ಎಸ್ಸೆಸೆಲ್ಸಿ ಬಳಿಕ ಮುಂದೇನು?

ಗುರುಪ್ರಸಾದ್ ಟಿ. ಎನ್.

ಹತ್ತನೇ ತರಗತಿ ಎಂದರೆ ವಿದ್ಯಾರ್ಥಿಯೊಬ್ಬನ ಜೀವನದಲ್ಲಿ ಬದಲಾವಣೆಯ ಪರ್ವಕಾಲ. ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಭೇಷ್ ಅನಿಸಿಕೊಳ್ಳುವ ತವಕ ಒಂದೆಡೆಯಾದರೆ, ಮುಂದಿನ ಕಾಲೇಜು ಜೀವನದ ಬಗ್ಗೆ ಹತ್ತಾರು ಕಲ್ಪನೆಗಳು, ಗೊಂದಲಗಳು. ಇಲ್ಲಿ ವಿದ್ಯಾರ್ಥಿ ಮಾಡುವ ಆಯ್ಕೆ ಆತನ ಕಲಿಕೆ ಮತ್ತು ಆತನ ವೃತ್ತಿ ಜೀವನದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ಎಸ್ಸೆಸೆಲ್ಸಿ ಬಳಿಕ ವಿದ್ಯಾರ್ಥಿ ಹಾಗೂ ಪೋಷಕರ ಮುಂದಿರುವ ಕೆಲವು ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಎಸ್ಸೆಸೆಲ್ಸಿ ಮುಗಿಸಿದ ವಿದ್ಯಾರ್ಥಿಯ ಮುಂದೆ ಮುಖ್ಯವಾಗಿ ಮೂರು ಆಯ್ಕೆಗಳಿರುತ್ತವೆ. ಆತ/ಆಕೆ ತನ್ನ ಆಸಕ್ತಿಗೆ ಅನುಗುಣವಾಗಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗವನ್ನು ಆರಿಸಿಕೊಳ್ಳಬಹುದು.

ವಿಜ್ಞಾನ ವಿಭಾಗ :

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ). ಭೌತಶಾಶಾಸ್ತ್ರ ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ (ಪಿಸಿಎಂಸಿ). ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಿತ ಮತ್ತು ಇಲೆಕ್ಟ್ರಾನಿಕ್ಸ್ (ಪಿಸಿಎಂಇ). ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಸ್ಟಾಟಿಸ್ಟಿಕ್ಸ್ (ಪಿಸಿಎಂಎಸ್).

ಪಿಯುಸಿಯಲ್ಲಿ ವಿಜ್ಞಾನ ಓದಿದವರು ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ), ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮೊದಲಾದ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಅವಕಾಶ ಪಡೆಯಬಹುದು ಅಥವಾ ಬಿಸಿಎ, ಐಟಿ ಮತ್ತು ಸಾಫ್ಟ್ವೇರ್, ಫಾರ್ಮಸಿ, ಆಂಥ್ರಪಾಲಜಿ, ಆಕ್ಯುಪೇಶನಲ್ ಥೆರಪಿ, ಫಿಸಿಯೋಥೆರಪಿ, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಎಕಾನಾಮಿಕ್ಸ್, ಜುವಾಲಜಿ/ಬಾಟನಿ, ಬಯೋಕೆಮಿಸ್ಟ್ರಿ, ಮೈಕ್ರೋಬಯೋಲಜಿ, ಬಯೋಮೆಡಿಕಲ್ ಸೈನ್ಸ್, ಬಯೋಟೆಕ್ನಾಲಜಿ, ಕೆಮಿಸ್ಟ್ರಿ, ಫಿಸಿಕ್ಸ್ ಡಿಗ್ರಿ ಕೋರ್ಸ್ಗಳನ್ನು ಓದಬಹುದು.

ಮೆಡಿಕಲ್ ಕೋರ್ಸ್ಗಳಲ್ಲಿ ಆಸಕ್ತಿ ಉಳ್ಳವರು ವಿಜ್ಞಾನ ಪಿಯುಸಿ ಓದಿದವರು ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಇಎಂಎಸ್, ಹೋಮಿಯೋಪತಿ, ಯುನಾನಿ ಮತ್ತು ಇತರೆ ವೈದ್ಯಕೀಯ ಕೋರ್ಸ್ಗಳನ್ನು ಓದಬಹುದು. ಇಂಜಿನಿಯರಿoಗ್ ಆದರೆ ಸಿವಿಲ್, ಮೆಕ್ಯಾನಿಕ್ಸ್, ಸಿಎಸ್, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ ಮತ್ತು ಇತರೆ ವಿಭಾಗಗಳಲ್ಲಿ ಬಿಇ, ಬಿ.ಟೆಕ್ ಹಾಗೂ ಬಿ ಆರ್ಚ್ ಅಧ್ಯಯನ ಮಾಡಬಹುದು.

ಕಲಾ ವಿಭಾಗ :

ಇನ್ನು ಭಾಷಾ ವಿಷಯಗಳು ಅಥವಾ ಕಲೆಯಲ್ಲಿ ಆಸಕ್ತಿ ಇರುವವರು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿದರೆ ಪತ್ರಿಕೋದ್ಯಮ, ಪ್ರವಾಸೋದ್ಯಮ, ರಾಜ್ಯಶಾಸ್ತç, ಡಿಸೈನಿಂಗ್, ಭೂಗೋಳಶಾಸ್ತ್ರ ಮೊದಲಾದ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶ ದೊರೆಯುತ್ತದೆ. ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ-2020 ಪದವಿಯಲ್ಲಿ ಮುಖ್ಯ ವಿಷಯಗಳ ಜೊತೆಗೆ ಹೆಚ್ಚುವರಿ ವಿಷಯಗಳನ್ನು ಕಲಿಯುವ ಅವಕಾಶ ಒದಗಿಸುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗೂ ಕಲಾ ವಿಭಾಗ ಹೆಚ್ಚು ಸೂಕ್ತ. ಇಷ್ಟಲ್ಲದೆ ಪಿಯುಸಿ ಮುಗಿಸಿ ಇಂಜಿನಿಯರಿoಗ್ ವಿಭಾಗದಲ್ಲಿ ಡಿಪ್ಲೊಮಾ ಮಾಡುವ ಅವಕಾಶ ಕಲಾ ಮಾಧ್ಯಮದ ವಿದ್ಯಾರ್ಥಿಗಳಿಗಿದೆ.

ವಾಣಿಜ್ಯ ವಿಭಾಗ :

ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇರುವವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕೋರ್ಸ್ ಮಾಡಿದರೆ ಹಣ ಹೂಡಿಕೆ, ಬ್ಯಾಂಕಿoಗ್, ಫಿನಾನ್ಷಿಯಲ್ ಅಡ್ವೈಸರ್ ಮತ್ತು ಚಾರ್ಟೆಡ್ ಅಕೌಂಟಿoಗ್ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬಹುದು. ಇನ್ನು ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಬೇಕು ಎಂದು ಅಂದುಕೊoಡಿರುವ ವಿದ್ಯಾರ್ಥಿಗಳು ಕಾಮರ್ಸ್ ವಿಷಯವನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಡಿಪ್ಲೋಮಾ ಇನ್ ಇಂಜಿನಿಯರಿಗ್/ ಪಾಲಿಟೆಕ್ನಿಕ್ ಡಿಪ್ಲೋಮಾ

ವಿದ್ಯಾರ್ಥಿಗಳು ಇಂಜಿನಿಯರ್ ಆಗಬೇಕು ಎನ್ನುವ ಆಸೆಯನ್ನು ಹೊಂದಿದ್ದಲ್ಲಿ ಎಸ್ಸೆಸೆಲ್ಸಿ ನಂತರ ಡಿಪ್ಲೋಮಾ ಇನ್ ಇಂಜಿನಿಯರಿoಗ್ ಕೋರ್ಸ್ ಕಲಿಯಬಹುದು.

ಇಂಜಿನಿಯರಿoಗ್‌ನಲ್ಲಿ ನೀಡಲಾಗುವ ಡಿಪ್ಲೋಮಾ ಕೋರ್ಸ್ಗಳು

ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿoಗ್. ಡಿಪ್ಲೋಮಾ ಇನ್ ಇಲೆಕ್ಟಿçಕಲ್ ಇಂಜಿನಿಯರಿoಗ್.

>ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿoಗ್

> ಡಿಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರಿoಗ್ ಹೀಗೆ ಹಲವು ಆಯ್ಕೆಗಳಿವೆ.
>ಇಂಜಿನಿಯರಿoಗ್‌ನಲ್ಲಿ ಡಿಪ್ಲೋಮ ಮಾತ್ರವಲ್ಲದೇ, ಪ್ಯಾರಾಮೆಡಿಕಲ್ ಡಿಪ್ಲೋಮಾವನ್ನೂ ಓದಬಹುದು. ಇಲ್ಲೂ ವಿದ್ಯಾರ್ಥಿಗಳಿಗೆ ಸಾಕಷ್ಟು ಆಯ್ಕೆಗಳಿವೆ.
> ಡಿಪ್ಲೋಮಾ ಇನ್ ಫಾರ್ಮಸಿ.

>ಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರಿoಗ್ ಹೀಗೆ ಹಲವು ಆಯ್ಕೆಗಳಿವೆ.
>ಇಂಜಿನಿಯರಿoಗ್‌ನಲ್ಲಿ ಡಿಪ್ಲೋಮ ಮಾತ್ರವಲ್ಲದೇ, ಪ್ಯಾರಾಮೆಡಿಕಲ್ ಡಿಪ್ಲೋಮಾವನ್ನೂ ಓದಬಹುದು. ಇಲ್ಲೂ ವಿದ್ಯಾರ್ಥಿಗಳಿಗೆ ಸಾಕಷ್ಟು ಆಯ್ಕೆಗಳಿವೆ.
> ಡಿಪ್ಲೋಮಾ ಇನ್ ಫಾರ್ಮಸಿ .

> ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಮಿಡ್‌ವೈಫರಿ.

> ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನಿಂಗ್.

> ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್.

> ಡಿಪ್ಲೋಮಾ ಇನ್ ಪ್ರಿಂಟಿoಗ್ ಟೆಕ್ನಾಲಜಿ.

> ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ .

> ಡಿಪ್ಲೋಮಾ ಇನ್ ಲೆದoರ್ ಟೆಕ್ನಾಲಜಿ.

> ಡಿಪ್ಲೋಮಾ ಇನ್ ಪೌಲ್ಟಿç

> ಡಿಪ್ಲೋಮಾ ಇನ್ ಮ್ಯೂಸಿಕ್ .

>ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.

>ಡಿಪ್ಲೋಮಾ ಇನ್ ಫುಡ್ ಟೆಕ್ನಾಲಜಿ.

> ಡಿಪ್ಲೋಮಾ ಇನ್ ಟೆಕ್ಸ್ಟೈಲ್ ಇಂಜಿನಿಯರಿoಗ್. ಡಿಪ್ಲೋಮಾ ಮಾಡಿದ ವಿದ್ಯಾರ್ಥಿಗಳು ಇಂಜಿನಿಯರಿoಗ್‌ನಲ್ಲಿ ಎರಡನೇ ವರ್ಷಕ್ಕೆ ಲ್ಯಾಟರಲ್ ಎಂಟ್ರಿ ಪಡೆದುಕೊಳ್ಳಬಹುದು. ಬಿ. ಇ. ಮುಗಿದ ನಂತರ ಬಿ.ಟೆಕ್ ಮಾಡುವ ಅವಕಾಶವಿದೆ.
ಐಟಿಐ ಕೋರ್ಸ್ಗಳು :
ಎಸ್ಸೆಸೆಲ್ಸಿ ಬಳಿಕ ಐ.ಟಿ.ಐ. ಕೋರ್ಸ್ ಅನ್ನು ಮಾಡಬಹುದಾಗಿದೆ. ಐಟಿಐನಲ್ಲಿ (ಇಂಡಸ್ಟಿçಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಉದ್ಯೋಗಕ್ಕೆ ಸಂಬoಧಪಟ್ಟ ಹಲವು ಕೋರ್ಸ್ಗಳಿವೆ. ಐಟಿಐ ಕೋರ್ಸ್ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತದೆ. ಐಟಿಐ, 1 ರಿಂದ 2 ವರ್ಷಗಳ ಕಾಲ ಅಧ್ಯಯನ ಮಾಡುವ ಕೋರ್ಸ್ ಆಗಿದ್ದು, ಇಲ್ಲಿ ಲಭ್ಯವಿರುವ ಕೆಲವು ಆಯ್ಕೆಗಳೆಂದರೆ,
> ಐಟಿಐ ಇಲೆಕ್ಟ್ರಿಶಿಯನ್.

> ಐಟಿಐ ಪ್ಲಂಬರ್.
> ಐಟಿಐ ವೆಲ್ಡರ್.

> ಐಟಿಐ ಟರ್ನರ್.

>ಐಟಿಐ ಮೆಕ್ಯಾನಿಕ್
>ಐಟಿಐ ಮೆಕ್ಯಾನಿಸ್ಟ್.

> ಐಟಿಐ ಸೋಲಾರ್ ಎನರ್ಜಿ ಟೆಕ್ನಾಲಜಿ.
> ಐಟಿಐ ಲ್ಯಾಬೊರೇಟರಿ ಅಸಿಸ್ಟೆಂಟ್
ಜಾಬ್ ಓರಿಯೆಂಟೆಡ್ ಕೋರ್ಸ್ :
ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ಹೊರತುಪಡಿಸಿ ಇನ್ನಿತರೆ ಕಾಲೇಜುಗಳು ಅರು ತಿಂಗಳು ಅಥವಾ ಒಂದು ವರ್ಷ ಅವಧಿಯ ಜಾಬ್ ಓರಿಯೆಂಟೆಡ್ ಕೋರ್ಸ್ಗಳನ್ನು ನೀಡುತ್ತಿವೆ. ಅವುಗಳಲ್ಲಿ ತ್ರೀಡಿ ಅನಿಮೇಶನ್, ಬ್ಯೂಟಿ ಕಲ್ಚರ್, ಸೈಬರ್ ಸೆಕ್ಯೂರಿಟಿ, ಫೈರ್ ಆಂಡ್ ಸೇಫ್ಟಿ, ಗ್ರಾಫಿಕ್ ಡಿಸೈನಿಂಗ್, ಹೊಟೇಲ್ ಮ್ಯಾನೇಜ್ಮೆಂಟ್, ಫೈನ್ ಆರ್ಟ್ಸ್, ಫೋಟೋಗ್ರಫಿ ಹೀಗೆ ಹಲವು ಆಕರ್ಷಕ ಆಯ್ಕೆಗಳಿವೆ.
ಸರ್ಟಿಫಿಕೇಟ್ ಕೋರ್ಸ್ಗಳು :
ಎಸ್ಸೆಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಕೆಲವು ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಬಹುದು ಅವುಗಳೆಂದರೆ,

>ಸರ್ಟಿಫಿಕೇಟ್ ಇನ್ ವೆಬ್ ಡಿಸೈನಿಂಗ್ಟಿ.

> ಸರ್ಟಿಫಿಕೇಟ್ ಇನ್ ಎಥಿಕಲ್ ಹ್ಯಾಕಿಂಗ್ .

>ಸರ್ಟಿಫಿಕೇಟ್ ಇನ್ ಗ್ರಾಫಿಕ್ ಡಿಸೈನ್

>ಸರ್ಟಿಫಿಕೇಟ್ ಇನ್ ಆ್ಯಪ್ ಡೆವಲಪ್‌ಮೆಂಟ್ ಮೊದಲಾದ ಕೋರ್ಸ್ಗಳನ್ನು ಕಲಿತು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು. ಇವುಗಳ ಕುರಿತ ಹೆಚ್ಚಿನ ಮಾಹಿತಿ ಅಂತರ್ಜಾಲದಲ್ಲಿ ಬೆರಳ ತುದಿಯಲ್ಲಿ ಲಭ್ಯವಿದೆ.
ಇಷ್ಟಲ್ಲದೆ, ಎಸ್ಸೆಸೆಲ್ಸಿ ಆದವರಿಗೆ ಸರ್ಕಾರಿ, ರೈಲ್ವೇ, ರಕ್ಷಣೆ ಹೀಗೆ ಕೆಲವು ವಿಭಾಗಗಳಲ್ಲಿ ನೇರವಾಗಿ ಉದ್ಯೋಗ ಪಡೆಯುವ ಅವಕಾಶವೂ ಇದೆ. ಉದಾಹರಣೆಗೆ ಸರ್ಕಾರ ಎಸ್ಸೆಸೆಲ್ಸಿ ಆದವರನ್ನು ಇನ್ಶೂರೆನ್ಸ್ ಅಡ್ವೈಸರ್, ಸ್ಟೆನೋಗ್ರಾಫರ್, ಕೆಳ ಹಂತದ ಕ್ಲರ್ಕ್ ಮೊದಲಾದ ಹುದ್ದೆಗಳಿಗೆ ನೇಮಿಸಿಕೊಳ್ಳುತ್ತದೆ. ರೈಲ್ವೇಯಲ್ಲಿ ಟೈಪಿಸ್ಟ್, ಕಮರ್ಷಿಯಲ್ ಕ್ಲರ್ಕ್, ಟಿಕೆಟ್ ಎಕ್ಸಾಮಿನರ್, ಟ್ರೈನಿಂಗ್ ಕ್ಲರ್ಕ್ಗಳಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ರಕ್ಷಣಾ ವಿಭಾಗದಲ್ಲೂ ಸೋಲ್ಜರ್ ಕ್ಲರ್ಕ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್ ಹೀಗೆ ಕೆಲವೊಂದು ಹುದ್ದೆಗಳು ಎಸ್ಸೆಸೆಲ್ಸಿ ಆದವರಿಗೂ ದೊರೆಯುತ್ತದೆ. ಇಷ್ಟಲ್ಲದೆ ಹತ್ತನೇ ತರಗತಿ ಓದಿ ದೂರ ಶಿಕ್ಷಣದ ಮೂಲಕ ಕೆಲವು ಸರ್ಟಿಫಿಕೇಟ್ ಕೋರ್ಸ್ಗಳನ್ನು ಮತ್ತು ಡಿಪ್ಲೊಮಾವನ್ನು ಕಲಿಯುವ ಅವಕಾಶವೂ ವಿದ್ಯಾರ್ಥಿಗಳಿಗಿದೆ.
ಇದು ಹತ್ತರ ನಂತರ ಮತ್ತೇನು ಎಂಬ ಪ್ರಶ್ನೆಗೆ ಸಂಕ್ಷಿಪ್ತ ಉತ್ತರವಷ್ಟೆ. ವಿದ್ಯಾರ್ಥಿಗಳ ಇಚ್ಛೆಗೆ ಅನುಗುಣವಾಗಿ, ಆರ್ಥಿಕ ಪರಿಸ್ಥಿತಿಯನ್ನೂ ಗಮನಿಸಿಕೊಂಡು ಯೋಚಿಸಿ, ಚರ್ಚಿಸಿ ನಿರ್ಧಾರ ತೆಗೆದುಕೊಂಡರೆ ಭವಿಷ್ಯಕ್ಕೆ ಒಳ್ಳೆಯದು. ಯಶಸ್ಸು ವಿಷಯಗಳ ಆಯ್ಕೆಯೊಂದಿಗೆ ಅವರ ಬದ್ಧತೆ, ಆತ್ಮವಿಶ್ವಾಸದ ಮೇಲೂ ನಿರ್ಧರಿತವಾಗಿರುತ್ತದೆ.

ಬಡವರ ಪಾಲಿನ ಆಶಾಕಿರಣ ಜನೌಷಧ
“ತಾಯಿಯ ಬಿ.ಪಿ. ಮಾತ್ರೆಗೆ ತಿಂಗಳಿಗೆ ಒಂದು ಸಾವಿರದ ಇನ್ನೂರು ರೂಪಾಯಿ ತಗಲುತ್ತಿತ್ತು. ನನಗೆ ಸಿಗುವ ೬೦೦ ರೂಪಾಯಿ ಸಂಬಳದ ಅರ್ಧಭಾಗ ಮೆಡಿಕಲ್‌ನ ಪಾಲಾಗುತ್ತಿತ್ತು. ಇದೀಗ ಇನ್ನೂರ ಹತ್ತು ರೂಪಾಯಿಯಲ್ಲಿ ತಾಯಿಯ ಬಿ.ಪಿ. ಮಾತ್ರೆ ದೊರೆಯುತ್ತದೆ” ಎನ್ನುವುದು ದಿವ್ಯಾಳೊಬ್ಬಳ ಮಾತಲ್ಲ.
ಜನೌಷಧ ಕೇಂದ್ರಗಳಿಗೆ ಬರುವ ಮಂದಿಯಲ್ಲಿ ಮಾತನಾಡಿದರೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ಕೈಗೆಟುಕಬೇಕು ಎನ್ನುವ ಕೇಂದ್ರ ಸರಕಾರದ ಕಲ್ಪನೆ ಇಂದು ಹೆಚ್ಚಿನ ಕಡೆಗಳಲ್ಲಿ ಸಾಕಾರಗೊಂಡಿದೆ. ಜನೌಷಧ ಕೇಂದ್ರದ ಕುರಿತು ಇರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ದೂರವಾಗಿಸುವ ನಿಟ್ಟಿನಲ್ಲಿ ‘ಪ್ರಧಾನಮಂತ್ರಿ ಜನೌಷಧಿ’ ಪರಿಯೋಜನೆಯ ಕರ್ನಾಟಕ ರಾಜ್ಯದ ನೋಡೆಲ್ ಅಧಿಕಾರಿಯವರನ್ನು ಸಂಪರ್ಕಿಸಿ ಈ ಲೇಖನವನ್ನು ತಯಾರಿಸಲಾಗಿದೆ.
ಗುಣಮಟ್ಟಕ್ಕೆ ಆದ್ಯತೆ ನೀಡುವ ಜನೌಷಧಿ ಕೇಂದ್ರಗಳು
ಪ್ಯಾರಾಸೆಟ್‌ಮೊಲ್, ಆ್ಯಕ್ಷನ್ ೫೦೦, ಸಿಪ್ಲ, ಅಬೋಟ್ ಲೂಪಿನ್ ಮುಂತಾದ ಹೆಸರುಗಳು ಎಲ್ಲರಿಗೂ ಚಿರಪರಿಚಿತ. ಸಾಮಾನ್ಯವಾಗಿ ಜ್ವರ ಬಂದರೆ ನಾವು ಮೆಡಿಕಲ್‌ಗಳಲ್ಲಿ ‘ಪ್ಯಾರಾಸೆಟ್‌ಮೊಲ್ ಅಥವಾ ಆ್ಯಕ್ಷನ್ 500 ಕೊಡಿ’ ಎಂದು ಕೇಳುತ್ತೇವೆ. ಆದರೆ ಇದ್ಯಾವುದು ಮಾತ್ರೆಗಳ ಹೆಸರುಗಳಲ್ಲ. ಬದಲಾಗಿ ಅದು ಮಾತ್ರೆಯನ್ನು ತಯಾರಿಸುವ ಕಂಪನಿಯ ಹೆಸರು. ಈ ಕಂಪನಿಯ ಮಾತ್ರೆಗಳನ್ನು ನೀವು ಹೋಗಿ ಜನೌಷಧ ಕೇಂದ್ರದಲ್ಲಿ ಕೇಳಿದರೆ ದೊರೆಯುವುದಿಲ್ಲ. ಜನೌಷಧಿ ಕೇಂದ್ರದಲ್ಲಿ ಕಂಪನಿಗೆ ಪ್ರಾಧಾನ್ಯತೆ ನೀಡಲಾಗುವುದಿಲ್ಲ. ಬದಲಾಗಿ ಔಷಧಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. WHO ದಿಂದ ಮಾನ್ಯತೆ ಪಡೆದ ಸಿಪ್ಲ, ಅಬೋಟ್, ಪಿಐಎಲ್, ಲೂಪಿನ್‌ನಂತಹ ದೇಶದ ಹೆಸರಾಂತ ಖಾಸಗಿ ಕಂಪನಿಗಳೇ ಔಷಧವನ್ನು ತಯಾರಿಸಿ ಸರಕಾರಕ್ಕೆ ನೀಡುತ್ತಿವೆ.
ಔಷಧಿಗಳ ಜಿಲ್ಲಾವಾರು ಪರೀಕ್ಷೆ
ಜನೌಷಧ ಕೇಂದ್ರಗಳಲ್ಲಿ ದೊರೆಯುವ ಔಷಧಗಳು ಸಾಮಾನ್ಯ ಔಷಧಾಲಯಗಳಲ್ಲಿ ದೊರೆಯುವ ಔಷಧಿಗಳಿಗಿಂತಲೂ ಇಮ್ಮಡಿ ಪ್ರಮಾಣದಲ್ಲಿ ಗುಣಮಟ್ಟದ ಬಗ್ಗೆ, ಅಡ್ಡಪರಿಣಾಮಗಳ ಬಗ್ಗೆ ಪರೀಕ್ಷೆ ನಡೆದು ಜನೌಷಧಿ ಕೇಂದ್ರವನ್ನು ಸೇರುತ್ತಿವೆ. ಮಾತ್ರೆಗಳನ್ನು ತಯಾರಿಸುವ ಕಂಪನಿಗಳ ಎಲ್ಲ ಹಂತದ ಪರೀಕ್ಷೆಗಳು ನಡೆದು ಅವು ಮಾರಾಟ ಮಾಡಬಹುದೆಂದು ಪ್ರಮಾಣಪತ್ರವನ್ನು ಸರಕಾರಕ್ಕೆ ನೀಡಿದ ನಂತರ BPPI ಸರಕಾರದ ಪರವಾಗಿ ಮತ್ತೆ ಆ ಔಷಧಗಳನ್ನು ಪರೀಕ್ಷೆಗೆ ಒಳಪಡಿಸುತ್ತದೆ. ನಂತರ ಆಯಾ ಜಿಲ್ಲೆಯ ವಾತಾವರಣಕ್ಕೆ ಅನುಗುಣವಾಗಿ ಅಲ್ಲಿನವರಿಗೆ ಸೇವಿಸಲು ಯೋಗ್ಯವೇ? ಎಂಬುದನ್ನು ಪರೀಕ್ಷಿಸಲು ಪ್ರತಿ ಜಿಲ್ಲೆಯ ಡ್ರಗ್ಸ್ ಕಂಟ್ರೋಲ್ಸ್ಗೆ ಔಷಧಗಳನ್ನು ಕಳುಹಿಸಿಕೊಡಲಾಗುತ್ತದೆ. ಔಷಧಗಳು ಆ ಜಿಲ್ಲೆಯ ವಾತಾವರಣಕ್ಕೆ, ಆ ಋತುಗಳಿಗೆ ಸರಿ ಹೊಂದುತ್ತವೆಯೆ ಎಂಬುದನ್ನು ಪ್ರಯೋಗಿಸಿ ನೋಡಿ ಕೊನೆಗೆ ಅಲ್ಲಿನ ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ಜನೌಷಧಿ ಕೇಂದ್ರಕ್ಕೆ ನೀಡಲು ಅನುಮತಿ ನೀಡುತ್ತಾರೆ.
ನಿರ್ವಹಣೆ ಹೇಗೆ?
ಭಾರತೀಯ ಔಷಧಶಾಸ್ತçಗಳ ಇಲಾಖೆಯಡಿ BPPI(ಭಾರತೀಯ ಪಿಎಸ್‌ಯುಗಳ ಫಾರ್ಮ ಬ್ಯೂರೋ) ಕಾರ್ಯನಿರ್ವಹಿಸುತ್ತಿದೆ. ಜನೌಷಧ ಕೇಂದ್ರಗಳನ್ನು ಮುನ್ನಡೆಸುವ ಜವಾಬ್ದಾರಿ ಈ ಇಲಾಖೆಯದ್ದು.
ಗಮನಿಸಿರಿ
ವೈದ್ಯರು ನೀಡುವ ಚೀಟಿಯಲ್ಲಿ ನಮೂದಿಸುವ ಕಂಪನಿಗಳ ಮಾತ್ರೆಗಳು ಜನೌಷಧಿ ಕೇಂದ್ರದಲ್ಲಿ ದೊರೆಯುವುದಿಲ್ಲ. ಯಾಕೆಂದರೆ ಆರಂಭದಲ್ಲಿ ಹೇಳಿದಂತೆ ಇಲ್ಲಿ ಕಂಪನಿಗಿoತ ಔಷಧಕ್ಕೆ ಮಹತ್ವ ನೀಡಲಾಗುತ್ತದೆ. ಆದ್ದರಿಂದ ವೈದ್ಯರು ಚೀಟಿಯಲ್ಲಿ ತಿಳಿಸಿದ ಕಂಪನಿಗಿoತ ಉತ್ತಮ ಕಂಪನಿಯ, ಹೆಚ್ಚಿನ ಗುಣಮಟ್ಟದ ಮಾತ್ರೆ, ಔಷಧಗಳು ಜನೌಷಧ ಕೇಂದ್ರಗಳಲ್ಲಿ ದೊರೆಯುತ್ತವೆ. ಜನೌಷಧ ಕೇಂದ್ರಗಳಲ್ಲಿರುವ ಔಷಧಿಗಳ ಬಗ್ಗೆ ಯಾವುದೇ ಸಂದೇಹಗಳಿದ್ದರೂ ಆರ್.ಟಿ.ಐ. ಮೂಲಕ ಅರ್ಜಿ ಸಲ್ಲಿಸಿ ತಯಾರಿಕಾ ಗುಣಮಟ್ಟದ ವರದಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಸರಕಾರವೇ ಹೇಳುವಂತೆ ಇದು ಇತರ ಔಷಧಾಲಯಗಳ ಜೊತೆ ಸ್ಪರ್ಧೆಗಾಗಿ ಯೋಜನೆ ಅಲ್ಲ. ಶ್ರೀಮಂತರಿಗೂ ಅಲ್ಲ. ಬದಲಾಗಿ ಬಡವರಿಗಾಗಿ ಜಾರಿಗೆ ತಂದ ಯೋಜನೆ ಇದಾಗಿದೆ.
ಎರಡು, ಮೂರು ಆರೋಗ್ಯ ಸಮಸ್ಯೆಗಳಿಗೆ ಒಂದೇ ಮಾತ್ರೆ ನೀಡುವಂತಿಲ್ಲ : ಸುಪ್ರೀಂ ಕೋರ್ಟ್
ಸಾಮಾನ್ಯವಾಗಿ ಜ್ವರ, ತಲೆನೋವು, ಶೀತ, ನೆಗಡಿಗಳಿಗೆಂದು ಮೆಡಿಕಲ್‌ಗಳಿಗೆ ಹೋದಾಗ ಒಂದು ಮಾತ್ರೆಯನ್ನು ನೀಡಿ ಅದು ಎಲ್ಲದಕ್ಕೂ ಆಗುತ್ತದೆ ಎನ್ನುತ್ತಾರೆ. ಒಂದು ಮಾತ್ರೆಯಲ್ಲಿ ಒಂದೇ ಬಗೆಯ ರೋಗವನ್ನು ಗುಣಪಡಿಸುವ ಅಂಶಗಳಿರಬೇಕು. ಒಂದೇ ಮಾತ್ರೆಯಲ್ಲಿ ನಾಲ್ಕೈದು ರೋಗಗಳನ್ನು ಗುಣಪಡಿಸುವ ಶಕ್ತಿಗಳಿರಬಾರದು. ಅಂತಹ ಮಾತ್ರೆಗಳು ದೇಹದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತವೆ. ಅವುಗಳ ಮಾರಾಟವನ್ನು ಮಾಡಬಾರದೆಂಬ ತೀರ್ಪನ್ನು ಈ ಹಿಂದೆಯೇ ಸುಪ್ರೀಂ ಕೋರ್ಟ್ ನೀಡಿದೆ. ಇದನ್ನು ಜನೌಷಧಿ ಕೇಂದ್ರ ಅಕ್ಷರಶಃ ಪಾಲಿಸುತ್ತದೆ.
ನೀವು ಪ್ರಯೋಜನ ಪಡೆಯಿರಿ
ನಿಮ್ಮ ಊರಿನಲ್ಲಿರುವ ಜನೌಷಧ ಕೇಂದ್ರದ ಪ್ರಯೋಜನವನ್ನು ನೀವು ಪಡೆಯಿರಿ. ಅಲ್ಲಿರುವ ಔಷಧಗಳ ಬಗ್ಗೆ ಯಾವುದೇ ರೀತಿಯ ಸಂಶಯಪಡುವ ಅಗತ್ಯವಿಲ್ಲ.
ಜನೌಷಧ ಕೇಂದ್ರವನ್ನು ನೀವೂ ತೆರೆಯಬಹುದು
ನೀವು ಜನೌಷಧ ಕೇಂದ್ರವನ್ನು ತೆರೆಯಬಹುದಾಗಿದೆ. ಇದು ಜನಸಾಮಾನ್ಯರ ಪಾಲಿನ ಯೋಜನೆಯಾಗಿದ್ದು ಜನಸಾಮಾನ್ಯರೇ ಇದನ್ನು ಮುನ್ನಡೆಸಬಹುದಾಗಿದೆ. ಕೇಂದ್ರಕ್ಕೆ ಓರ್ವ ‘ಬಿ – ಫಾರ್ಮಾ’ ಶಿಕ್ಷಣ ಪಡೆದವರು ಬೇಕು. ಒಂದು ತಾಲೂಕಿನಲ್ಲಿ ಎಷ್ಟು ಕೇಂದ್ರಗಳನ್ನು ಬೇಕಾದರೂ ತೆರೆಯಬಹುದಾಗಿದೆ. ಜನೌಷಧü ಕೇಂದ್ರದಲ್ಲಿ ಇತರ ಔಷಧಗಳನ್ನು ಇಡುವಂತಿಲ್ಲ. ಕೇಂದ್ರ ತೆರೆಯಲು ಇಚ್ಛಿಸುವವರು ಆನ್‌ಲೈನ್ ಮೂಲಕ ಜಿಲ್ಲಾ ಔಷಧ ನಿಯಂತ್ರಣ ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಮರ್ಪಕವಾಗಿದ್ದರೆ ಆರು ದಿನದೊಳಗಡೆ ಲೈಸೆನ್ಸ್ ದೊರೆಯುತ್ತದೆ.
ಅತೀ ಕಡಿಮೆ ಬೆಲೆ ಅಂದರೆ ತಯಾರಿಕಾ ಬೆಲೆಯಲ್ಲೇ ಬಡವರ ಕೈಗೆ ಔಷಧವನ್ನು ಒದಗಿಸುವ ಈ ಯೋಜನೆ ಬಡವರ ಬದುಕಿಗೆ ಆಧಾರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Facebook
Twitter
WhatsApp
LinkedIn
Telegram

One Response

Leave a Reply

Your email address will not be published. Required fields are marked *