ವಿದೇಶಿ ವಲಸೆ ಪಕ್ಷಿಗಳ ವಾಸಸ್ಥಾನ ರಾಮ್ಸರ್

ಪಕ್ಷಿಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹತ್ತಾರು ದೇಶಗಳ ಬಗೆ ಬಗೆಯ ಪಕ್ಷಿಗಳು ಒಂದೆಡೆ ಕಾಣಸಿಕ್ಕರಂತೂ ಅದು ಕಣ್ಣಿಗೊಂದು ಹಬ್ಬ. ವಿದೇಶಿ ಪಕ್ಷಿಗಳು ತಂಗುವ ಅಪೂರ್ವ ತಾಣವೊಂದಕ್ಕೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇಲ್ಲಿದೆ.ಗದಗ ತಾಲೂಕಿನ ಶಿರಹಟ್ಟಿಯಿಂದ ಎಂಟು ಕಿ.ಮೀ. ದೂರದ ಮಾಗಡಿ ಗ್ರಾಮದಲ್ಲಿ 134.15 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ವಿಶಾಲವಾದ ಮಾಗಡಿ ಕೆರೆಯೊಂದಿದೆ. ನವೆಂಬರ್‌ನಿoದ ಮಾರ್ಚ್ವರೆಗೆ ಇದು ಪಕ್ಷಿಪ್ರಿಯರ ಹಾಟ್‌ಸ್ಪಾಟ್. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಮಂಗೋಲಿಯಾ, ಸೈಬೇರಿಯಾ, ಆಸ್ಟ್ರೇಲಿಯಾ, ಚೀನಾ, ನೈಜಿರಿಯಾ, ಟಿಬೆಟ್, ಪಾಕಿಸ್ತಾನ, […]

ಉಡುಗೊರೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಉಡುಗೊರೆಗಳೆಂದರೆ ಎಲ್ಲರಿಗೂ ಇಷ್ಟ. ಮಕ್ಕಳಂತೂ ಹುಟ್ಟುಹಬ್ಬದ ಉಡುಗೊರೆಗಾಗಿ ವರ್ಷವಿಡೀ ಕಾಯುತ್ತಿರುತ್ತಾರೆ. ಹಾಗೆಯೇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ, ಒಳ್ಳೆಯ ಕೆಲಸ ಮಾಡಿದ್ರೆ ‘ಶಹಬ್ಬಾಸ್ ಗಿರಿ’ಯ ಜೊತೆಗೆ ಒಂದು ಚಿಕ್ಕ ಉಡುಗೊರೆಯ ನಿರೀಕ್ಷೆಯೂ ಇದ್ದೆ ಇರುತ್ತದೆ. ಮನೆ ಮಂದಿಯ ಹುಟ್ಟುಹಬ್ಬ, ಮದುವೆಗೆ ಬರುವ ಉಡುಗೊರೆಗಳ ಪೇಪರ್ ಅನ್ನು ತೆರೆದು ಅವುಗಳನ್ನು ನೋಡುವ ತವಕ ಎಲ್ಲರಲ್ಲೂ ಇರುತ್ತದೆ. ಕೆಲವೊಮ್ಮೆ ನಮ್ಮ ಮನೆ ಪಕ್ಕದವರು, ಹತ್ತಿರದ ಸಂಬoಧಿಕರು, ಆತ್ಮೀಯ ಸ್ನೇಹಿತರು ಕೊಟ್ಟ ದೊಡ್ಡ ಉಡುಗೊರೆಯೂ ಸಣ್ಣದೆಂದೆನಿಸುವುದಿದೆ. […]

ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ

ಅನಿಲ್ ಕುಮಾರ್ ಎಸ್‍.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ಶ್ರದ್ಧಾಕೇಂದ್ರಗಳ ಸ್ವಚ್ಛತೆ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳಲಾಯಿತು. ಈ ಸಂಚಿಕೆಯಲ್ಲಿ ಪೂಜ್ಯ ಹೆಗ್ಗಡೆಯವರು ಗ್ರಾಮೀಣ ಶಿಕ್ಷಣಕ್ಕೆ ಯೋಜನೆಯ ಮೂಲಕ ಕೈಗೊಂಡ ಅಮೂಲಾಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ತಿಳಿದುಕೊಳ್ಳೋಣ.ನಾಲ್ಕು ದಶಕಗಳ ಹಿಂದೆ ಅಂದರೆ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾರಂಭದ ದಿನಗಳಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಸಿಗುತ್ತಿದ್ದ ಶಿಕ್ಷಣ ಸೌಲಭ್ಯಗಳ ಬಗ್ಗೆ ಇಂದು ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ. ಬಹುತೇಕ ಹಳ್ಳಿಗಳಲ್ಲಿ ಶಾಲೆಗಳೇ ಇರಲಿಲ್ಲ. ಇನ್ನು ಅರೆಪಟ್ಟಣ ಪ್ರದೇಶಗಳಲ್ಲಿ ಶಾಲೆಗಳಿದ್ದರೂ, ಅಲ್ಲಿಗೆ ಹಳ್ಳಿಗಳಿಂದ ಬಡ […]

ಕನ್ನಡದ ಕಂಪು

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ನಾಡಗೀತೆ ನೂರು ವರ್ಷಗಳ ಸಂಭ್ರಮದಲ್ಲಿದೆ. ಪ್ರತಿಯೊಂದು ನಾಡಿಗೂ ಅಲ್ಲಿನ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯೇ ಜೀವಾಳ. ನಮ್ಮ ಕನ್ನಡ ನಾಡು ಕೂಡ ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ಊರು, ಬೆಟ್ಟಗಳು, ದೇವಾಲಯ ಒಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿನ ಕಲೆಗಳು ನಮ್ಮ ಪೂರ್ವಜರ ಜೀವನದ ನಂಬಿಕೆ, ಪರಂಪರೆ, ಮೌಲ್ಯಗಳ ಕಥೆಗಳನ್ನು ಹೇಳುತ್ತವೆ. ಹಾಗಾಗಿ ‘ಕನ್ನಡ ನಾಡು’ ಎಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ, ಬದಲಾಗಿ ಕನ್ನಡಿಗರ ಜೀವಂತಿಕೆಯ ದರ್ಶನವಾಗಿದೆ.ಕನ್ನಡ ನಾಡಿನ […]

ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ ಪ್ರಶಸ್ತಿ

ಅನಿಲ್ ಕುಮಾರ್ ಎಸ್.ಎಸ್. ಭಾರತೀಯ ರಿಸರ್ವ್ ಬ್ಯಾಂಕ್ ಅನುವು ಮಾಡಿಕೊಟ್ಟಿರುವಂತೆ ‘ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ’ (Business Correspondence) ಆಗಿ ಸೇವೆಗೈಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ದೇಶದ ಬ್ಯಾಂಕಿoಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ (Chamber Of MSME)’ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎo.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ’ ಲಭಿಸಿದೆ. ಇದೊಂದು ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ದೇಶದಲ್ಲಿ […]

ಉಡುಗೊರೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಗುಟ್ಟು ಯಾಕೆ?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಂಡ-ಹೆಂಡತಿ, ಅಪ್ಪ-ಮಗ, ತಾಯಿ-ಮಗಳು ಹೀಗೆ ಅತ್ಯಂತ ನಿಕಟ ಸಂಬಂಧಗಳ ಮಧ್ಯೆಯೂ ಹಲವಾರು ಹೇಳಲಾಗದ, ಹೇಳಬಾರದ ಗುಟ್ಟುಗಳು ಅಡಗಿರುತ್ತವೆ. ಗುಟ್ಟುಗಳನ್ನು ಬಚ್ಚಿಟ್ಟುಕೊಳ್ಳುವವ ಬುದ್ಧಿವಂತ. ಗುಟ್ಟುಗಳನ್ನು ನಾವೇ ಗುಟ್ಟಾಗಿರಿಸಿಕೊಳ್ಳುವುದು ಬುದ್ಧಿವಂತಿಕೆ. ಆದರೆ ಇನ್ನೊಬ್ಬರು ತಮ್ಮ ಗುಟ್ಟುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಭಾವಿಸುವುದು ಮೂರ್ಖತನ. ತನ್ನ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಬಹುದೆಂಬ ಸಂದೇಹದಲ್ಲಿ ‘ಯಾರಲ್ಲಿ ಹೇಳಬಾರದೆಂದು’ ಭಾಷೆ ತೆಗೆದುಕೊಂಡು ಇತರರಲ್ಲಿ ಗುಟ್ಟಾಗಿ ಹೇಳಿದ ಗುಟ್ಟುಗಳು ಎಂದೂ ಗುಟ್ಟಾಗಿ ಉಳಿಯುವುದಿಲ್ಲ. ಇನ್ನೊಬ್ಬನ ಕಿವಿಯಲ್ಲಿ ಗುಟ್ಟಾಗಿ ಹೇಳಿದ ವಿಷಯ ಕ್ಷಣಾರ್ಧದಲ್ಲಿ ಹತ್ತಿಪ್ಪತ್ತು […]

ಶ್ರದ್ಧಾಕೇಂದ್ರಗಳ ಸ್ವಚ್ಛತೆಯೆಂಬ ವಿನೂತನ ಕಲ್ಪನೆ

ಅನಿಲ್ ಕುಮಾರ್ ಎಸ್‍.ಎಸ್.,ಕಾರ್ಯನಿರ್ವಾಹಕ ನಿರ್ದೇಶಕರು ಧಾರ್ಮಿಕ ಶ್ರದ್ಧಾಕೇಂದ್ರಗಳು ಮನುಕುಲದ ಬದುಕಿನಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಒಂದು ಶ್ರೇಷ್ಠ ಜೀವನ ಶೈಲಿಗೆ ಪ್ರೇರಣೆ ನೀಡುವುದಲ್ಲದೆ ಆಧ್ಯಾತ್ಮಿಕತೆಯ ಮೂಲಕ ಆತ್ಮವಿಶ್ವಾಸ, ಸ್ಥೈರ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳು ಸ್ವಚ್ಛ, ಸುಂದರವಾಗಿರಬೇಕೆಂಬುವುದನ್ನು ಅನೇಕ ದಶಕಗಳಿಂದ ಆಶಿಸಿಕೊಂಡು ಕಾರ್ಯರೂಪಕ್ಕಿಳಿಸಿದವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು. ಆದುದರಿಂದಲೇ ‘ಇಂಡಿಯಾ ಟುಡೇ’ ನಿಯತಕಾಲಿಕ ಪತ್ರಿಕೆ ಧರ್ಮಸ್ಥಳವನ್ನು ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂದು ಗುರುತಿಸಿ 2013ರಲ್ಲಿ ‘ರಾಷ್ಟ್ರೀಯ ಸಫಾಯಿಗಿರಿ’ […]

ಶಿಕ್ಷಣಕ್ಕೆ ಡಿಜಿಟಲ್‌ ಸ್ಪರ್ಶ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹುಟ್ಟಿದ ಕ್ಷಣದಿಂದ ಆರಂಭವಾಗುವ ‘ಕಲಿಕೆ’ ಜೀವನದ ಕೊನೆ ಕ್ಷಣದವರೆಗೂ ನಿಲ್ಲುವುದಿಲ್ಲ. ಕಲಿಕೆಯಿಂದ ಹೊಸ ಅನುಭವಗಳು ದೊರೆಯುತ್ತಿರುತ್ತದೆ. ‘ಅಮ್ಮ’ ಎಂಬ ತೊದಲು ನುಡಿಯಿಂದ ಪ್ರಾರಂಭವಾಗಿ ಮಗು ತನ್ನ ತಾಯಿ-ತಂದೆ, ಅಜ್ಜ ಅಜ್ಜಿಯಿಂದ ಮಾತಿನ ಜೊತೆಗೆ ಸಂಸ್ಕಾರ, ಗುಣ-ನಡತೆಯನ್ನು ಕಲಿಯುತ್ತದೆ.ಮಗು ಕುತೂಹಲದಿಂದ ಪ್ರಪಂಚವನ್ನು ನೋಡುತ್ತ, ಕೇಳುತ್ತ, ಸ್ಪರ್ಶಿಸುತ್ತ ಹಾಗೂ ಅನುಭವಿಸುತ್ತ ಕಲಿಯಲು ಆರಂಭಿಸುತ್ತದೆ. ಉದಾಹರಣೆಗೆ ಮಕ್ಕಳಿಗೆ ಸುತ್ತಮುತ್ತಲಿನ ಪರಿಸರದಲ್ಲಿರುವ ಬಣ್ಣ, ಆಕಾರ, ಚಲನೆ, ಮರದ ಮೇಲಿರುವ ಹಕ್ಕಿ ಅಥವಾ ಟಿ.ವಿ.ಯಲ್ಲಿ ಬರುವ ಕಾರ್ಟೂನ್ ಕೂಡ […]

ಹೊಸ ವರ್ಷಾಚರಣೆ ಪಾರ್ಟಿ‍ಯ ಬದಲು ಪರಿರ್ತನೆಯ ದಿನವಾಗಲಿ

ಶ್ರೀ ಅನಿಲ್‍ ಕುಮಾರ್ ಎಸ್‍.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಾಲಮಾನ ಪರಿಗಣನೆ ವಿಶ್ವದಾದ್ಯಂತ ವಿಭಿನ್ನವಾಗಿದೆ. ಹೊಸ ಸಂವತ್ಸರದ ಪ್ರಾರಂಭದ ದಿನದಿಂದ ಹಿಡಿದು ಅವುಗಳನ್ನು ಸ್ವಾಗತಿಸುವ, ಆಚರಿಸುವ ವಿಧಿವಿಧಾನದಲ್ಲೂ ಪ್ರಪಂಚದಾದ್ಯಂತ ಬಹಳಷ್ಟು ವೈವಿಧ್ಯಗಳಿವೆ. ಹಾಗೆಯೇ ವೈವಿಧ್ಯತೆಯ ಪರಮೋಚ್ಛ ರಾಷ್ಟçವಾದ ಭಾರತದಲ್ಲಿ ಹೊಸ ವರ್ಷಾಚರಣೆ ರಾಜ್ಯದಿಂದ ರಾಜ್ಯಗಳಲ್ಲಿ ವಿಭಿನ್ನವಾಗಿ ನಡೆಯುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೂತನ ಸಂವತ್ಸರದ ಆರಂಭ ಪ್ರಕೃತಿಯ ನಿಯಮಗಳಿಗೆ ಬಹಳಷ್ಟು ಸನಿಹವಾಗಿದೆ. ಪ್ರಕೃತಿಯು ಎಲ್ಲ ಆಯಾಮಗಳಲ್ಲಿ ನವನವೀನತೆಯನ್ನು ಹೊಂದುವುದು ಚೈತ್ರ ಮಾಸದಲ್ಲಿಯೇ.ಪ್ರಪಂಚದ ಹೆಚ್ಚು ರಾಷ್ಟçಗಳು ಜನವರಿ 1 ಅನ್ನು […]