದು ಸಣ್ಣ ಉಡಾಫೆಯೂ ಇಲ್ಲಿ ಭಾರೀ ಬೆಲೆ ತೆರುವಂತೆ ಮಾಡಬಹುದು. ಉದಾಹರಣೆಗೆ ತೋಟದಲ್ಲಿ ಅಥವಾ ಹೊಲದ ಬದುಗಳಲ್ಲಿ […]